Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಇನ್ನೋವಾ ಹೈಕ್ರಾಸ್ನ ಹೊಸ ರೂಪಾಂತರದ ವಿಶೇಷತೆಗಳೇನು?
- News Lok Sabha Election 2024: ಮತದಾರರಿಗೆ ವಿಶೇಷ ಬಸ್ & ರೈಲುಗಳ ವ್ಯವಸ್ಥೆ- ಸಂಪೂರ್ಣ ವಿವರ ತಿಳಿಯಿರಿ!
- Technology ಇದೇ ಏಪ್ರಿಲ್ 22 ರಂದು ರಿಯಲ್ಮಿ ಈ ಹೊಸ ಫೋನ್ ಸೇಲ್ ಪ್ರಾರಂಭ!
- Finance Bengaluru rain: ಇಂದು ನಾಳೆ ಬೆಂಗಳೂರಿನಲ್ಲಿ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ ವಿವರ
- Lifestyle ಇದೇ ನೋಡಿ ಭಾರತದ ಮೊಟ್ಟ ಮೊದಲು ರೈಲು..! ಇಂದಿಗೆ ಈ ರೈಲು ಹೊರಟು 171 ವರ್ಷ..!
- Sports KKR vs RR: ಐಪಿಎಲ್ನ ಶತಕಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್ ದಾಖಲೆ ಹಿಂದಿಕ್ಕಿದ ಜೋಸ್ ಬಟ್ಲರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ರಕ್ಷಿತ್ ಮೊದಲ ಸಂದೇಶ ಏನು ಗೊತ್ತಾ?
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಿನ್ನೆ ರಾತ್ರಿಯಿಂದನೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ರಕ್ಷಿತ್. ಇಂದು ಹುಟ್ಟೂರಿನಲ್ಲಿರುವ ಕಿರಿಕ್ ಸ್ಟಾರ್ ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಲಿದ್ದಾರೆ.
ಇಂದು ರಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಾಕಷ್ಟು ಗಿಫ್ಟ್ ಗಳನ್ನು ನೀಡಿದ್ದಾರೆ. ರಕ್ಷಿತ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದ ನಂತರ ರಕ್ಷಿತ್ ಅಭಿನಯದ ಚಿತ್ರಗಳು ಮತ್ತೆ ತೆರೆ ಮೇಲೆ ಬಂದಿಲ್ಲ.
ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗಿಫ್ಟ್
ಸಿಂಪಲ್ ಸ್ಟಾರ್ ನನ್ನು ತೆರೆ ಮೇಲೆ ನೋಡದೆ ಸುಮಾರು ಎರಡು ವರ್ಷಕ್ಕು ಅಧಿಕ ಸಮಯವಾಗಿದೆ. ಅಲ್ಲದೆ ರಕ್ಷಿತ್ ಸಾಮಾಜಿಕ ಜಾಲತಾಣದಿಂದನೂ ದೂರ ಸರಿದಿದ್ದರು. ಅಭಿಮಾನಿಗಳ ಜೊತೆಗಿನ ಸಂವಾದವನ್ನೆ ಕಡಿದುಕೊಂಡಿದ್ದ ರಕ್ಷಿತ್ ಈಗ ಮತ್ತೆ ವಾಪಸ್ ಆಗಿದ್ದಾರೆ. ಸಿನಿಮಾ ಮೂಲಕ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಕ್ಕು ವಾಪಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ರಕ್ಷಿತ್ ಮೊದಲ ಸಂದೇಶ ಏನು ಗೊತ್ತಾ? ಮುಂದೆ ಓದಿ..
|
ಚಂಡಮಾರುತ ಬರುವ ಮುನ್ನ ಮೌನವಿರುತ್ತಾ?
ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಮೊದಲ ಸಂದೇಶ ಕಳುಹಿಸಿದ್ದಾರೆ. ಚಂಡಮಾರುತ ಬರುವ ಮುನ್ನ ಮೌನವಿರುತ್ತಾ? ಎಂದು ಹೇಳಿದ್ದಾರೆ. ಆದ್ರೆ ಯಾವ ಅರ್ಥದಲ್ಲಿ ಎನ್ನುವುದು ಮಾತ್ರ ಸ್ಪಷ್ಟವಾಗಿ ತಿಳಿಸಿಲ್ಲವಾದ್ರು, ಇಷ್ಟು ದಿನಗಳು ಸೈಲೆಂಟ್ ಆಗಿ ಇದ್ದು, ಈಗ ಬಿರುಗಾಳಿಯಂತೆ ಎಂಟ್ರಿ ಕೊಟ್ಟಿದ್ದೀನಿ ಎನ್ನುವ ಅರ್ಥದಲ್ಲಿ ಹೇಳಿ ಕೊಂಡಿದ್ದಾರಾ ಎನ್ನುವುದು ಅಭಿಮಾನಿಗಳ ಊಹೆಯಾಗಿದೆ.
ಮತ್ತೆ ಸಾಮಾಜಿಕ ಜಾಲತಾಣಕ್ಕೆ ಬರ್ತಿದ್ದಾರೆ ರಕ್ಷಿತ್ ಶೆಟ್ಟಿ
ರಕ್ಷಿತ್ ಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ
ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಚಂಡಮಾರುತ ಬರುವ ಮುನ್ನ ಮೌನವಿರುತ್ತಾ? ಎಂದು ಟ್ವೀಟ್ ಮಾಡಿರುವ ರಕ್ಷಿತ್ ಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರುವ ಜೊತೆಗೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಿಂದ ದೂರಸರಿದಿದ್ದ ರಕ್ಷಿತ್
ಕಿರಿಕ್ ಸ್ಟಾರ್ ಅನೇಕ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಿಂದ ದೂರಸರಿದ್ದಿದ್ದರು. ಯಾವುದೊ ಕಾರಣಕ್ಕೆ ದಿಢೀರನೆ ಮಾಯವಾಗಿದ್ದ ರಕ್ಷಿತ್ ಮೇಲೆ ಅಭಿಮಾನಿಗಳ ಬೇಸರವು ಇತ್ತು. ಆದ್ರೀಗ ಹುಟ್ಟುಹಬ್ಬದ ದಿನ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ರಕ್ಷಿತ್ ಸಿನಿಮಾ ಕೂಡ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ಇಷ್ಟು ದಿನಗಳು ಸೈಸೆಂಟ್ ಆಗಿದ್ದ ಕಿರಿಕ್ ಸ್ಟಾರ್ ಈಗ ಜಜರ್ದಸ್ತ್ ಎಂಟ್ರಿ ಅಭಿಮಾನಿಗಳಿಗೆ ಸಂತಸ ನೀಡಿದೆ.
'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಚಿತ್ರಕ್ಕೆ ಮೂರು ವರ್ಷ
ಆಗಸ್ಟ್ ನಲ್ಲಿ 'ಅವನೇ ಶ್ರೀಮನ್ನಾರಾಯಣ' ರಿಲೀಸ್
ಆಗಸ್ಟ್ ನಲ್ಲಿ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಗೆ ಪ್ಲಾನ್ ಮಾಡಿದ ಚಿತ್ರತಂಡ. ಈಗಾಗಲೆ ಚಿತ್ರೀಕರಣ ಮುಗಿಸಿರುವ 'ಅವನೇ ಶ್ರೀಮನ್ನಾರಾಯಣ' ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಸದ್ಯ ಪೋಸ್ಟರ್ ರಿಲೀಸ್ ಆಗಿದ್ದು ಚಿತ್ರ ಭಾರಿ ಕುತೂಹಲ ಹುಟ್ಟುಹಾಕಿದೆ.