ಸೈಕ್ಲೋನ್ ಗೆ ತುತ್ತಾಗಿದ್ದ 10 ಕುಟುಂಬಗಳಿಗೆ ಮನೆ ಕಟ್ಟಿಸಿಕೊಟ್ಟ ರಜನಿಕಾಂತ್
Recommended Video
ಸೈಕ್ಲೋನ್ ಗೆ ಗುತ್ತಾಗಿದ್ದ ಹತ್ತು ಕುಟುಂಬಗಳಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರು, ಹೊಸದಾಗಿ ಮನೆಗಳನ್ನ ಕಟ್ಟಿಸಿಕೊಟ್ಟಿದ್ದಾರೆ. ಇಂದು ಆ ಮನೆಯ ಬೀಗಗಳನ್ನ ನೆರೆ ಸಂತ್ರಸ್ಥರಿಗೆ ನೀಡುವ ಮೂಲಕ ನೆರವಾಗಿದ್ದಾರೆ.
ರಜನಿ ಮಕ್ಕಳ್ ಮಂದ್ರಮ್ ವತಿಯಿಂದ ಮನೆ ಕಳೆದುಕೊಂಡಿದ್ದ ಕುಟುಂಬಗಳಿಗೆ, ವಾಸಿಸಲು ಯೋಗ್ಯವಾದ ಮನೆಯ ನಿರ್ಮಿಸಲಾಗಿದೆ. ಈಗ ಆ ಮನೆಯನ್ನ ಜನರಿಗೆ ಹಸ್ತಾಂತರಿಸಲಾಗಿದೆ.
ಕಳೆದ ವರ್ಷ ನಾಗಪಟ್ಟಣಂ ಜಿಲ್ಲೆಯಲ್ಲಿ ಎದುರಾಗಿದ್ದ ಸೈಕ್ಲೋನ್ ನಲ್ಲಿ ಹಲವರು ಮನೆ ಕಳೆದುಕೊಂಡಿದ್ದರು. ಆ ಜನರಿಗೆ ರಜನಿಕಾಂತ್ ಅವರು ಮನೆ ನಿರ್ಮಿಸಿ ಕೊಡುವುದಾಗಿ ಘೋಷಿಸಿದ್ದರು.

ಒಂದು ಮನೆಯನ್ನು ನಿರ್ಮಿಸಲು ಸುಮಾರು 1.85 ಲಕ್ಷ ಖರ್ಚು ಆಗಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಹತ್ತು ಮನೆಯನ್ನ ನಿರ್ಮಿಸಲಾಗಿದೆ.
ಸೈಕ್ಲೋನ್ ನಲ್ಲಿ ಸುಮಾರು 50 ಜನರ ಮೃತಪಟ್ಟಿದ್ದರು. ಹಾಗೆ, ಅನೇಕ ಮಂದಿ ಮನೆಯನ್ನ ಕಳೆದುಕೊಂಡು, ಬೀದಿಗೆ ಬಂದಿದ್ದರು. ಮನೆಯನ್ನ ನಿರ್ಮಿಸುವುದರ ಜೊತೆಗೆ, ಆ ನಗರವನ್ನ ಮತ್ತೆ ಮೊದಲಿನಂತೆ ಮಾಡಲು ರಜನಿ ಮಕ್ಕಳ್ ಮಂದ್ರಮ್ ಸಹಕಾರಿಯಾಗಿದೆ.
ರಜನಿಕಾಂತ್ ಅವರ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ ಮಾಡಿಲ್ಲ. ಮುಂದಿನ ಚುನಾವಣೆ ವೇಳೆ ಪಕ್ಷ ಘೋಷಿಸಿ, ಸ್ಪರ್ಧೆ ಮಾಡುವುದರ ಬಗ್ಗೆ ಮಾಹಿತಿ ನೀಡಬಹುದು ಎಂಬ ನಿರೀಕ್ಷೆ ಇದೆ.


Click it and Unblock the Notifications











