Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಗಿಣಿ ನಟನೆಯ ಸಿನಿಮಾಕ್ಕೆ ಬಾಲಿವುಡ್ನಲ್ಲಿ ಸಖತ್ ಡಿಮ್ಯಾಂಡ್!
ನಟಿ ರಾಗಿಣಿ ದ್ವಿವೇದಿ ಈಗ ಪಂಜರದ ಗಿಣಿಯಾಗಿದ್ದಾರೆ. ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಟಿ ರಾಗಿಣಿ ಬಂಧನಕ್ಕೆ ಒಳಗಾಗುತ್ತಿದ್ದಂತೆ, ರಾಗಿಣಿ ಅಭಿನಯಿಸುತ್ತಿದ್ದ ಸಿನಿಮಾಗಳ ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ರಾಗಿಣಿ ವಿರುದ್ಧ ಸಾರ್ವಜನಿಕ ಆಕ್ರೋಶವೊಂದು ಎದ್ದಿದ್ದು, ರಾಗಿಣಿ ಅಭಿನಯದ ಸಿನಿಮಾಗಳ ಮೇಲೆ ಈ ಪ್ರಕರಣ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.
ನಟಿ ರಾಗಿಣಿ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪಟ್ಟಿ
ಆದರೆ ಇದಕ್ಕೆ ವಿರುದ್ಧವೆಂಬಂತೆ ರಾಗಿಣಿ ನಟನೆಯ ಸಿನಿಮಾ ಒಂದಕ್ಕೆ ಬಾಲಿವುಡ್ ನಲ್ಲಿ ಸಖತ್ ಬೇಡಿಕೆ ಕುದುರಿದೆ. ಬಾಲಿವುಡ್ ನ ಸ್ಟಾರ್ ನಟಿ ಆ ಸಿನಿಮಾದ ರೀಮೇಕ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ!
'ದಿ ಟೆರರಿಸ್ಟ್' ಸಿನಿಮಾಕ್ಕೆ ಬೇಡಿಕೆ
2018 ರಲ್ಲಿ ಪಿ.ಸಿ.ಶೇಖರ್ ನಿರ್ದೇಶನದ 'ದಿ ಟೆರರಿಸ್ಟ್' ಹೆಸರಿನ ಸಿನಿಮಾ ಒಂದು ಬಿಡುಗಡೆ ಆಗಿತ್ತು. ರಾಗಿಣಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿಲ್ಲವಾದರೂ, ಭಿನ್ನ ಕತೆಗೆ ಹಾಗೂ ಮಹಿಳಾ ಪ್ರಾಧಾನ್ಯ ಸಿನಿಮಾ ಎಂಬ ಕಾರಣಕ್ಕೆ ತುಸು ಗಮನ ಸೆಳೆದಿತ್ತು.
ಬಾಲಿವುಡ್ನಲ್ಲಿ ಸಖತ್ ಬೇಡಿಕೆ
ಈಗ ಇದೇ ಸಿನಿಮಾಕ್ಕೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಉಂಟಗಿದೆಯಂತೆ. ಎಕೆಲಾನ್ ಪ್ರೊಡಕ್ಷನ್ನ ನಿರ್ಮಾಪಕ ವಿಶಾಲ್ ರಾಣಾ ಎಂಬುವರು ಸಿನಿಮಾದ ರೀಮೇಕ್ ಹಕ್ಕು ಖರೀದಿಸಿದ್ದು, ಸಿನಿಮಾವನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರಂತೆ.
ಸೋನಮ್ ಕಪೂರ್ ಅಥವಾ ವಿದ್ಯಾ ಬಾಲನ್
ರಾಗಿಣಿ ನಟನೆಯ ಪಾತ್ರವನ್ನು ಹಿಂದಿಯಲ್ಲಿ ನಟಿ ವಿದ್ಯಾ ಬಾಲನ್ ಅಥವಾ ಸೋನಮ್ ಕಪೂರ್ ನಿರ್ವಹಿಸಿದ್ದಾರಂತೆ. ಅದರಲ್ಲಿಯೂ ನಟಿ ಸೋನಮ್ ಕಪೂರ್ ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.
Recommended Video
ಇಬ್ಬರು ಸಹೋದರಿಯರ ಕತೆ
'ದಿ ಟೆರರಿಸ್ಟ್' ಸಿನಿಮಾವು ರೇಷ್ಮಾ ಹಾಗೂ ಆಸ್ಮಾ ಹೆಸರಿನ ಇಬ್ಬರು ಸಹೋದರಿಯರ ಕತೆಯಾಗಿದ್ದು. ಆಸ್ಮಾ ಳ ಅಪಹರಣವಾದಾಗ, ಆಕೆಯನ್ನು ಬಿಡಿಸಿಕೊಂಡು ಬರಲು ಸಹೋದರಿ ರೇಷ್ಮಾ ಕೆಲವು ಸಮಾಜ ವಿರೋಧಿ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇದೇ ಸಿನಿಮಾ ಕತೆಯ ಎಳೆಯಾಗಿದೆ.