Don't Miss!
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತಾಗಾರ ಸಿಬ್ಬಂದಿ ನೆರವಿಗೆ ಧಾವಿಸಿದ ನಟಿ ರಾಗಿಣಿ
ಡ್ರಗ್ಸ್ ಪ್ರಕರಣ ಆರೋಪಿಯಾಗಿ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗೆ ಬಂದಿರುವ ನಟಿ ರಾಗಿಣಿ ಇದೀಗ ಮತ್ತೆ ಸಾಮಾಜಿಕ ಜೀವನಕ್ಕೆ ಮರಳಿದಂತಿದೆ.
Recommended Video
ಜಾಮೀನಿನ ವಾಪಸ್ ಬಂದ ಮೇಲೆ ಸಾಮಾಜಿಕ ಜಾಲತಾಣದಲ್ಲಷ್ಟೆ ಸಕ್ರಿಯವಾಗಿದ್ದ ನಟಿ ರಾಗಿಣಿ ಈಗ ಹೊರಗೆ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.
ಕೊರೊನಾದಿಂದಾಗಿ ಪ್ರತಿದಿನ ರಾಜ್ಯದಲ್ಲಿ 200ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಚಿತಾಗಾರಗಳ ಮುಂದೆ ಹೆಣಗಳ ಸಾಲು ನಿರ್ಮಾಣವಾಗಿದೆ. ಆರೋಗ್ಯ ಸಿಬ್ಬಂದಿ ಹಗಲು ಇರುಳೆನ್ನದೆ ಕಷ್ಟಪಡುತ್ತಿರುವಂತೆ ಚಿತಾಗಾರದ ಸಿಬ್ಬಂದಿಯೂ ಶ್ರಮಿಸುವಂತಾಗಿದೆ.
ಹಾಗಾಗಿ ರಾಗಿಣಿ ಅವರು ಚಿತಾಗಾರದ ಸಿಬ್ಬಂದಿಗೆ ಹಾಗೂ ಸ್ಮಶಾನದಲ್ಲಿ ಗುಂಡಿ ತೋಡುವ ಸ್ಮಶಾನ ನೋಡಿಕೊಳ್ಳುವ ವ್ಯಕ್ತಿಗಳಿಗೆ ನೆರವಾಗಿದ್ದಾರೆ. ಅಲ್ಲಿ ವಾಸಿಸುವವರಿಗೆ ಆಹಾರ ಸಾಮಗ್ರಿಗಳನ್ನು ರಾಗಿಣಿ ವಿಧಿಸಿದ್ದಾರೆ.
ಸ್ಮಶಾನವೊಂದರಲ್ಲಿ ಕಿಟ್ ವಿತರಿಸಬೇಕಾದರೆ ಆ ಸ್ಮಶಾನದಲ್ಲಿಯೇ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ವಾಸವಿದ್ದ ಅಜ್ಜಿಯೊಬ್ಬರೊಂದಿಗೆ ಚರ್ಚೆ ಮಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ರಾಗಿಣಿ.
'ಅವರ ಕತೆ ಕೇಳಿ ನನಗೆ ಆಶ್ಚರ್ಯವಾಯಿತು. ನಾಲ್ಕು ದಶಕಗಳಿಗೂ ಹೆಚ್ಚು ಸಮಯದಿಂದ ಆ ಮಹಿಳೆ ಸ್ಮಶಾನದಲ್ಲಿಯೇ ಇದ್ದಾರೆ. ಹೊರಗೆ ಹೋಗೇ ಇಲ್ಲ. ಹೊರಗಿನ ಪ್ರಪಂಚದ ಅರಿವು ಸಹ ಅವರಿಗೆ ಇಲ್ಲ. ಅವರ ಮಗಳು ಒಮ್ಮೆಯೂ ಪುಸ್ತಕ ಮುಟ್ಟಿಲ್ಲ ಅಮ್ಮ ಮಾಡುವ ಕಾರ್ಯವನ್ನೇ ಆಕೆಯೂ ಮಾಡುತ್ತಿದ್ದಾಳೆ' ಎಂದಿದ್ದಾರೆ ರಾಗಿಣಿ.
'ಕೋವಿಡ್ ಪೀಡಿತರನ್ನು ಸುಡುತ್ತಿದ್ದ ಸ್ಥಳಕ್ಕೆ ನಾವು ಹೋಗಲಿಲ್ಲ. ಅಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚಿಗಿದ್ದಿದ್ದರಿಂದ ನಾವು ಆ ಕಡೆಗೆ ಹೋಗಲಿಲ್ಲ. ಆದರೆ ಅಲ್ಲಿ ಸಾಲಾಗಿ ನಿಂತಿದ್ದ ಆಂಬುಲೆನ್ಸ್ಗಳ ಸಾಲುಗಳನ್ನು ನೋಡಿ ನಮಗೆ ಆತಂಕವಾಯಿತು' ಎಂದಿದ್ದಾರೆ ನಟಿ ರಾಗಿಣಿ.
ರಾಗಿಣಿ ದ್ವಿವೇದಿ ಕಳೆದ ವರ್ಷವೂ ಕೊರೊನಾ ಸಂಕಷ್ಟದ ಸಮಯದಲ್ಲಿ ಬಹಳ ಸಕ್ರಿಯವಾಗಿ ಸಹಾಯ ಮಾಡಿದ್ದರು. ಅವಶ್ಯಕತೆ ಇರುವವರಿಗೆ ಉಚಿತ ಆಹಾರ ವಿತರಣೆ, ದಿನಸಿ ವಿತರಣೆ, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವಿತರಣೆ ಮಾಡಿದ್ದರು ರಾಗಿಣಿ. ಆದರೆ ಅದೇ ಸಮಯದಲ್ಲಿ ಮಾದಕ ವಸ್ತು ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದರು.