Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊಲೀಸ್ ವಶದಲ್ಲಿ ಹುಚ್ಚ ವೆಂಕಟ್: ಮದುವೆಯಾಗುವಂತೆ ಯುವತಿಯನ್ನು ಪೀಡಿಸಿದ ನಟ
Recommended Video
ನಟ ಹುಚ್ಚ ವೆಂಕಟ್ ನಿಜವಾಗಿಯೂ ಹುಚ್ಚನ ರೀತಿಯೇ ಆಡುತ್ತಿದ್ದಾನೆ. ಮಡಕೇರಿಯ ಘಟನೆಯ ನಂತರ ಮತ್ತೆ ಬೆಂಗಳೂರಿನಲ್ಲಿ ಇಂದು (ಅಕ್ಟೋಬರ್ 4) ಹುಚ್ಚ ವೆಂಕಟ್ ರಂಪಾಟ ಮಾಡಿದ್ದಾನೆ.
ಬೆಂಗಳೂರು ಮತ್ತು ಹಿಂದುಪುರ ರಾಜಾನುಕುಂಟೆ ಸಮೀಪದ ಹರದೇಶನಹಳ್ಳಿ ಟೋಲ್ ಬಳಿ ಹುಚ್ಚ ವೆಂಕಟ್ ರಾದ್ಧಾಂತ ಮಾಡಿಕೊಂಡಿದ್ದಾನೆ. ''ನನ್ನನ್ನು ಮದುವೆಯಾಗು'' ಎಂದು ಯುವತಿಯನ್ನು ಒತ್ತಾಯ ಮಾಡಿದ್ದಾನೆ. ರಸ್ತೆ ಬದಿ ಕಾರು ನಿಲ್ಲಿಸಿ, ಯುವತಿ ಜೊತೆ ಈ ರೀತಿ ರಂಪಾಟ ಮಾಡಿದ್ದಾನೆ.
ತನ್ನ ಪಾಡಿಗೆ ತಾನು ಬಸ್ ನಿಲ್ದಾಣ ಬಳಿ ನಿಂತಿದ್ದ ಯುವತಿಯನ್ನು ಹುಚ್ಚ ವೆಂಕೆಟ್ ಮಾತನಾಡಿಸಿದ. ನಂತರ ಆಕೆಗೆ ಮದುವೆ ಆಗುವಂತೆ ಒತ್ತಾಯ ಮಾಡಿದ. ಇದರಿಂದ ಭಯಗೊಂಡ ಯುವತಿ, ಏನು ತೊಚದೆ, ಹುಚ್ಚ ವೆಂಕಟ್ ಜೊತೆಗೆ ಹೆದರುತ್ತಲೆ ಮಾತನಾಡಿದ್ದಾಳೆ.
ಮದುವೆಯಾಗಲು ಯುವತಿ ನಿರಾಕರಿಸಿದ್ದಕ್ಕೆ ಹುಚ್ಚ ವೆಂಕಟ್ ತನ್ನ ಕಾರ್ ಒಡೆದು ಹಾಕಿ, ಕಿಟಕಿ ಗಾಜನ್ನು ಪುಡಿ ಮಾಡಿದ್ದಾನೆ. ಬಳಿಕ ಬಸ್ ಹತ್ತಲು ಮುಂದಾದ ಯುವತಿಯನ್ನ ಅಡ್ಡಗಟ್ಟಿದ ಹುಚ್ಚ ವೆಂಕಟ್, "ನೀನು ನನ್ನ ಮದುವೆಯಾಗಲೇ ಬೇಕು.." ಅಂತ ಯುವತಿ ಜೊತೆ ಕಿತ್ತಾಟ ಮಾಡಿದ್ದಾನೆ. ಹುಚ್ಚ ವೆಂಕಟ್ ಗಲಾಟೆ ಮಾಡುತ್ತಿರುವ ಬಗ್ಗೆ ತಮ್ಮ ಪೋಷಕರಿಗೆ ಯುವತಿ ಮಾಹಿತಿ ನೀಡಿದ್ದಾಳೆ. ಘಟನೆ ಬಳಿಕ ಹುಚ್ಚ ವೆಂಕಟ್ ಅವಸ್ಥೆ ಕಂಡು ಆತನಿಗೆ ಸ್ಥಳಿಯರು ಹಣ ನೀಡಿದ್ದಾರೆ.
ಅಂದಹಾಗೆ, ಪ್ರಕರಣ ದಾಖಲಿಸಿಕೊಂಡ ರಾಜಾನಕುಂಟೆ ಪೊಲೀಸರು ಹುಚ್ಚ ವೆಂಕಟ್ ನನ್ನು ವಶಕ್ಕೆ ಪಡೆದಿದ್ದಾರೆ.