Don't Miss!
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸಂಜು' ನೋಡಿ ಬೇಸರಗೊಂಡ ವರ್ಮಾ ಕೊಟ್ರು ಬ್ರೇಕಿಂಗ್ ನ್ಯೂಸ್
ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ 'ಸಂಜು' ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಸದ್ಯ, 300 ಕೋಟಿ ಗಳಿಕೆ ಕಂಡಿರುವ ಈ ಸಿನಿಮಾ ಈ ವರ್ಷದ ದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಹಾಗೂ ರಣ್ಬೀರ್ ಕಪೂರ್ ವೃತ್ತಿ ಜೀವನದಲ್ಲೇ ಇದು ಮೈಲಿಗಲ್ಲಾಗಿದೆ.
'ಸಂಜು' ಸಿನಿಮಾವನ್ನ ನೋಡಿ ಬಹುತೇಕರು ಖುಷಿ ಪಟ್ಟಿದ್ದು, ಸಂಜಯ್ ದತ್ ನಿಜ ಜೀವನ ಹೀಗಿತ್ತಾ ಎಂದು ಕುತೂಹಲದಿಂದ ನೋಡುತ್ತಿದ್ದಾರೆ. ಇನ್ನು ಕೆಲವರು ಇದು ದತ್ ಅವರನ್ನ ಅಮಾಯಕರನ್ನಾಗಿಸುವ ಉದ್ದೇಶದಿಂದ ಮಾಡಿರುವ ಸಿನಿಮಾ ಎಂದು ಟೀಕಿಸಿದ್ದರು.
ಇದೀಗ 'ಸಂಜು' ಸಿನಿಮಾದ ಬೇಸರ ವ್ಯಕ್ತಪಡಿಸಿರುವ ವರ್ಮಾ, ಸಂಜಯ್ ದತ್ ಅವರ ನಿಜ ಜೀವನವನ್ನ ತೆರೆಮೇಲೆ ತರುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. ಹೌದು, ರಾಜ್ಕುಮಾರ್ ಹಿರಾನಿಯ 'ಸಂಜು' ಸಿನಿಮಾದ ಇನ್ನೊಂದು ಭಾಗವೆಂಬಂತೆ ಸಿನಿಮಾ ಮಾಡಲಿದ್ದಾರೆ ಆರ್.ಜಿ.ವಿ. ಹಾಗಿದ್ರೆ, ವರ್ಮಾ ಮಾಡಲಿರುವ ಕಥೆ ಯಾವುದು.? ಮುಂದೆ ಓದಿ...
ಸಂಜು: ದಿ ರಿಯಲ್ ಸ್ಟೋರಿ
ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಸಿನಿಮಾ ನೋಡಿದ ರಾಮ್ ಗೋಪಾಲ್ ವರ್ಮಾ ಸಿನಿಮಾವನ್ನ ಇಷ್ಟಪಟ್ಟಿದ್ದಾರೆ. ಆದ್ರೆ, ಸಂಜಯ್ ದತ್ ಜೀವನದಲ್ಲಿ ನಿಜವಾಗಲು ಎದುರಿಸಿದ ಕೆಲವು ಗಂಭೀರವಾದ ಘಟನೆಗಳನ್ನ ಬಗ್ಗೆ ಸಿನಿಮಾದಲ್ಲಿ ತೋರಿಸಿಲ್ಲ. ಹೀಗಾಗಿ, ಅದೇ ಅಂಶಗಳನ್ನಿಟ್ಟು ನಾನು ಸಿನಿಮಾ ಮಾಡ್ತೀನಿ ಎಂದು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
'ಸಂಜು' ಮಾಡಿದ್ದಕ್ಕೆ ಸಂಜಯ್ ದತ್ ಗೆ ಎಷ್ಟು ಕೋಟಿ ಸಿಕ್ಕಿದೆ?
ಬಾಂಬ್ ಬ್ಲಾಸ್ಟ್ ಮತ್ತು ಗನ್ ಕಥೆ
'ಸಂಜು: ದಿ ರಿಯಲ್ ಸ್ಟೋರಿ' ಎಂಬ ಹೆಸರಿನಲ್ಲಿ ವರ್ಮಾ ಸಿನಿಮಾ ಮಾಡಲು ಹೊರಟಿದ್ದಾರೆ. ಅಂದ್ಹಾಗೆ, ವರ್ಮಾ ಈ ಕಥೆಯಲ್ಲಿ ಎಲ್ಲವನ್ನು ಹೇಳುತ್ತಿಲ್ಲ. ಬದಲಾಗಿ ಕೇವಲ ಎರಡು ಪ್ರಮುಖ ಘಟನೆಗಳ ಸುತ್ತ ಸಿನಿಮಾ ಮಾಡ್ತಿದ್ದಾರೆ. 1993ರ ಮುಂಬೈ ಬಾಂಬ್ ಬ್ಲಾಸ್ಟ್ ಮತ್ತು ಪರವಾನಗಿ ಇಲ್ಲದೇ AK 56 ಗನ್ ಇಟ್ಟುಕೊಂಡಿದ್ದ ಪ್ರಕರಣವನ್ನ ತೆರೆಮೇಲೆ ತರಲು ಆರ್.ಜಿ.ವಿ ನಿರ್ಧರಿಸಿದ್ದಾರೆ.
'ಸಂಜು' ಹವಾ ಬಲು ಜೋರು: ಸಲ್ಮಾನ್ ನ ಸೈಡಿಗೆ ತಳ್ಳಿದ ರಣ್ಬೀರ್ ಕಪೂರ್.!
ಸಂಶೋಧನೆ ಆರಂಭಿಸಿರುವ ಆರ್.ಜಿ.ವಿ
ಈ ಚಿತ್ರಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಂಶೋಧನೆ ಆರಂಭಿಸಿದ್ದಾರೆ ಎನ್ನಲಾಗಿದೆ. ಸಂಜಯ್ ದತ್ ಅವರ ಆಪ್ತರು ಹಾಗೂ ಪೊಲೀಸ್ ಇಲಾಖೆಯ ಕೆಲವರ ಬಳಿ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರಂತೆ.
ದತ್ ಜೊತೆ ಎರಡು ಸಿನಿಮಾ ಮಾಡಿರುವ ವರ್ಮಾ
ಅಂದ್ಹಾಗೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊತೆಯಲ್ಲಿ ಸಂಜಯ್ ದತ್ ಎರಡು ಸಿನಿಮಾ ಮಾಡಿದ್ದಾರೆ. 1997ರ 'Daud' ಮತ್ತು 2012ರಲ್ಲಿ ಬಿಡುಗಡೆಯಾಗಿದ್ದ 'ಡಿಪಾರ್ಟ್ ಮೆಂಟ್' ಸಿನಿಮಾ. ಈಗ ಅವರದ್ದೇ ಸಿನಿಮಾವನ್ನ ಪ್ರಮಾಣಿಕವಾಗಿ ಮಾಡಲು ಮುಂದಾಗಿದ್ದಾರೆ.