Don't Miss!
- News Heavy Rain Alert: ಮುಂದಿನ ನಾಲ್ಕು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ 'ಮುತ್ತಿನ ಮಳೆ'ಗರೆದ ರಮಣೀತೋ
ಸದ್ಯಕ್ಕೆ ಮಂಜುಸಾಗರ ಅವರ 'ಮುತ್ತಿನ ಮಳೆ' ಸಿನಿಮಾ ಮೊದಲ ಹಂತವನ್ನು 12 ದಿವಸಗಳಲ್ಲಿ ಚಿಕ್ಕಮಗಳೂರು ಸುತ್ತಮುತ್ತ ಮುಗಿಸಿ ಬಂದಿದೆ. ಒಂದು ಹಾಡು ಹಾಗೂ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.
ಮಂಜುಸಾಗರ್ ಅವರು ಪ್ರಪ್ರಥಮ ನಿರ್ದೇಶನದಲ್ಲಿ ತಾವೇ ನಿರ್ಮಾಪಕರಾಗಿ ಚಿತ್ರದ ನಾಯಕರೂ ಆಗಿ ಅಭಿನಯಿಸಿದ್ದಾರೆ. ಅವರು ಈ ಹಿಂದೆ ನಿರ್ದೇಶಕ ಪ್ರೇಮ್, ಕೋಡ್ಲು ರಾಮಕೃಷ್ಣ ಅವರ ಜೊತೆಯಲ್ಲಿ ಕೆಲವು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಪಡೆದಿದ್ದಾರೆ.
ಮಂಜುಸಾಗರ್ ಅವರು ಚಿತ್ರಕ್ಕೆ ಮತ್ತೊಂದು ಪ್ರಮುಖ ನಾಯಕನ ಹುಡುಕಾಟದಲ್ಲಿ ಇದ್ದಾರೆ. ಆ ಪಾತ್ರವನ್ನು ಪರಿಚಿತ ವ್ಯಕ್ತಿಯೇ ಮಾಡಬೇಕು. ಆ ಪಾತ್ರವು ಸಿನಿಮಾದ ಬಹುಮುಖ್ಯ ಅಂಗ ಸಹ ಎನ್ನುತ್ತಾರೆ ಅವರು.
'ಮುತ್ತಿನ ಮಳೆ' ಚಿತ್ರದ ನಾಯಕಿ ಆಗಿ ರಮಣೀತು ಚೌಧರಿ ಮತ್ತೊಮ್ಮೆ ಆಗಮಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅವಿನಾಷ್, ಡಾ.ಶ್ರೀನಾಥ್, ರಂಗಾಯಣ ರಘು, ವಿನಯಪ್ರಕಾಶ್, ಧರ್ಮ ಹಾಗೂ ಇನ್ನಿತರರು ಇದ್ದಾರೆ.
ಯುವ ಸಂಗೀತ ನಿರ್ದೇಶಕ ಎ.ಟಿ. ರವೀಶ್ ಅವರು ಈಗಾಗಲೇ ಎಲ್ಲ ಹಾಡುಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಹಾಡು ಚಿತ್ರಿಕರಣವೂ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಆಗಿದೆ. ಪ್ರದೀಪ್ ಗಾಂಧಿ ಅವರು ಈ ಚಿತ್ರದ ಛಾಯಾಗ್ರಾಹಕರು. (ಒನ್ಇಂಡಿಯಾ ಕನ್ನಡ)