twitter
    For Quick Alerts
    ALLOW NOTIFICATIONS  
    For Daily Alerts

    'ರಾಮ್ ಫೋನ್ ಮಾಡಿಲ್ಲ, ಎಲ್ಲಾ ಸುಳ್ಳು' ಎಂದ ನಟಿ ಶ್ರುತಿ ಹರಿಹರನ್

    |

    ಇಂದು ಬೆಳಗ್ಗೆಯಷ್ಟೇ ಕನ್ನಡ ನಟ ಅರ್ಜುನ್ ಸರ್ಜಾ ಅವರ ಆಪ್ತ, ಉದ್ಯಮಿ ಪ್ರಶಾಂತ್ ಸಂಬರ್ಗಿ ಒಂದು ಬಾಂಬ್ ಸಿಡಿಸಿದರು. ಅದೇನೆಂದರೆ, ನಿನ್ನೆ ಸಂಜೆ ಪ್ರಶಾಂತ್ ಸಂಬರ್ಗಿ ಅವರಿಗೆ ಒಂದು ಫೋನ್ ಕಾಲ್ ಬಂದಿತ್ತಂತೆ. ಶ್ರುತಿ ಹರಿಹರನ್ ಗೆ ಬೇಕಾಗಿರುವ ರಾಮ್ ಎಂಬಾತ ಫೋನ್ ಮಾಡಿ ''ರಾಜಿ ಸಂಧಾನ'' ಮಾಡಿಕೊಳ್ಳುವಂತೆ ಪ್ರಶಾಂತ್ ಸಂಬರ್ಗಿಗೆ ಹೇಳಿದ್ದನಂತೆ.

    ಇದೇ ವಿಚಾರದ ಕುರಿತು ಸದ್ಯದಲ್ಲೇ ಉದ್ಯಮಿ ಪ್ರಶಾಂತ್ ಸಂಬರ್ಗಿ ಪ್ರೆಸ್ ಮೀಟ್ ನಡೆಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಲವು ಸತ್ಯಗಳನ್ನು ಬಯಲು ಮಾಡುವುದಾಗಿ ಉದ್ಯಮಿ ಪ್ರಶಾಂತ್ ಸಂಬರ್ಗಿ ತಿಳಿಸಿದ್ದಾರೆ.

    ಹೀಗಿರುವಾಗಲೇ, ''ಇವೆಲ್ಲ ಸುಳ್ಳು ಸುದ್ದಿ. ರಾಮ್ ಫೋನ್ ಮಾಡಿಲ್ಲ'' ಅಂತ ನಟಿ ಶ್ರುತಿ ಹರಿಹರನ್ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ, ''ರಾಮ್ ನನ್ನ ಸಪೋರ್ಟ್ ನಲ್ಲಿ ಇದ್ದಾರೆ'' ಎಂದೂ ಶ್ರುತಿ ಹರಿಹರನ್ ಹೇಳಿದ್ದಾರೆ. ಮುಂದೆ ಓದಿರಿ...

    ಎಲ್ಲಾ ಸುಳ್ಳು ಸುದ್ದಿ

    ಎಲ್ಲಾ ಸುಳ್ಳು ಸುದ್ದಿ

    ''ನನಗೆ ಈ ಸುದ್ದಿ ಗೊತ್ತಿಲ್ಲ. ಇದು ತುಂಬಾ ದೊಡ್ಡ ಸರ್ಪ್ರೈಸ್ ನನಗೆ. ರಾಮ್ ಖಂಡಿತ ಕಾಲ್ ಮಾಡಿಲ್ಲ. ಅವರಿಗೆ ಯಾರೂ ಗೊತ್ತಿಲ್ಲ. ಅವರು ನನ್ನ ಸಪೋರ್ಟ್ ನಲ್ಲಿ ಇದ್ದಾರೆ. ಇದೆಲ್ಲ ಸುಳ್ಳು.. ಕಂಪ್ಲೀಟ್ ಸುಳ್ಳು ಸುದ್ದಿ. ರಾಮ್ ಫೋನ್ ಮಾಡಿಲ್ಲ'' ಎಂದಿದ್ದಾರೆ ನಟಿ ಶ್ರುತಿ ಹರಿಹರನ್.

    ಶ್ರುತಿ ಹರಿಹರನ್ ವಿವಾದ: ಇಂದು ಪ್ರಶಾಂತ್ ಸಂಬರ್ಗಿ ಇಂದ ಸಿಡಿಯಲಿದೆ ಹೊಸ ಬಾಂಬ್.! ಶ್ರುತಿ ಹರಿಹರನ್ ವಿವಾದ: ಇಂದು ಪ್ರಶಾಂತ್ ಸಂಬರ್ಗಿ ಇಂದ ಸಿಡಿಯಲಿದೆ ಹೊಸ ಬಾಂಬ್.!

    ಸಭೆಗೆ ಹಾಜರ್ ಆಗಲಿರುವ ಶ್ರುತಿ ಹರಿಹರನ್

    ಸಭೆಗೆ ಹಾಜರ್ ಆಗಲಿರುವ ಶ್ರುತಿ ಹರಿಹರನ್

    ಇಂದು ಸಂಜೆ ನಾಲ್ಕು ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯಲಿರುವ ಸಭೆಯಲ್ಲಿ ನಟಿ ಶ್ರುತಿ ಹರಿಹರನ್ ಕೂಡ ಭಾಗವಹಿಸಲಿದ್ದಾರೆ. ಅಂಬರೀಶ್ ನೇತೃತ್ವದಲ್ಲಿ ಇಂದು ಫಿಲ್ಮ್ ಚೇಂಬರ್ ನಲ್ಲಿ ಸಭೆ ನಡೆಯಲಿದೆ.

    ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!

    ಪ್ರಶಾಂತ್ ಸಂಬರ್ಗಿ ಹೇಳಿದ್ದೇನು.?

    ಪ್ರಶಾಂತ್ ಸಂಬರ್ಗಿ ಹೇಳಿದ್ದೇನು.?

    ''ನಿನ್ನೆ ಸಂಜೆ ಲ್ಯಾಂಡ್ ಲೈನ್ ಇಂದ ನನಗೊಂದು ಕರೆ ಬಂತು. ರಾಮ್ ಅಂತ ಪರಿಚಯಿಸಿಕೊಂಡ ಆತ ''ನಾನು ಶ್ರುತಿ ಹರಿಹರನ್ ಗೆ ತುಂಬಾ ಬೇಕಾಗಿರುವ ವ್ಯಕ್ತಿ'' ಎಂದು ಹೇಳಿದ. ''ದಯವಿಟ್ಟು ಈ ಕೇಸ್ ನ ರಾಜಿ ಮಾಡಿಕೊಳ್ಳಿ. ಫಿಲ್ಮ್ ಚೇಂಬರ್ ನಲ್ಲಿ ನಡೆಯುವ ಸಭೆಗೆ ರಾಜಿ ಮನಃಸ್ಥಿತಿಯಿಂದ ಬನ್ನಿ. ಇದನ್ನು ಹೀಗೇ ಮುಂದುವರೆಸಿದರೆ, ಯಾರಿಗೂ ಅನುಕೂಲ ಇಲ್ಲ'' ಅಂತ ಹೇಳಿದ'' - ಪ್ರಶಾಂತ್ ಸಂಬರ್ಗಿ, ಉದ್ಯಮಿ, ಅರ್ಜುನ್ ಸರ್ಜಾ ಸ್ನೇಹಿತ

    ನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲ

    ಪೀಠಿಕೆ ಹಾಕಿದ ದೂರವಾಣಿ ಕರೆ ಅದು

    ಪೀಠಿಕೆ ಹಾಕಿದ ದೂರವಾಣಿ ಕರೆ ಅದು

    ''ಅರ್ಜುನ್ ಸರ್ಜಾ ಹೆಸರಿಗೆ ಮಸಿ ಬಳಿದು, ಅವರ ಮನೆಯಲ್ಲಿ ಅಶಾಂತಿ ಉಂಟು ಮಾಡಿದ ಈ ಪ್ರಕರಣ ರಾಜಿ ಮಾಡಿದರೆ ನಮ್ಮ ಮನಃಸ್ಥಿತಿ ನೆಮ್ಮದಿ ಆಗಿರುವುದಿಲ್ಲ ಅಂತ ಈ ಪ್ರಸ್ತಾಪ ಬೇಡ ಎಂದು ಹೇಳಿದೆ. ''ಮಾಧ್ಯಮಗಳ ಮುಂದೆ ಕ್ಷಮೆ ಕೇಳಿ'' ಎಂದು ನಾನು ಅವರಿಗೆ ಹೇಳಿದಾಗ ''ಹಾಗೆಲ್ಲ ಮಾಡಬೇಡಿ. ರಾತ್ರಿ ಶ್ರುತಿ ಹರಿಹರನ್ ಅವರು ಚಿನ್ನೇಗೌಡರನ್ನು ಭೇಟಿ ಆಗುತ್ತಾರೆ. ನೀವೂ ಅಂಬರೀಶ್ ರನ್ನ ಭೇಟಿ ಮಾಡಿ'' ಎಂದು ಆತ ಹೇಳಿದ. ಇಂದು ನಡೆಯುವ ಸಭೆಗೆ ಪೀಠಿಕೆ ಹಾಕಿದ ದೂರವಾಣಿ ಕರೆ ಅದು'' - ಪ್ರಶಾಂತ್ ಸಂಬರ್ಗಿ, ಉದ್ಯಮಿ, ಅರ್ಜುನ್ ಸರ್ಜಾ ಸ್ನೇಹಿತ

    ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ: ಹಿಂದಿದ್ಯಾ ಷಡ್ಯಂತ್ರ, ಪ್ರತೀಕಾರ.?

    English summary
    Ram has not called anybody says Kannada Actress Sruthi Hariharan.
    Thursday, October 25, 2018, 14:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X