Don't Miss!
- News ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್ಐಎ
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ?
Recommended Video
'ರೈ' ಸಿನಿಮಾ ಹೆಸರನ್ನು ಈಗ ಅನೇಕರು ಮರೆತು ಬಿಟ್ಟಿದ್ದಾರೆ. ಅದ್ದೂರಿಯಾಗಿ ಲಾಂಚ್ ಆದ ಈ ಸಿನಿಮಾ ಶುರುವಿನಲ್ಲಿ ದೊಡ್ಡ ಸದ್ದು ಮಾಡಿದ್ದ ಈ ಚಿತ್ರ ಆ ನಂತರ ಅದೆಕೋ ಸೈಲೆಂಟ್ ಆಗಿ ಹೋಯ್ತು. ಅನೇಕರು ಈ ಸಿನಿಮಾ ಬರುತ್ತದೆಯೋ.. ಇಲ್ವೋ..? ಎನ್ನುವ ಅನುಮಾನದಲ್ಲಿ ಇದ್ದರು. ಆದರೆ ಇದೀಗ ಈ ಸಿನಿಮಾ ನಿಂತಿಲ್ಲ ಎಂದು ಸ್ವತಃ ನಿರ್ದೇಶಕ ರಾಮ್ ಗೋಪಾಲ್ ವರ್ಮ ಹೇಳಿದ್ದಾರೆ.
ರಾಮ್ ಗೋಪಾಲ್ ವರ್ಮ ರಿಯಲ್ ಸ್ಟೋರಿಯನ್ನು ಮಾಡುವುದರಲ್ಲಿ ಎತ್ತಿದ ಕೈ. ಅದೇ ರೀತಿ ವರ್ಮ ಮುತ್ತಪ್ಪ ರೈ ಜೀವನದ ಬಗ್ಗೆ 'ರೈ' ಸಿನಿಮಾ ಮಾಡುವುದಾಗಿ ಹೇಳಿದ್ದರು. ವಿವೇಕ್ ಒಬೆರಾಯ್ ಸಿನಿಮಾದ ನಾಯಕನಾಗಿದ್ದರು. ಸಿ.ಆರ್.ಮನೋಹರ್ ಚಿತ್ರಕ್ಕೆ ಬಂಡವಾಳ ಹಾಕಲು ಮುಂದೆ ಬಂದಿದ್ದರು. ಇವುಗಳ ಜೊತೆಗೆ ಸಿನಿಮಾ ಕೂಡ ಲಾಂಚ್ ಆಗಿತ್ತು. ಆದರೆ ಅದರ ನಂತರ ಚಿತ್ರದ ಶೂಟಿಂಗ್ ಶುರು ಇದುವರೆಗೆ ಆಗಿಯೇ ಇಲ್ಲ.
'ರೈ' ಸಿನಿಮಾದ ಚಿತ್ರೀಕರಣ ಯಾಕೆ ಶುರು ಆಗಿಲ್ಲ. ಸಿನಿಮಾ ಲಾಂಚ್ ಆಗಿ ಇಷ್ಟ ದಿನ ಆದರೂ ಅದರ ಸುದ್ದಿಯೇ ಯಾಕಿಲ್ಲ. ಹಾಗಾದರೆ, 'ರೈ' ಸಿನಿಮಾ ನಿಂತು ಹೋಗಿದೇಯಾ? ಎನ್ನುವುದು ಎಲ್ಲರಿಗೂ ಇದ್ದ ಪ್ರಶ್ನೆ. ಆದರೆ ಈಗ ಅದರ ಬಗ್ಗೆ ವರ್ಮ ಬಾಯಿ ಬಿಟ್ಟಿದ್ದಾರೆ. ''ರೈ ಸಿನಿಮಾ ನಿಂತಿಲ್ಲ. ಅದು ಕಾರಣಾಂತರಗಳಿಂದ ಮುಂದಕ್ಕೆ ಹೋಗಿದೆ ಅಷ್ಟೆ'' ಎಂದು ವರ್ಮ ಚಿತ್ರದ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.
'ಟಗರು' ಮೇಲೆ ಬಿತ್ತು ಆರ್.ಜಿ.ವಿ ಕಣ್ಣು : ಮಾನ್ವಿತಾ ಬಗ್ಗೆ ವರ್ಮ ಕಮೆಂಟ್
ಅಂದಹಾಗೆ, ನಿನ್ನೆ ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ರಾಮ್ ಗೋಪಾಲ್ ವರ್ಮ 'ಟಗರು' ಸಿನಿಮಾವನ್ನು ನೋಡಿದರು. ಇದೇ ವೇಳೆ 'ರೈ' ಸಿನಿಮಾದ ಬಗ್ಗೆ ಕೂಡ ಅವರು ಹೇಳಿಕೆ ನೀಡಿದ್ದಾರೆ.