twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ತಮಿಳು ನಟ ಸೂರ್ಯ

    |

    ಕರ್ನಾಟಕದಲ್ಲಿ ಉಂಟಾದ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ಬೀದಿಗೆ ಬಂದಿದ್ದಾರೆ. ನೆರೆ ಸಂತ್ರಸ್ತರಿಗೆ ನೆರವಿನ ಅವಶ್ಯಕತೆ ಇದೆ. ಇಡೀ ಕರ್ನಾಟಕ ಮಂದಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಸ್ಯಾಂಡಲ್ ವುಡ್ ನ ನಟ-ನಟಿಯರು ಉತ್ತರ ಕರ್ನಾಟಕ ಜನರ ನೆರವಿಗೆ ಧಾವಿಸಿದ್ದಾರೆ.

    ಈಗ ತಮಿಳು ನಟ ಸೂರ್ಯ ಮತ್ತು ಸಹೋದರ ಕಾರ್ತಿಕ್ ಇಬ್ಬರು ಕರ್ನಾಟಕ ಜನರ ನೋವಿಗೆ ಸ್ಪಂದಿಸಿದ್ದಾರೆ. ಸ್ಟಾರ್ ಸಹೋದರರಿಬ್ಬರು ಕರ್ನಾಟಕ ಮತ್ತು ಕೇರಳ ನೆರೆ ಸಂತ್ರಸ್ತರಿಗೆ 10ಲಕ್ಷ ಪರಿಹಾರ ನೀಡಿದ್ದಾರೆ. ಈ ಬಗ್ಗೆ ತಮಿಳು ಚಿತ್ರದ ವಿಮರ್ಶಕ ರಮೇಶ್ ಬಾಲ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

    ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ 2 ಲಕ್ಷ ನೀಡಿದ 'ಬರ್ನಿಂಗ್ ಸ್ಟಾರ್'ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ 2 ಲಕ್ಷ ನೀಡಿದ 'ಬರ್ನಿಂಗ್ ಸ್ಟಾರ್'

    ಕರ್ನಾಟಕ ಜನರ ನೆರವಿಗೆ ಧಾವಿಸಿದ ನಟ ಸೂರ್ಯ ಮತ್ತು ಕಾರ್ತಿಕ್ ಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದು ಬರುತ್ತಿದೆ. ಈ ಹಿಂದೆ ತಮಿಳುನಾಡಿನಲ್ಲದ ಪ್ರವಾಹಪರಿಸ್ಥಿತಿಗೆ ಕರ್ನಾಟಕ ಜನ ನೆರವಿಗೆ ಧಾವಿಸಿದ್ರು. ಆದ್ರೆ ಕರ್ನಾಟಕದ ಜನ ಸಂಕಷ್ಟಕ್ಕೆ ಸಿಲುಕಿದ್ರೆ ಪರಭಾಷೆಯ ಸ್ಟಾರ್ಸ್ ತಲೆಕೆಡಿಸಿಕೊಳ್ಳುವುದಿಲ್ಲ, ನೋಡಿದ್ರು ನೋಡದ ಹಾಗೆ ಮೌನ ವಹಿಸಿರುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.

    Rain Havoc In Karnataka Tamil Actor Suriya And Karthi Have Donated 10 Lakhs For People Of Karnataka

    ಆದ್ರೀಗ ಸೂರ್ಯ ಬ್ರದರ್ಸ್ ಸಹಾಯಕ್ಕೆ ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೀಕರ ಮಳೆಯಿಂದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ, ಕೊಡಗು ಸೇರಿದಂತೆ ಅನೇಕ ಕಡೆ ಜಲಪ್ರಳಯ ಉಂಟಾಗಿದ್ದು ಭಾರಿ ಹಾನಿ ಸಂಬವಿಸಿದೆ.

    English summary
    Heavy rain havoc in Karnataka : Karnataka is having a hard time dealing with floods in several districts and heavy rains wreaked havoc.Tamil actor Suriya and his brother Karthi have donated 10 Lakhs for people of Karnataka and Kerala.
    Friday, August 16, 2019, 12:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X