Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಿಚ್ಚಿ' ಸಿನಿಮಾ ಟೈಟಲ್ ವಿವಾದ: ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ
'ರಿಚ್ಚಿ' ಹೆಸರು ನಮಗೆ ಸೇರಿದ್ದು, ಆದರೆ ಅದೇ ಹೆಸರಲ್ಲಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸಿನಿಮಾ ಘೋಷಣೆ ಮಾಡಿದ್ದಾರೆ ಎಂದು ಹೇಮಂತ್ ಎಂಬುವರು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ.
ಹೇಮಂತ್ ಎಂಬುವರು 'ರಿಚ್ಚಿ' ಎಂಬ ಸಿನಿಮಾವನ್ನು ಎರಡು ವರ್ಷದ ಹಿಂದೆಯೇ ಆರಂಭಿಸಿ ಶೇ 70 ಭಾಗ ಚಿತ್ರೀಕರಣ ಸಹ ಮಾಡಿದ್ದರು, ಟೈಟಲ್ ನೊಂದಣಿ ಮಾಡಿಸಿದ್ದರು. ರಕ್ಷಿತ್ ಶೆಟ್ಟಿ ಅವರು ಅದೇ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ ಎಂದು ಹೇಮಂತ್ ಆರೋಪಿಸಿ ದೂರು ನೀಡಿದ್ದಾರೆ.
ಟೈಟಲ್ ವಿವಾದ: 'ರಕ್ಷಿತ್ ಶೆಟ್ಟಿ ಬಳಸಿರುವ ಸಿನಿಮಾ ಶೀರ್ಷಿಕೆ ನಮ್ಮದು'
ಆದರೆ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಶೆಟ್ಟಿ, 'ನಾನು ಯಾವಾಗ ರಿಚ್ಚಿ ಸಿನಿಮಾದ ಟೈಟಲ್ ಅನ್ನು ಘೋಷಣೆ ಮಾಡಿದ್ದೇನೆ' ಎಂದು ಮರುಪ್ರಶ್ನೆ ಹಾಕಿದ್ದಾರೆ.
ನಾನು ಸಿನಿಮಾ ಹೆಸರು ಘೋಷಣೆಯನ್ನೇ ಮಾಡಿಲ್ಲ: ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ ಹೇಳಿರುವಂತೆ, ಅವರು ರಿಚ್ಚಿ ಸಿನಿಮಾದ ಘೋಷಣೆಯನ್ನೇ ಮಾಡಿಲ್ಲ, ಉಳಿದವರು ಕಂಡಂತೆ ಸಿನಿಮಾದ 'ರಿಚ್ಚಿ' ಪಾತ್ರವನ್ನು ಇಟ್ಟುಕೊಂಡು ಕತೆ ಹೆಣೆದಿದ್ದೇನೆ, ಆದರೆ ಸಿನಿಮಾದ ಹೆಸರನ್ನು ನಾನು ಈ ವರೆಗೆ ಘೋಷಣೆ ಮಾಡಿಲ್ಲ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ರಿಚ್ಚಿ ಪಾತ್ರದ ಸ್ಪೂರ್ತಿಯ ಆಧಾರದಲ್ಲಿ ಚಿತ್ರಕತೆ
ಉಳಿದವರು ಕಂಡಂತೆ ಸಿನಿಮಾದ ರಿಚ್ಚಿ ಪಾತ್ರವನ್ನೇ ಸ್ಪೂರ್ತಿಯಾಗಿಟ್ಟುಕೊಂಡು ಚಿತ್ರಕತೆ ಬರೆದಿದ್ದೇನೆ, ಹಾಗಾಗಿ ಟ್ವಿಟ್ಟರ್ ಪೋಸ್ಟ್ಗಳಲ್ಲಿ ರಿಚ್ಚಿ ಹ್ಯಾಷ್ಟ್ಯಾಗ್ ಬಳಸಿದ್ದೇನೆ, ನಾನು ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು ರಿಚ್ಚಿ ಎಂದು ನಾನು ಈ ವರೆಗೆ ಹೇಳಿಲ್ಲ, ಹೇಳಿದ್ದರೆ ಸಾಬೀತು ಪಡಿಸಲಿ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಪ್ರಚಾರಕ್ಕಾಗಿ ಸುಳ್ಳು ದೂರು ನೀಡುವುದು ಸರಿಯಲ್ಲ: ರಕ್ಷಿತ್
ರಿಚ್ಚಿ ಎಂಬುದು ನನ್ನ ಸಿನಿಮಾದ ಹೆಸರು ಎಂದು ನಾನು ಹೇಳಿಯೇ ಇಲ್ಲ, ನನ್ನ ಸಿನಿಮಾದ ಹೆಸರು ನನ್ನ ಮನದಲ್ಲಿ ಭದ್ರವಾಗಿದೆ. ಸಮಯ ಬಂದಾಗ ಅದನ್ನು ಬಹಿರಂಗಗೊಳಿಸುತ್ತೇನೆ, ಹೀಗೆ ಸುಮ್ಮನೆ ಪ್ರಚಾರಕ್ಕೆ ಸುಳ್ಳು ದೂರು ನೀಡುವುದು ಸರಿಯಲ್ಲ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
ಕೊಡಕೆನೈಲ್ ನಲ್ಲಿ ಚಿತ್ರೀಕರಣದಲ್ಲಿ ಭಾಗಿ
ನಟ ರಕ್ಷಿತ್ ಶೆಟ್ಟಿ ಕೊರೊನಾ ಲಾಕ್ಡೌನ್ ಸಮಯದಲ್ಲಿ ತಮ್ಮ ಸಿನಿಮಾದ ಚಿತ್ರಕತೆಯ ಮೇಲೆ ವರ್ಕ್ ಮಾಡಿದ್ದಾರೆ. ಪ್ರಸ್ತುತ ಕೊಡಕೆನೈಲ್ನಲ್ಲಿ ಚಾರ್ಲಿ 777 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ನಂತರ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ನಟಿಸಲಿದ್ದಾರೆ ರಕ್ಷಿತ್ ಶೆಟ್ಟಿ.