Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಷ್ಠಾವಂತ ಮೇಕಪ್ ಮ್ಯಾನ್ ನಿಧನಕ್ಕೆ ಕಂಬನಿ ಮಿಡಿದ ನಟ ರಮೇಶ್ ಅರವಿಂದ್
ಬಹುಭಾಷಾ ನಟ ರಮೇಶ್ ಅರವಿಂದ್ ಅವರ ಬಹುಕಾಲದ ಗೆಳೆಯ ಮತ್ತು ಮೇಕಪ್ ಮ್ಯಾನ್ ಸೂರಿಬಾಬು ನಿಧನ ಹೊಂದಿದ್ದಾರೆ. ನಿನ್ನೆ ಭಾನುವಾರ (ಆಗಸ್ಟ್ 23) ಹೈದರಾಬಾದ್ ನಲ್ಲಿ ಸೂರಿಬಾಬು ಕೊನೆಯುಸಿರೆಳೆದಿದ್ದಾರೆ. ಸದಾ ಜೊತೆಯಲ್ಲಿಯೇ ಇರುತ್ತಿದ್ದ ಗೆಳೆಯನ ನಿಧನಕ್ಕೆ ರಮೇಶ್ ಅರವಿಂದ್ ಕಂಬನಿ ಮಿಡಿದಿದ್ದಾರೆ.
Recommended Video
ಸುಮಾರು 20 ವರ್ಷಗಳಿಂದ ಸೂರಿಬಾಬು, ರಮೇಶ್ ಅರವಿಂದ್ ಅವರಿಗೆ ಸ್ನೇಹಿತರಾಗಿದ್ದರು. ಸಿನಿಮಾ, ರಿಯಾಲಿಟಿ ಶೋ, ಎಲ್ಲಾ ಕಾರ್ಯಕ್ರಮಗಳಲ್ಲಿಯೂ ರಮೇಶ್ ಅರವಿಂದ್ ಅವರ ಜೊತೆಯೇ ಇದ್ದು, ಅವರಿಗೆ ಮೇಕಪ್, ಟಚ್ ಅಪ್ ಮಾಡುತ್ತಿದ್ದಿದ್ದು ಇದೇ ಸೂರಿಬಾಬು. ರಮೇಶ್ ಅರವಿಂದ್ ಅವರ ಸುಂದರ ಮುಖದ ಹಿಂದೆ ಸೂರಿಬಾಬು ಅವರ ಕೈಚಳಕವಿತ್ತು ಎಂದರೆ ತಪ್ಪಾಗಲ್ಲ.
ಗಡಿದಾಟಿ ಹೋಗಲಿದೆ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್'
ಬಹುಕಾಲದ ಗೆಳೆಯನ ಅಗಲಿಕೆ ಬಗ್ಗೆ ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. "ಸೂರಿಬಾಬು 20 ವರ್ಷಗಳಿಂದ ನನ್ನ ಮೇಕಪ್ ಮ್ಯಾನ್. ಅತ್ಯುತ್ತಮ ಕೆಲಸಗಾರ, ಶ್ರಮ ಜೀವಿ, ನಿಷ್ಠಾವಂತ, ನಾನು ನಟಿಸಿದ ಪ್ರತಿ ಶಾಟ್ ಹಿಂದೆ ಅವರ 'ಟಚ್ ಅಪ್' ಇರುತ್ತಿತ್ತು. ನಿನ್ನೆ, ಹೈದರಾಬಾದ್ ನಲ್ಲಿ, ನಮ್ಮನ್ನು ಬಿಟ್ಟು ಅಗಲಿದ್ದಾರೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಬರೆದು ಗೆಳೆಯನಿಗೆ ಭಾವುಕ ವಿದಾಯ ಹೇಳಿದ್ದಾರೆ.
ನಿಷ್ಠಾವಂತ, ಶ್ರಮ ಜೀವಿ ಗೆಳೆಯ ಸೂರಿ ಬಾಬು ಜೊತೆಗಿನ ಫೋಟೋಗಳನ್ನು ರಮೇಶ್ ಅರವಿಂದ್ ಹಂಚಿಕೊಂಡಿದ್ದಾರೆ. ಸದ್ಯ ಕೊರೊನಾ ಲಾಕ್ ಡೌನ್ ನಿಂದ ಯಾವುದೇ, ಸಿನಿಮಾ, ರಿಯಾಲಿಟಿ ಮತ್ತು ಕಾರ್ಯಕ್ರಮಗಳು ಇರಲಿಲ್ಲ. ಹಾಗಾಗಿ ಕೆಲಸವಿಲ್ಲದ ಸೂರಿಬಾಬು ಕೆಲವು ತಿಂಗಳಿಂದ ಹೈದರಾಬಾದ್ ನಲ್ಲಿ ನೆಲೆಸಿದ್ದರು. ಇನ್ನೇನು ಶೂಟಿಂಗ್ ಪ್ರಾರಂಭವಾಗುತ್ತೆ. ಕೆಲಸಕ್ಕೆ ಮರಳಬೇಕು ಎನ್ನುವಷ್ಟೊತ್ತಿಗೆ ಸೂರಿಬಾಬು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.