Don't Miss!
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಮಾ ಮಾಡಿದ ಆ ಚಿತ್ರದಿಂದಲೇ ಸಿಎಂ ಸ್ಥಾನ ಕಳೆದುಕೊಂಡ್ರಂತೆ ಚಂದ್ರಬಾಬು.!
ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರ ಬಾಬು ನಾಯ್ದು ಸಾರಥ್ಯದ ಟಿಡಿಪಿ ಸರ್ಕಾರ ನೆಲಕಚ್ಚಿದ್ದು, ಜಗಮೋಹನ್ ರೆಡ್ಡಿ ಸಾರಥ್ಯದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡಿದೆ.
ಕಳೆದ ಐದು ವರ್ಷ ಮುಖ್ಯಮಂತ್ರಿ ಆಗಿದ್ದ ಚಂದ್ರಬಾಬು ನಾಯ್ಡು ದಿಢೀರ್ ಅಂತ ಈ ಸ್ಥಿತಿ ತಲುಪಲು ಕಾರಣವೇನು ಎಂದು ಹುಡುಕುತ್ತಾ ಹೋದರೆ, ಕೆಲವರ ಬೆರಳು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕಡೆ ತೋರಿಸುತ್ತಿದ್ದಾರೆ.
ರಾಮ್ ಗೋಪಾಲ್ ವರ್ಮಾಗೆ 50 ಕೋಟಿ ಆಫರ್ ನೀಡಿದ್ರಾ ಚಂದ್ರಬಾಬು ನಾಯ್ಡು.?
ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಸೋಲಿನಲ್ಲಿ ವರ್ಮಾ ಅವರ ಶ್ರಮ ಕೂಡ ಎಂದು ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲ್ ಆಗ್ತಿದ್ದಾರೆ ಆರ್.ಜಿ.ವಿ. ಸ್ವತಃ ವರ್ಮಾ ಕೂಡ ಇದನ್ನೆ ಹೇಳಿಕೊಂಡು ಮಾಜಿ ಸಿಎಂ ಬಾಬು ಅವರನ್ನ ಟ್ರೋಲ್ ಮಾಡ್ತಿದ್ದಾರೆ.
Present position pic.twitter.com/gXB0wpmyTn
— Ram Gopal Varma (@RGVzoomin) May 24, 2019
ಹೌದು, ರಾಮ್ ಗೋಪಾಲ್ ವರ್ಮಾ ಮಾಡಿದ್ದ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಇನ್ನೊಂದು ಮುಖವನ್ನ ಪರಿಚಯ ಮಾಡಿದ್ದರು. ಎನ್.ಟಿ.ಆರ್ ಗೆ ನಂಬಿಕೆ ದ್ರೋಹ ಮಾಡಿದ್ರು. ಅವರ ಬ್ನೆನಿಗೆ ಚಾಕು ಹಾಕಿದರು. ಎನ್.ಟಿ.ಆರ್ ಗೆ ಮಾನಸಿಕ ಹಿಂಸೆ ನೀಡಿದ್ರು ಎಂಬಂತೆ ಸಿನಿಮಾ ಮಾಡಲಾಗಿತ್ತು. ಇದರ ಪರಿಣಾಮ ಈಗ ಚಂದ್ರಬಾಬು ನಾಯ್ಡುಗೆ ಗೇಟ್ ಪಾಸ್ ಸಿಕ್ಕಿದೆಯಂತೆ.
ಎನ್.ಟಿ.ಆರ್ ನಂತರ ಮತ್ತೊಬ್ಬ ರಾಜಕಾರಣಿ ಬಗ್ಗೆ ವರ್ಮಾ ಸಿನಿಮಾ
నిన్న రాత్రి స్వర్గీయ ఎన్.టీ.ఆర్ గారు నా కలలోకి వచ్చి లక్ష్మీస్ ఎన్.టీ.ఆర్ విడుదల ఆపినందుకే CBN ని దారుణంగా ఒడిపోయేలా చేశానని చెప్పారు. pic.twitter.com/5oOZfpUjm5
— Ram Gopal Varma (@RGVzoomin) May 24, 2019
ಸದ್ಯ ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿರುವ ಎನ್.ಟಿ.ಆರ್ ಪತ್ನಿ ಲಕ್ಷ್ಮಿ ಅವರ ದೃಷ್ಟಿಕೋನದಲ್ಲಿ ಎನ್.ಟಿ.ಆರ್ ಅವರ ಕೊನೆಯ ಹಂತದ ಜೀವನ ಹೇಗಿತ್ತು ಎಂದು ಈ ಚಿತ್ರದಲ್ಲಿ ತೋರಿಸಿದ್ದರು. ಈ ಚಿತ್ರವನ್ನ ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಲು ಚಂದ್ರಬಾಬು ನಾಯ್ಡು ಬಿಟ್ಟಿರಲಿಲ್ಲ.
ಬೇರೆ ರಾಜ್ಯಗಳಲ್ಲಿ ತೆರೆಕಂಡಿದ್ದ ಸಿನಿಮಾ ನಂತರ ಆಂಧ್ರಪ್ರದೇಶದಲ್ಲಿ ಬಿಡುಗಡೆಯಾಗಿತ್ತು. ಈಗ ಆಂಧ್ರದಲ್ಲಿ ಸರ್ಕಾರವೇ ಬದಲಾಗಿದೆ. ಅಧಿಕಾರದಲ್ಲಿದ್ದ ಟಿಡಿಪಿಗೆ ಭಾರಿ ಮುಖಭಂಗವಾಗಿದೆ. ಈ ಖುಷಿಯನ್ನ ಆರ್.ಜಿ.ವಿ ಕೂಡ ಸೆಲೆಬ್ರೆಟ್ ಮಾಡ್ತಿದ್ದಾರೆ.