Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊಲೀಸ್ ವಶದಲ್ಲಿ ಹುಚ್ಚ ವೆಂಕಟ್: ಮದುವೆಯಾಗುವಂತೆ ಯುವತಿಯನ್ನು ಪೀಡಿಸಿದ ನಟ
Recommended Video
ನಟ ಹುಚ್ಚ ವೆಂಕಟ್ ನಿಜವಾಗಿಯೂ ಹುಚ್ಚನ ರೀತಿಯೇ ಆಡುತ್ತಿದ್ದಾನೆ. ಮಡಕೇರಿಯ ಘಟನೆಯ ನಂತರ ಮತ್ತೆ ಬೆಂಗಳೂರಿನಲ್ಲಿ ಇಂದು (ಅಕ್ಟೋಬರ್ 4) ಹುಚ್ಚ ವೆಂಕಟ್ ರಂಪಾಟ ಮಾಡಿದ್ದಾನೆ.
ಬೆಂಗಳೂರು ಮತ್ತು ಹಿಂದುಪುರ ರಾಜಾನುಕುಂಟೆ ಸಮೀಪದ ಹರದೇಶನಹಳ್ಳಿ ಟೋಲ್ ಬಳಿ ಹುಚ್ಚ ವೆಂಕಟ್ ರಾದ್ಧಾಂತ ಮಾಡಿಕೊಂಡಿದ್ದಾನೆ. ''ನನ್ನನ್ನು ಮದುವೆಯಾಗು'' ಎಂದು ಯುವತಿಯನ್ನು ಒತ್ತಾಯ ಮಾಡಿದ್ದಾನೆ. ರಸ್ತೆ ಬದಿ ಕಾರು ನಿಲ್ಲಿಸಿ, ಯುವತಿ ಜೊತೆ ಈ ರೀತಿ ರಂಪಾಟ ಮಾಡಿದ್ದಾನೆ.
ತನ್ನ ಪಾಡಿಗೆ ತಾನು ಬಸ್ ನಿಲ್ದಾಣ ಬಳಿ ನಿಂತಿದ್ದ ಯುವತಿಯನ್ನು ಹುಚ್ಚ ವೆಂಕೆಟ್ ಮಾತನಾಡಿಸಿದ. ನಂತರ ಆಕೆಗೆ ಮದುವೆ ಆಗುವಂತೆ ಒತ್ತಾಯ ಮಾಡಿದ. ಇದರಿಂದ ಭಯಗೊಂಡ ಯುವತಿ, ಏನು ತೊಚದೆ, ಹುಚ್ಚ ವೆಂಕಟ್ ಜೊತೆಗೆ ಹೆದರುತ್ತಲೆ ಮಾತನಾಡಿದ್ದಾಳೆ.
ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಹುಚ್ಚ ವೆಂಕಟ್ ತನ್ನ ಕಾರ್ ಒಡೆದು ಹಾಕಿ, ಕಿಟಕಿ ಗಾಜನ್ನು ಪುಡಿ ಮಾಡಿದ್ದಾನೆ. ಬಳಿಕ ಬಸ್ ಹತ್ತಲು ಮುಂದಾದ ಯುವತಿಯನ್ನ ಅಡ್ಡಗಟ್ಟಿದ ಹುಚ್ಚ ವೆಂಕಟ್, "ನೀನು ನನ್ನ ಮದುವೆಯಾಗಲೇ ಬೇಕು.." ಅಂತ ಯುವತಿ ಜೊತೆ ಕಿತ್ತಾಟ ಮಾಡಿದ್ದಾನೆ. ಹುಚ್ಚ ವೆಂಕಟ್ ಗಲಾಟೆ ಮಾಡುತ್ತಿರುವ ಬಗ್ಗೆ ತಮ್ಮ ಪೋಷಕರಿಗೆ ಯುವತಿ ಮಾಹಿತಿ ನೀಡಿದ್ದಾಳೆ. ಘಟನೆ ಬಳಿಕ ಹುಚ್ಚ ವೆಂಕಟ್ ಅವಸ್ಥೆ ಕಂಡು ಆತನಿಗೆ ಸ್ಥಳಿಯರು ಹಣ ನೀಡಿದ್ದಾರೆ.
ಅಂದಹಾಗೆ, ಪ್ರಕರಣ ದಾಖಲಿಸಿಕೊಂಡ ರಾಜಾನಕುಂಟೆ ಪೊಲೀಸರು ಹುಚ್ಚ ವೆಂಕಟ್ ನನ್ನು ವಶಕ್ಕೆ ಪಡೆದಿದ್ದಾರೆ.