Don't Miss!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- News ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Sports David Warner: ಊಟನೂ ಬೇಡ, ಹುಡುಗಿನೂ ಬೇಡ; ಆಧಾರ್ ಕಾರ್ಡ್ ಬೇಕೆಂದ ಡೇವಿಡ್ ವಾರ್ನರ್!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಹುಬಲಿ' ಚಿತ್ರವನ್ನ ಕೈಬಿಟ್ಟ ಶ್ರೀದೇವಿಯ ಅಸಲಿ ಕಾರಣ ಬಿಚ್ಚಿಟ್ಟ ವರ್ಮಾ
ರಾಜಮೌಳಿ ನಿರ್ದೇಶನದಲ್ಲಿ ತಯಾರಾಗಿದ್ದ ಮೆಗಾಸಿನಿಮಾ ಬಾಹುಬಲಿ ಎರಡು ಕಂತು ಮುಗಿದರೂ, ಆ ಚಿತ್ರದ ಕುರಿತು ಕೆಲವು ವಿಚಾರಗಳು ಮಾತ್ರ ಇನ್ನು ನಿಗೂಢವಾಗಿಯೇ ಉಳಿದಿದೆ. ಅವುಗಳಲ್ಲಿ ನಟಿ ಶ್ರೀದೇವಿಯ ಕೂಡ ಒಬ್ಬರು.
ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೇ ಶ್ರೀದೇವಿ 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಈ ದೊಡ್ಡ ಸಿನಿಮಾವನ್ನ ಕೈಬಿಟ್ಟರು. ಇಂತಹ ಚಿತ್ರವನ್ನ ಶ್ರೀದೇವಿ ಬಿಟ್ಟಿದ್ದು ಯಾಕೆ ಎಂಬ ಪ್ರಶ್ನೆ ಚಿತ್ರಪ್ರೇಮಿಗಳನ್ನ ಕಾಡುತ್ತಿತ್ತು. ಈಗಲೂ ಕಾಡುತ್ತಿದೆ.
ಬೋನಿಯನ್ನ ನಷ್ಟದ ಕೂಪಕ್ಕೆ ತಳ್ಳಿದ್ದು ಶ್ರೀದೇವಿ ಅಭಿನಯದ 'ಈ' ಚಿತ್ರ.!
ಈ ಬಗ್ಗೆ ರಾಜಮೌಳಿ ಕಾರಣ ಬಹಿರಂಗಪಡಿಸಿಲ್ಲ, ಅತ್ತ ಕಾರಣ ಹೇಳಲು ಶ್ರೀದೇವಿಯೇ ಇಲ್ಲ. ಇಂತಹ ಸಂದರ್ಭದಲ್ಲಿ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. 'ಬಾಹುಬಲಿ' ಚಿತ್ರದಿಂದ ಹಿಂದೆ ಸರಿಯಲು ಕಾರಣ ಬೋನಿ ಕಪೂರ್ ಎಂದು ಅಚ್ಚರಿ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ವರ್ಮಾ ಬಾಹುಬಲಿ ಚಿತ್ರವನ್ನ ಮಾಡದಿರುವ ಬಗ್ಗೆ ಶ್ರೀದೇವಿ ಬಳಿ ಚರ್ಚೆ ನಡೆಸಿದ್ದರಂತೆ. ಆರ್.ಜಿ.ವಿ ಹೇಳುವ ಪ್ರಕಾರ ಶ್ರೀದೇವಿಗೆ ಈ ಚಿತ್ರದಲ್ಲಿ ನಟಿಸುವ ಆಸೆಯಿತ್ತಂತೆ. ಇಂತಹ ದೊಡ್ಡ ಚಿತ್ರದಲ್ಲಿ ಅಭಿನಯಿಸಲು ಕಾತುರದಿಂದ ಇದ್ದರಂತೆ. ಆದ್ರೆ, ಬೋನಿ ಕಪೂರ್ ಸಂಭಾವನೆ ವಿಚಾರದಲ್ಲಿ ಇಟ್ಟಿದ್ದ ಬೇಡಿಕೆಯಿಂದ ಈ ಪ್ರಾಜೆಕ್ಟ್ ಕಳೆದುಕೊಳ್ಳಬೇಕಾಯಿತು'' ಎಂದು ವರ್ಮಾ ತಿಳಿಸಿದ್ದಾರೆ.
ಶ್ರೀದೇವಿ ಹಠಾತ್ ನಿಧನದ ಬಗ್ಗೆ ಸಹೋದರಿ ಶ್ರೀಲತಾ ಮೌನವಾಗಿರೋದು ಯಾಕೆ.?
ಆ ನಂತರವೇ ಶ್ರೀದೇವಿ ಜಾಗಕ್ಕೆ ಬಹುಭಾಷೆ ನಟಿ ರಮ್ಯಾಕೃಷ್ಣ ಎಂಟ್ರಿ ಕೊಟ್ಟರು. ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ಕಾಣಿಸಿಕೊಂಡ್ರು, ಬಾಹುಬಲಿ ಮತ್ತು ಬಲ್ಲಾಳದೇವ ಪಾತ್ರಗಳ ನಂತರ ಶಿವಗಾಮಿ ಪಾತ್ರವೇ ಹೆಚ್ಚು ಖ್ಯಾತಿ ಗಳಿಸಿಕೊಂಡಿತ್ತು.
ಶ್ರೀದೇವಿ ಒಪ್ಪಿದ್ದರೂ ಬೋನಿ ಕಪೂರ್ ಒಪ್ಪದೇ ಹೋಗಿದ್ದು ಬಾಹುಬಲಿ ಚಿತ್ರವನ್ನ ಕೈಬಿಡುವಂತೆ ಮಾಡಿತು. ಬೋನಿ ಕಪೂರ್ ಅವರಿಂದ ಕೇವಲ 'ಬಾಹುಬಲಿ' ಚಿತ್ರ ಮಾತ್ರವಲ್ಲ, ಅನೇಕ ಚಿತ್ರಗಳನ್ನ ಶ್ರೀದೇವಿ ಬಿಟ್ಟಿದ್ದಾರೆ.