Don't Miss!
- News Bullet train: ಬುಲೆಟ್ ರೈಲು ಸೇವೆ ಆರಂಭದ ಬಗ್ಗೆ ಅಶ್ವಿನಿ ವೈಷ್ಣವ್ ಅವರಿಂದ ಮಹತ್ವದ ಮಾಹಿತಿ
- Automobiles ಭರ್ಜರಿ ಮೈಲೇಜ್ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
- Sports IPL 2024: ಮುಂಬೈ ಇಂಡಿಯನ್ಸ್ಗೆ ಭಾರೀ ಹಿನ್ನಡೆ; ಹಾರ್ಟ್ಬ್ರೇಕ್ ಪೋಸ್ಟ್ ಮಾಡಿದ ಸೂರ್ಯಕುಮಾರ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುಟ್ಟ ಬಾಲಕನ ಪ್ರಮಾಣಿಕತೆಗೆ ಮರುಳಾದ ರಜನಿಕಾಂತ್
ಮಕ್ಕಳನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ಕಾರಣ ಮಕ್ಕಳು ನಿಷ್ಕಲ್ಮಶವಾದ ಮನಸ್ಸನ್ನು ಹೊಂದಿರುತ್ತಾರೆ. ದೊಡ್ಡವರ ತರ ಅವರಿಗೆ ಯಾವುದೇ ಬೇದ ಬಾವ ಇರುವುದಿಲ್ಲ. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಾರೆ.
ಮಕ್ಕಳ ಮನಸ್ಸು ಎಷ್ಟು ಸೂಕ್ಷ್ಮ ಹಾಗೂ ಪರಿಶುದ್ಧವಾಗಿರುತ್ತದೆ ಎನ್ನುವುದು ಇತ್ತೀಚಿಗಷ್ಟೆ ಮತ್ತೆ ತಮಿಳುನಾಡಿನಲ್ಲಿ ಸಾಭೀತಾಗಿದೆ. ಇದರ ಬಗ್ಗೆ ತಿಳಿದುಕೊಂಡ ಸೂಪರ್ ಸ್ಟಾರ್ ರಜನಿಕಾಂತ್ ಪುಟ್ಟ ಬಾಲಕ ಯಾಸಿನ್ ಪ್ರಾಮಾಣಿಕತೆಗೆ ಮಾರು ಹೋಗಿದ್ದಾರೆ.
ಕೊನೆಗೂ ರಜನಿಯ '2.0' ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಯ್ತು
ಯಾಸಿನ್ ಕಾರ್ಯವನ್ನು ಮೆಚ್ಚಿಕೊಂಡು ಮನೆಗೆ ಕರೆಸಿಕೊಂಡು ಮರೆಯಲಾಗದ ಉಡುಗೊರೆ ಕೊಟ್ಟು, ಆತಿಥ್ಯವನ್ನು ನೀಡಿದ್ದಾರೆ. ಹಾಗಾದರೆ ತಮಿಳುನಾಡಿನ ಪುಟ್ಟ ಪೋರ ಯಾಸಿನ್ ಮಾಡಿದ ಅಂತಹ ಮಹಾನ್ ಕಾರ್ಯವೇನು? ಸೂಪರ್ ಸ್ಟಾರ್ ಕೊಟ್ಟ ಉಡುಗೊರೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ
ಯಾಸಿನ್ ಕೆಲಸ ಮೆಚ್ಚಿನ ಸೂಪರ್ ಸ್ಟಾರ್
ಯಾಸಿನ್ ತಮಿಳುನಾಡಿನ ಮೂಲಕ ಪುಟ್ಟ ಪೋರ. 7 ವರ್ಷದ ಯಾಸಿನ್ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚಿಗಷ್ಟೆ ಯಾಸಿನ್ ಶಾಲೆಗೆ ಹೋಗುವಾಗ ದಾರಿಯಲ್ಲಿ 50 ಸಾವಿರ ಹಣವಿರುವ ಪರ್ಸ್ ಸಿಕ್ಕಿದೆ. ಯಾಸಿನ್ ಆ ಪರ್ಸ್ ಅನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ಕೊಟ್ಟಿದ್ದಾನೆ.
ತಲುಪಿದ ಹಣ ಪೋಲೀಸರು
ಮುಖ್ಯೋಪಾಧ್ಯಾಯರು ಪೋಲೀಸರ ಸಹಾಯದಿಂದ 50 ಸಾವಿರ ಹಣವನ್ನು ಸಂಬಂಧ ಪಟ್ಟವರಿಗೆ ತಲುಪಿಸಿದ್ದಾರೆ. ಈ ವಿಚಾರ ತಮಿಳುನಾಡಿನೆಲ್ಲೆಡೆ ವೈರಲ್ ಆಗಿತ್ತು.
ಯಾಸಿನ್ ಕುಟುಂಬಸ್ಥರನ್ನ ಆಹ್ವಾನಿಸಿದ ರಜನಿ
ಈ ವಿಚಾರವನ್ನು ತಿಳಿದ ಸೂಪರ್ ಸ್ಟಾರ್ ರಜನಿಕಾಂತ್ ಯಾಸಿನ್ ಹಾಗೂ ಪೋಷಕರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಯಾಸಿನ್ ಪ್ರಾಮಾಣಿಕತೆಯನ್ನು ಮೆಚ್ಚಿ ರಜನಿಕಾಂತ್ ಅಭಿನಂದನೆ ಸಲ್ಲಿಸಿದ್ದಾರೆ.
ರಜನಿಯಿಂದ ಸಿಕ್ಕಿತೆ ವಿಶೇಷ ಉಡುಗೊರೆ
ರಜನಿಕಾಂತ್ ಯಾಸಿನ್ ಅವರ ಮುಂದಿನ ವಿದ್ಯಾಭ್ಯಾಸದ ಖರ್ಚು-ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಯಾಸಿನ್ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಹೇಳಿದ್ದಾರೆ.