Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಟಭಯಂಕರ'ನಿಗೆ ಜೊತೆಯಾದ 'ನಾರಾಯಣ'
Recommended Video
ಪ್ರಥಮ್ ಅಂದ್ರೆನೇ ಹಾಗೆ. ಕಷ್ಟಪಟ್ಟು ಮಾಡಿರುವ ಸಿನಿಮಾನ ಜನರಿಗೆ ತಲುಪಿಸಬೇಕು ಎಂಬ ಕಾರಣಕ್ಕೆ ಎಂತಹ ಸಾಹಸಕ್ಕೆ ಬೇಕಾದರೂ ಕೈ ಹಾಕ್ತಾರೆ. ದೇವೇಗೌಡರಿಂದ ವಿಶ್ ಮಾಡಿಸ್ತಾರೆ, ಅಡ್ವಾಣಿ ಅವರಿಂದ ಸಿನಿಮಾ ಲಾಂಚ್ ಮಾಡಿಸ್ತಾರೆ. ಕೈಗೆ ಸಿಗದ ಸ್ಟಾರ್ ನಟರಿಂದ ಸಿನಿಮಾ ಪ್ರಚಾರ ಮಾಡಿಸ್ತಾರೆ.
ಈಗ, ಪ್ರಥಮ್ ನಟಿಸಿ, ನಿರ್ದೇಶಿಸಿರುವ ನಟಭಯಂಕರ ಚಿತ್ರಕ್ಕೆ 'ಅವನೇ ಶ್ರೀಮನ್ನಾರಾಯಣ' ರಕ್ಷಿತ್ ಶೆಟ್ಟಿ ಜೊತೆಯಾಗಿದ್ದಾರೆ. ನಟಭಯಂಕರ ಸಿನಿಮಾದ 'ಗೀತಾ ಗೀತಾ ಗಾಂಚಲಿ ಗೀತಾ.....' ಮೆಲೋಡಿ ಹಾಡನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ.
ಈ ವಿಷ್ಯದಲ್ಲಿ 'ದಬಾಂಗ್ 3'ಯನ್ನು ಮೀರಿಸಿದೆ 'ಅವನೇ
ಸದ್ಯಕ್ಕೆ ರಕ್ಷಿತ್ ಶೆಟ್ಟಿ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ತಾವಾಯ್ತು, ತಮ್ಮ ಸಿನಿಮಾ ಆಯ್ತು ಎಂದು ಬ್ಯುಸಿ ಆಗಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಎಂಬ ಪ್ಯಾನ್ ಇಂಡಿಯಾ ಸಿನಿಮಾ ಜೊತೆ 'ಚಾರ್ಲಿ 777' ಚಿತ್ರವನ್ನು ಮಾಡುತ್ತಿದ್ದಾರೆ.
ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿದ ಲಾರ್ಡ್ ಪ್ರಥಮ್
ಇಂತಹ ಸಂದರ್ಭದಲ್ಲಿ ಪ್ರಥಮ್, ರಕ್ಷಿತ್ ಶೆಟ್ಟಿ ಅವರನ್ನ ಭೇಟಿ ಮಾಡಿ, ಅವರಿಂದ ಆಡಿಯೋ ರಿಲೀಸ್ ಮಾಡಿಸಲು ತಯಾರಾಗಿದ್ದಾರೆ. ಅಂದ್ಹಾಗೆ, ಈ ಡ್ಯುಯೆಟ್ ಹಾಡನ್ನು ರಕ್ಷಿತ್ ಶೆಟ್ಟಿ ಕೇಳಿದ್ದಾರಂತೆ. ಹಾಡು ಕೇಳಿದ್ಮೇಲೆ ಬಹಳ ಖುಷಿಯಾದ ಶೆಟ್ಟರು, ''ಒಂಥರಾ ನಮಗೂ ಕನೆಕ್ಟ್ ಆಗ್ತಿದೆ, ಹಾಡು ತುಂಬಾ ಚೆನ್ನಾಗಿದೆ'' ಎಂದರಂತೆ.
ಈ ಹಾಡಿಗೆ ಅರಸು ಅಂತಾರೆ ಸಾಹಿತ್ಯ ರಚಿಸಿದ್ದಾರೆ. ಸಂಚಿತ್ ಹೆಗ್ಡೆ ಹಾಡಿದ್ದಾರೆ. ಪ್ರದ್ಯೋಥನ್ (ದೇವ್ರಂಥಾ ಮನುಷ್ಯ) ಸಂಗೀತ ನೀಡಿದ್ದಾರೆ. 'ರನ್ ಅಂಟೋನಿ' ಚಿತ್ರದಲ್ಲಿ ನಟಿಸಿದ್ದ ಸುಶ್ಮಿತಾ ನಾಯಕಿಯಾಗಿ ನಟಿಸಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಲೀಲಾವತಿ, ಕುರಿ ಪ್ರತಾಪ್, ಶೋಭರಾಜ್, ಓಂ ಪ್ರಕಾಶ್ ರಾವ್, ಬಿರಾದರ್ ಅಂತಹ ಕಲಾವಿದರು ಇದ್ದಾರೆ.