Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ಮಾಪಕರಾಗಿ ರಾಮು: ದೇವರಾಜ್ ಜೊತೆ ಮೊದಲ ಸಿನಿಮಾ, ಪ್ರಜ್ವಲ್ ಜೊತೆ ಕೊನೆ ಸಿನಿಮಾ
ಖ್ಯಾತ ನಿರ್ಮಾಪಕ ರಾಮು ಕೋವಿಡ್ನಿಂದಾಗಿ ಇಂದು ನಿಧನವಾಗಿದ್ದಾರೆ. ರಾಮು ಅಗಲಿಕೆಗೆ ಕನ್ನಡದ ಖ್ಯಾತ ಸಿನಿಮಾ ಸೆಲೆಬ್ರಿಟಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Recommended Video
ಬಹಳ ಕಿರಿಯ ವಯಸ್ಸಿಗೆ ಸಿನಿಮಾ ನಿರ್ಮಾಪಕರಾದ ರಾಮು, ಮೊದಲಿಗೆ ನಿರ್ಮಾಣ ಮಾಡಿದ್ದು ದೇವರಾಜ್ ನಟನೆಯ 'ಗೋಲಿಬಾರ್' ಸಿನಿಮಾ. ಗೋಲಿಬಾರ್ ಸಿನಿಮಾ ನಿರ್ಮಾಣ ಮಾಡಿದಾಗ ಅವರಿಗಿನ್ನೂ 21 ವರ್ಷ ವಯಸ್ಸು.
'ಗೋಲಿಬಾರ್' ಯಶಸ್ವಿ ಆಗುತ್ತಿದ್ದಂತೆ ಕನ್ನಡದಲ್ಲಿ ಮೊದಲ ಬಾರಿಗೆ ಕೋಟಿ ರೂಪಾಯಿ ಬಜೆಟ್ ಹಾಕಿ 'ಲಾಕಪ್ ಡೆತ್' ಸಿನಿಮಾ ನಿರ್ಮಾಣ ಮಾಡಿದರು ರಾಮು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಕನ್ನಡದಲ್ಲಿ ಸಿನಿಮಾ ನಿರ್ಮಾಣದ ದಿಕ್ಕನ್ನೆ ಬದಲಿಸಿದರು ರಾಮು.
ಇದೀಗ ರಾಮು ಕೊನೆ ಉಸಿರೆಳಿದಿದ್ದಾರೆ. ವಿಚಿತ್ರವೆಂದರೆ ದೇವರಾಜ್ ಸಿನಿಮಾದ ನಿರ್ಮಾಣದೊಂದಿಗೆ ಸಿನಿಮಾ ವೃತ್ತಿ ಆರಂಭಿಸಿದ್ದ ರಾಮು ಇದೀಗ ನಿರ್ಮಾಣ ಮಾಡಿರುವ ಕೊನೆಯ ಸಿನಿಮಾ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ನಟಿಸಿರುವ 'ಅರ್ಜುನ್ ಗೌಡ'.
ರಾಮು ನಿರ್ಮಾಣ ಮಾಡಿದ ಕೊನೆಯ ಸಿನಿಮಾ 'ಅರ್ಜುನ್ ಗೌಡ'. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ತಯಾರಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗುವ ಮುನ್ನ ರಾಮು ಎಲ್ಲರನ್ನೂ ಅಗಲಿ ಹೊರಟಿದ್ದಾರೆ.
ರಾಮು ಅಗಲಿಕೆ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ದೇವರಾಜ್, 'ನನ್ನದು ರಾಮು ಅವರದ್ದು 30 ವರ್ಷಗಳ ಗೆಳೆತನ. ಮಾಲಾಶ್ರೀ ಸಹ ನನಗೆ ಒಳ್ಳೆಯ ಗೆಳತಿ. ರಾಮು ಒಬ್ಬ ಅದ್ಭುತವಾದ ನಿರ್ಮಾಪಕ. ಪ್ರಜ್ವಲ್ ಸಹ 'ಅರ್ಜುನ್ ಗೌಡ' ಸಿನಿಮಾ ಬಗ್ಗೆ ಮಾತನಾಡುತ್ತಾ, ರಾಮು ಬಹಳ ರಿಚ್ ಆಗಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದ್ದ'' ಎಂದಿದ್ದಾರೆ ದೇವರಾಜ್.
'ಅರ್ಜುನ್ ಗೌಡ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳನ್ನು ರಾಮು ಇಟ್ಟುಕೊಂಡಿದ್ದ. ಎರಡು ತಿಂಗಳ ಹಿಂದೆ ಸಿನಿಮಾ ಬಗ್ಗೆ ಪ್ರಜ್ವಲ್ ಜೊತೆ ಮಾತನಾಡಲು ಮನೆಗೆ ಬಂದಿದ್ದಾಗ ನಾನು ಭೇಟಿಯಾಗಿದ್ದೆ. ಅದೇ ನನ್ನ-ಅವನ ಕೊನೆಯ ಭೇಟಿ' ಎಂದು ಕೊನೆಯ ಬಾರಿ ರಾಮುರನ್ನು ಭೇಟಿಯಾದ ಸಂದರ್ಭ ನೆನಪು ಮಾಡಿಕೊಂಡರು ದೇವರಾಜ್.