Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ನಿರ್ದೇಶಕನ ಪುತ್ರಿಯಿಂದ ಗಾನಕೋಗಿಲೆಗೆ ಗಾನ ಗೌರವ
ದಕ್ಷಿಣ ಭಾರತದ ಪ್ರಸಿದ್ಧ ಹಿನ್ನಲೆ ಗಾಯಕಿ, ಸಂಗೀತ ಸರಸ್ವತಿ ಎಸ್.ಜಾನಕಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಭಾರತ ಕಂಡ ಶ್ರೇಷ್ಠ ಹಿನ್ನಲೆ ಗಾಯಕಿ, ಗಾನಕೋಗಿಲೆ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೆ ಹಾಡಲು ಪ್ರಾರಂಭಿಸಿದ ಜಾನಕಿ, ಸುಮಾರು 5 ದಶಕಗಳ ಕಾಲ ಸುಮಧುರ ಕಂಠದ ಮೂಲಕ ಗಾನಪ್ರಿಯರನ್ನು ರಂಜಿಸಿದ್ದಾರೆ.
Recommended Video
ಇತ್ತೀಚಿನ ವರ್ಷದ ವರೆಗೂ ಹಾಡುತ್ತ, ಎಲ್ಲರನ್ನು ರಂಜಿಸುತ್ತಿದ್ದ ಜಾನಕಿ ಸದ್ಯ ಹಾಡುವುದನ್ನು ನಿಲ್ಲಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಹಾಡಿರುವ ಜಾನಕಿ, ಹಿಂದಿ, ಮರಾಠಿ ಸೇರಿದಂತೆ ಒಟ್ಟು 17 ಭಾಷೆಯಲ್ಲಿ ಹಾಡಿದ್ದಾರೆ. ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಸಂಗೀತ ಸರಸ್ವತಿಗೆ ಸ್ಯಾಂಡಲ್ ವುಡ್ ನಿರ್ದೇಶಕನ ಪುತ್ರಿ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಮುಂದೆ ಓದಿ...
SSLCಯಲ್ಲಿ ಮಗಳ ಸಾಧನೆ: ನಿರ್ದೇಶಕ ರಘುರಾಮ್ ಸಂತೋಷಕ್ಕೆ ಪಾರವೇ ಇಲ್ಲ
ರಘು ರಾಮ್ ಪುತ್ರಿಯಿಂದ ಗಾನ ಗೌರವ
ಅದ್ಭುತ ಗಾಯಕಿಯ ಜನ್ಮದಿನಕ್ಕೆ ಇಡೀ ಭಾರತ ಶುಭಾಶಯ ಕೋರುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಘು ರಾಮ್ ಪುತ್ರಿ ಹಾಡಿನ ಮೂಲಕ ಶುಭಾಶಯಕೋರಿದ್ದಾರೆ. ರಾಘು ರಾಮ್ ಪುತ್ರಿ ನನಸು ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನುರಾಗ ಬಂಧನ ಸಿನಿಮಾದ ಹಾಡು ಹಾಡಿರುವ ನನಸು
ರಘುರಾಮ್ ಪುತ್ರಿ ನನಸು 'ಅನುರಾಗ ಬಂಧನ' ಸಿನಿಮಾದ 'ನಿನ್ನ ಸವಿ ನೆನಪೇ...'ಹಾಡನ್ನು ಹಾಡಿ ಗಾನಕೋಗಿಲೆಯ ಜನ್ಮದಿನಕ್ಕೆ ಗಾನ ಗೌರವ ಸಲ್ಲಿಸಿದ್ದಾರೆ.
ಎಸ್.ಜಾನಕಿ ಅಭಿಮಾನಿ ರಘುರಾಮ್
ನಟ ಮತ್ತು ನಿರ್ದೇಶಕ ರಘುರಾಮ್ ಎಸ್ ಜಾನಕಿ ಅಭಿಮಾನಿಗಳಲ್ಲಿ ಒಬ್ಬರು. ಹಾಗಾಗಿ ಅಭಿಮಾನಿಯಾಗಿ ನೆಚ್ಚಿನ ಗಾಯಕಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.
ರಘುರಾಮ್ ಹೇಳಿದ್ದೇನು?
"ಸಾಕ್ಷಾತ್ ಸಂಗೀತ ಸರಸ್ವತಿಯೇ ಇವರ ಕೋಗಿಲೆ ಕಂಠದಲ್ಲಿ ನಡೆಸಿದೆ ತಾಂಡವ. ನಮ್ಮ ಭಾರತದ ಶ್ರೇಷ್ಠ ಗಾಯಕಿ ಎಸ್. ಜಾನಕೀ ಅವರಿಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನನ್ನ ಮಗಳು ನನಸುವಿನಿಂದ ಈ ಗಾನ ಗೌರವ" ಎಂದು ಬರೆದು ಶುಭಾಶಯತಿಳಿಸಿದ್ದಾರೆ.