Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಿಸ್ತೂಲು ತೋರಿಸಿ ಜೀವ ಬೆದರಿಕೆ: ದೂರು ನೀಡಿದ ರಾಜು ತಾಳಿಕೋಟೆ
'ಮನಸಾರೆ' ಸಿನಿಮಾ ಮೂಲಕ ಖ್ಯಾತಿ ಗಳಿಸಿ ಆ ನಂತರ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟ ರಾಜು ತಾಳಿಕೋಟೆ ವಿಜಯಪುರ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
''ನನ್ನ ಮೇಲೆ ಸನಾ ಎಂಬುವರ ಸಂಬಂಧಿ ಎಸ್.ಕೆ.ಮೋದಿ ಹಲ್ಲೆ ನಡೆಸಿದ್ದು, ಪಿಸ್ತೂಲು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ'' ಎಂದು ಆರೋಪ ಮಾಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿಯೇ ಮಾಧ್ಯಮಗಳಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಕಲಹ: ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ, ಕೇಸ್ ದಾಖಲು?
ತಮ್ಮ ಅಕ್ಕನ ಮಗ ಫಯಾಜ್ ಕರಜಗಿ ಮತ್ತು ಪತ್ನಿ ಸನಾ ಕರಜಗಿ ಅವರ ದಾಂಪತ್ಯದ ಕಲಹದಲ್ಲಿ ರಾಜು ತಾಳಿಕೋಟೆ ಮಧ್ಯ ಪ್ರವೇಶ ಮಾಡಿದ್ದರು. ರಾಜು ತಾಳಿಕೋಟೆ ಹಾಗೂ ಅವರ ಪತ್ನಿ ಪ್ರೇಮ ತಾಳಿಕೋಟೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಈಗಾಗಲೇ ಸನಾ ಕರಜಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆಕೆ ದೂರು ನೀಡಿದ ಬೆನ್ನಲ್ಲೆ ರಾಜು ತಾಳಿಕೋಟೆ ಪ್ರತಿದೂರು ನೀಡಿದ್ದಾರೆ.
ರಾಜು ತಾಳಿಕೋಟೆ ಹೇಳಿರುವ ಪ್ರಕಾರ, ''ಸನಾ ಹಾಗೂ ಎಸ್ಕೆ ಮೋದಿ ಬಡುವೆ ಸಂಬಂಧವಿತ್ತು. ಅದು ಹೇಗೋ ಆಕೆಯ ಗಂಡನಿಗೆ ಗೊತ್ತಾಗಿ ಆಕೆಗೆ ವಿಚ್ಛೇಧನ ನೀಡುತ್ತೇನೆಂದು ಪಟ್ಟು ಹಿಡಿದಿದ್ದ, ಆಗ ಆಕೆ ವಿಷ ಕುಡಿದಳು, ವಿಷ ಕುಡಿದಾಗ ಆಸ್ಪತ್ರೆಯಲ್ಲಿ ಕೊಡುವ ಮತ್ತಿನ ಔಷಧದಿಂದಾಗಿ ಆಕೆ ತಾನು ಮಾಡಿದ ಮೋಸವನ್ನೆಲ್ಲ ಗಂಡನ ಎದುರಿಗೆ ಹೇಳಿದರು. ಅದನ್ನು ರೆಕಾರ್ಡ್ ಮಾಡಿಕೊಂಡ ಫಯಾಜ್ ಆಕೆಯನ್ನು ದೂರ ಇಟ್ಟಿದ್ದ'' ಎಂದು ವಿವರಿಸಿದರು.
''ನಾನು ಮುಂದೆ ನಿಂತು ಇಬ್ಬರಿಗೂ ಬುದ್ಧಿ ಹೇಳಿ ಹೀಗೆ ಮಾಡಬಾರದು ಎಂದು ಹೇಳಲು ಹೊರಟೆ ಆದರೆ ಆ ಎಸ್.ಕೆ.ಮೋದಿ ರೌಡಿಸಂ ಮಾಡುತ್ತಾನೆ. ಕೆಲವರು ಹುಡುಗಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಾನೆ. ಅವನು ಪಿಸ್ತೂಲು ತೋರಿಸಿ ನನಗೆ ಬೆದರಿಕೆ ಹಾಕಿದ ಅಲ್ಲದೆ ಹಲ್ಲೆಯನ್ನೂ ಮಾಡಿದ್ದಾನೆ'' ಎಂದು ಹೇಳಿದ್ದಾರೆ. ಈ ಕುರಿತು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿಯೂ ಹೇಳಿದ್ದಾರೆ ರಾಜು ತಾಳಿಕೋಟೆ.
ಬೆಳಿಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಸನಾ ಕರಜಗಿ, ''ರಾಜು ತಾಳಿಕೋಟೆ ಮನೆಯವರು ನನ್ನ ಮೇಲೆ ಹಲ್ಲೆ ಮಾಡಿದರು. ಬಹಳ ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದರು. ರಾಜು ತಾಳಿಕೋಟೆ ಪತ್ನಿ ಪ್ರೇಮ ತಾಳಿಕೋಟೆ ನನಗೆ ಬಲವಂತದಿಂದ ವಿಷ ಕುಡಿಸಿದರು. ನನ್ನನ್ನು ಸಾಯಿಸಲು ಯತ್ನಿಸಿದರು. ನನ್ನ ಮಕ್ಕಳನ್ನೂ ಹಿಂಸಿಸಿದರು'' ಎಂದು ಆರೋಪ ಮಾಡಿದ್ದಾರೆ. ರಾಜು ತಾಳಿಕೋಟೆ, ಪ್ರೇಮ ತಾಳಿಕೋಟೆ ವಿರುದ್ಧ ದೂರನ್ನೂ ನೀಡಿದ್ದಾರೆ ಸನಾ ಕರಜಗಿ.