Don't Miss!
- News Gadag: ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ರಾಜ ಮರ್ಯಾದೆ: ಮಾಜಿ ಸಿಎಂ
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಠಾಕ್ರೆಗೆ ಸಂತಾಪ ಸೂಚಿಸಿ ರಜನಿ ಬರೆದ ಪತ್ರ..
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡಾ ಮರಾಠ ನಾಯಕ ಬಾಳಾ ಠಾಕ್ರೆ ಅವರ ಹಿಂಬಾಲಕರಲ್ಲಿ ಒಬ್ಬರು. ಬಾಳಾ ಠಾಕ್ರೆ ಅವರ ನಿಧನಕ್ಕೆ ಕಂಬನಿ ಮಿಡಿದ ದೇಶದ ಮಹಾನ್ ತಾರೆಗಳ ಸಾಲಿನಲ್ಲಿ ರಜನಿಕಾಂತ್ ಕೂಡಾ ಸೇರಿದ್ದಾರೆ.
ಬಾಲಿವುಡ್ ದಿಗ್ಗಜರಾದ ಅಮಿತಾಬ್ ಬಚ್ಚನ್, ಲತಾ ಮಂಗೇಶ್ವರ್ ರಂಥ ಮಹಾನ್ ಕಲಾವಿದರೇ ಬಾಳಾ ಠಾಕ್ರೆ ಅಂತಿಮ ದರ್ಶನಕ್ಕೆ ಬಂದ ಮೇಲೆ ಇಡೀ ಬಾಲಿವುಡ್ ಇಂಡಸ್ಟ್ರೀಯೇ ಮಹರಾಷ್ಟ್ರದ ಹುಲಿ ಬಾಳಾ ಸಾಹೇಬ್ ಅವರಿಗೆ ಗೌರವ ಸಲ್ಲಿಸಿದೆ.
ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸೂಪರ್ ಸ್ಟಾರ್ ರಜನಿಕಾಂತ್ ಬರೆದ ಪತ್ರ ಇಲ್ಲಿದೆ.
ತಮಿಳರ ಆರಾಧ್ಯ ದೈವವಾಗಿರುವ ಬೆಂಗಳೂರಿನಲ್ಲಿ ಕಂಡೆಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ ನಂತರ ಸೂಪರ್ ಸ್ಟಾರ್ ಆಗಿ ಬೆಳೆದ ರಜನಿಕಾಂತ್ ಅವರು ಮೂಲತಃ ಮಹಾರಾಷ್ಟ್ರದವರು ಎಂಬುದನ್ನು ಮರೆಯುವಂತಿಲ್ಲ.
ಮಹಾರಾಷ್ಟ್ರದಲ್ಲಿ ಹುಟ್ಟಿದ ರಜನಿಕಾಂತ್ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್ ಆಗಿದೆ.
ಬಾಳಾ ಠಾಕ್ರೆ ನನ್ನನ್ನು ಸೇರಿದಂತೆ ಎಲ್ಲರಿಗೂ ತಂದೆ ಸಮಾನ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಅಭೂತ ಪೂರ್ವ ಅಂತಿಮ ಯಾತ್ರೆ : ಬಾಳಾ ಠಾಕ್ರೆ ಅವರ ಅಂತಿಮ ಯಾತ್ರೆಯಲ್ಲಿಸುಮಾರು 20 ಲಕ್ಷ ಜನರು ಪ್ರವಾಹೋಪಾದಿಯಲ್ಲಿ ಸಾಗಿದರು. 1 ಲಕ್ಷ ಆಟೋ, 30 ಸಾವಿರ ಟ್ಯಾಕ್ಸಿಗಳು ಸಂಚಾರ ಸ್ಥಗಿತಗೊಳಿಸಿದ್ದು, ಇಡೀ ಮುಂಬೈ ದಾದರ್ ನಲ್ಲಿರುವ ಶಿವಾಜಿ ಪಾರ್ಕಿನಲ್ಲಿ ನಲ್ಲಿ ನೆರೆದ್ದಿತ್ತು. ನಿಗದಿತ ಸಮಯಕ್ಕೆ ಸರ್ಕಾರಿ ಗೌರವದ ನಡುವೆ, ಹಿಂದೂ ಸಂಪ್ರದಾಯದ ಪ್ರ್ರಕಾರ ಬಾಳಾ ಠಾಕ್ರೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಒನ್ ಇಂಡಿಯಾ ಕನ್ನಡ