Don't Miss!
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೊಚ್ಚಲ ಮಗು ನಿರೀಕ್ಷೆಯಲ್ಲಿ ಸೌಂದರ್ಯಾ ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಮತ್ತೊಮ್ಮೆ ತಾತನಾಗುವ ಯೋಗ ಕೂಡಿಬಂದಿದೆ. ಅವರ ಕಿರಿಮಗಳು ಸೌಂದರ್ಯಾ ಆರ್ ಅಶ್ವಿನ್ ಅವರು ಇದೀಗ ನಾಲ್ಕು ತಿಂಗಳ ಗರ್ಭಿಣಿ. ಕೆಲ ತಿಂಗಳ ಬಳಿಕ ರಜನಿಕಾಂತ್ (64) ಅವರಿಗೆ ಮೊಮ್ಮಗು ಜೊತೆ ಆಟವಾಡುವ ಚಾನ್ಸ್ ಸಿಗಲಿದೆ.
2010ರಲ್ಲಿ ಬಿಜಿನೆಸ್ ಮ್ಯಾನ್ ಅಶ್ವಿನಿ ರಾಮ್ ಕುಮಾರ್ ಅವರ ಕೈಹಿಡಿದಿದ್ದರು ಸೌಂದರ್ಯಾ ರಜನಿಕಾಂತ್. ಅನಿಮೇಷನ್ ಚಿತ್ರ 'ಕೊಚ್ಚಡಿಯಾನ್' ಮೂಲಕ ಸೌಂದರ್ಯಾ ಅವರು ನಿರ್ದೇಶಕಿಯಾಗಿ ಬದಲಾಗಿದ್ದರು. ಆ ಚಿತ್ರಕ್ಕೆ ತಾಂತ್ರಿಕ ಅಂಶಗಳಿಂದ ಉತ್ತಮ ಹೆಸರು ಬಂದರೂ ವ್ಯವಹಾರಿಕವಾಗಿ ಸೋತಿತು. [ಸೌಂದರ್ಯಾ ರಜನಿಕಾಂತ್ ಗೆ ಒಂದು ಬಹಿರಂಗ ಪತ್ರ]
ಸದ್ಯಕ್ಕೆ ಸೌಂದರ್ಯಾ ಅವರು ಈರೋಸ್ ಅವರ ಡಿಜಿಟಲ್ ಇನ್ನೋವೇಶನ್ ಗೆ ಕ್ರಿಯೇಟಿವ್ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ಕಡೆ ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರ ಬಾಕ್ಸ್ ಆಫೀಸಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ರಜನಿಕಾಂತ್ ಹಾಗೂ ಧನುಷ್ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕಿರಿಯ ಮಗಳು ಸೌಂದರ್ಯಾ ಚೊಚ್ಚಲ ಮಗು ನಿರೀಕ್ಷೆಯಲ್ಲಿದ್ದಾರೆ.
ಈ ಹಿಂದೆ ಕೊಚ್ಚಡಿಯಾನ್ ಆಡಿಯೋ ಬಿಡುಗಡೆ ವೇಳೆ ರಜನಿಕಾಂತ್ ಮಾತನಾಡುತ್ತಾ, "ನನ್ನ ಪ್ರಕಾರ ತಾಯಂದಿರು ಹೆಚ್ಚಿನ ಸಮಯವನ್ನು ತಮ್ಮ ಮಕ್ಕಳು ಹಾಗೂ ಕುಟುಂಬದ ಜೊತೆಗೆ ಕಳೆಯಬೇಕು. ಆಗಷ್ಟೇ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ..."
"ನನ್ನ ಮಗಳಿಗೂ ನಾನು ಇದೇ ಸಲಹೆಯನ್ನು ಕೊಡುತ್ತಿದ್ದೇನೆ. ಮಕ್ಕಳಿಗೆ 10-12 ವರ್ಷ ತುಂಬುವವರೆಗೂ ಅವರ ಜೊತೆಗೆ ಇದ್ದು ಬಳಿಕ ತಮ್ಮ ವೃತ್ತಿ ಬದುಕಿನ ಕಡೆಗೆ ಗಮನಹರಿಸಲಿ" ಎಂದಿದ್ದರು.
ಆಗ ಸೌಂದರ್ಯಾ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, "ಕೊಚ್ಚಡಿಯಾನ್ ಚಿತ್ರ ನನ್ನ ಚೊಚ್ಚಲ ಮಗು ಇದ್ದಂತೆ. ಆ ಚಿತ್ರದ ಬಳಿಕವಷ್ಟೇ ಅಪ್ಪನ ಮಾತಿನಂತೆ ಮಕ್ಕಳು, ಕುಟುಂಬದ ಕಡೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇನೆ" ಎಂದಿದ್ದರು.