ನೆರೆ ಸಂತ್ರಸ್ತರಿಗೆ ಸಹಾಯ ಕೋರಿದ ಉತ್ತರ ಕರ್ನಾಟಕ ಬೆಡಗಿ
ಉತ್ತರ ಕರ್ನಾಟಕ ನೆರೆಯಿಂದ ತತ್ತರಿಸಿಹೋಗಿದೆ. ಬೀಕರ ಪ್ರವಾಹ ಸುಳಿಯಲ್ಲಿ ಸಿಲುಕಿ ಬದುಕು ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಕನ್ನಡ ಚಿತ್ರರಂಗದ ನಟ-ನಟಿಯರು ಧಾವಿಸಿದ್ದಾರೆ. ಬೇರೆ ಭಾಷೆಯ ಕೆಲವು ಸ್ಟಾರ್ಸ್ ಕೂಡ ಉತ್ತರ ಕರ್ನಾಟಕ ನೆರವಿಗೆ ನಿಂತಿದ್ದಾರೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಉತ್ತರ ಕರ್ನಾಟಕದ ಬೆಳಗಾವಿ ಮೂಲಕ ಸ್ಟಾರ್ ನಟಿ ಲಕ್ಷ್ಮೀ ರೈ ಕೂಡ ತವರಿನ ಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ. ಜನರ ಸಂಕಷ್ಟಕ್ಕೆ ಲಕ್ಷ್ಮೀ ರೈ ಮನಸ್ಸು ಕರಗಿದೆ. ಅಂದ್ಹಾಗೆ ಲಕ್ಷ್ಮೀ ರೈ ಪೋಷಕರು ವಾಸವಿರುವುದು ಬೆಳಗಾವಿಯಲ್ಲಿ. ಅಲ್ಲಿಗೆ ಹೋಗಲಿಕ್ಕು ಆಗುವುದಿಲ್ಲ ಅಂತಹ ಸ್ಥಿತಿ ಇದೆ ಎಂದು ಹೇಳಿದ್ದಾರೆ.
"ಇದು ಪ್ರಕೃತಿ ವಿಕೋಪ, ಯಾರು ಜವಾಬ್ದಾರರಲ್ಲ. ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಎಲ್ಲರು ಮುಂದೆ ಬಂದು ಉತ್ತರ ಕರ್ನಾಟಕ ಜನರ ನೆರವಾಗಬೇಕು ಎಂದು ಕೇಳಿಕೊಂಡಿದ್ದಾರೆ"

"ನಾನು ಕೂಡ ಊರಿಗೆ ಹೋಗಬೇಕು ಎಂದು ಪ್ರಯತ್ನ ಪಟ್ಟೆ ಆದ್ರೆ. ಪೋಷಕರು ಈಗ ಬರೋದು ಬೇಡ ಅಂತ ಹೇಳಿದ್ರು. ಅಲ್ಲಿಗೆ ಹೋಗಬೇಕು ಅಂದ್ರು ರಸ್ತೆ ಇಲ್ಲ ಈಗ. ಪೋಷಕರು ಬರುವುದು ಬೇಡ ಅಂತ ಹೇಳಿದ್ದಾರೆ. ಹಾಗಾಗಿ ಹೋಗಿಲ್ಲ" ಎಂದು ಲಕ್ಷ್ಮಿ ರೈ ಹೇಳಿದ್ದಾರೆ.
ಲಕ್ಷ್ಮಿ ರೈ ಇತ್ತೀಚಿಗೆ ನಡೆದ ಝಾನ್ಸಿ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ನಡೆದ ಪ್ರೆಸ್ ಮೀಟ್ ಲಕ್ಷ್ಮಿ ರೈ ತವರಿನ ಸಂಕಷ್ಟ ಸ್ಥಿತಿಯ ಬಗ್ಗೆ ಮಾತನಾಡಿ ಎಲ್ಲರು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











