twitter
    For Quick Alerts
    ALLOW NOTIFICATIONS  
    For Daily Alerts

    ಮಂಡ್ಯ ಕೊನೆ ದಿನದ ಪ್ರಚಾರದಲ್ಲಿ ರಜನಿಕಾಂತ್?

    |

    Recommended Video

    Lok Sabha Elections 2019: ಕೊನೇ ದಿನ ಸುಮಲತಾ ಪರ ಪ್ರಚಾರ ಮಾಡಲು ಮಂಡ್ಯಕ್ಕೆ ಬರಲಿದ್ದಾರಾ ರಜಿನಿಕಾಂತ್?

    ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಅದರಲ್ಲೂ ರಾಜ್ಯದ ಗಮನ ಸೆಳೆದಿರುವ ಮಂಡ್ಯ ಚುನಾವಣಾ ಅಖಾಡ ಕಾದ ಕಾವಲಿಯಂತಾಗಿದೆ. 18ರಂದು ನಡೆಯುವ ಚುನಾವಣೆ ಹಿನ್ನಲೆ ಬಹಿರಂಗ ಪ್ರಚಾರಕ್ಕೆ ನಾಳೆ ಕೊನೆಯ ದಿನವಾಗಿದ್ದು ಮತದಾರರನ್ನು ಸೆಳೆಯುವ ಅಂತಿಮ ಹಂತದ ಕಸರತ್ತಿನಲ್ಲಿ ಅಭ್ಯರ್ಥಿಗಳು ಬ್ಯುಸಿಯಾಗಿದ್ದಾರೆ.

    ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತಯಾಚಿಸಲು ಮಂಡ್ಯ ಕಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತ ಸುಮಲತಾ ಪರ ಮತಯಾಚನೆ ಮಾಡಲು ಸೂಪರ್ ಸ್ಟಾರ್ ರಜನಿಕಾಂತ್ ಬರುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

    ಏಪ್ರಿಲ್ 16ಕ್ಕೆ ದರ್ಶನ್ ಮತ್ತು ಯಶ್ ಒಟ್ಟಿಗೆ ಪ್ರಚಾರ ಏಪ್ರಿಲ್ 16ಕ್ಕೆ ದರ್ಶನ್ ಮತ್ತು ಯಶ್ ಒಟ್ಟಿಗೆ ಪ್ರಚಾರ

    ಆದ್ರೀಗ ಈ ವಿಚಾರಕ್ಕೆ ಖುದ್ದು ಸುಮಲತಾ ಅವರೇ ಬ್ರೇಕ್ ಹಾಕಿದ್ದಾರೆ. ಮಂಚನಹಳ್ಳಿಯಲ್ಲಿ ಮಾತನಾಡಿದ ಸುಮಲತಾ "ಮಂಡ್ಯ ಪ್ರಚಾರಕ್ಕೆ ಆಗಲಿ ಅಥವಾ ಬಹಿರಂಗ ಸಭೆಗೆ ರಜನಿಕಾಂತ್ ಬರಲ್ಲ. ಪ್ರಚಾರ ವಿಚಾರವಾಗಿ ಅವರನ್ನು ಸಂಪರ್ಕ ಮಾಡಿಲ್ಲ" ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.

    rajinikanth not campaign for sumalatha in mandya lok sabha election

    ಈಗಾಗಲೆ ನಟ ದರ್ಶನ್ ಮತ್ತು ಯಶ್ ಇಬ್ಬರು ಸುಮಲತಾ ಪರ ಮತಯಾಚನೆ ಮಾಡುತ್ತಿದ್ದಾರೆ. ಮತದಾರರನ್ನು ಓಲೈಸಲು ಇಂದು ಮತ್ತು ನಾಳೆ ಎರಡೇ ದಿನಗಳಿದೆ. ನಾಳೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಯಶ್, ದರ್ಶನ್ ಅಭಿಷೇಕ್ ಸೇರಿದಂತೆ ನೂರಾರು ಸಂಖ್ಯೆಯ ಬೆಂಬಲಿಗರು ಭಾಗವಹಿಸಲಿದ್ದಾರೆ.

    English summary
    tamil superstar rajinikanth not campaign for sumalatha in mandya lok sabha election. sumalatha clarified that rajinikanth not participate in mandya campaign.
    Monday, April 15, 2019, 14:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X