Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನೀರ್ ದೋಸೆ' ಪಾತ್ರದ ಬಗ್ಗೆ ರಮ್ಯಾ ಏನಂತಾರೆ?
ವಿಜಯಪ್ರಸಾದ್ ನಿರ್ದೇಶನದ 'ಸಿದ್ಲಿಂಗು' ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಜೊತೆ ನಟಿಸಿದ್ದ ರಮ್ಯಾಗೆ ನಿರ್ದೇಶಕ ವಿಜಯಪ್ರಸಾದ್ ನಿರ್ದೇಶನ ಮಾಡುವ ರೀತಿ ಬಹಳ ಇಷ್ಟವಾಗಿದೆಯಂತೆ. ಅವರ ನಿರ್ದೇಶನದಲ್ಲಿ ಮತ್ತೆ ನಟಿಸುವ ಬಯಕೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದ ರಮ್ಯಾ, ಕೆಲವು ತಿಂಗಳುಗಳ ಹಿಂದೆ ಈ ಚಿತ್ರದ ಕಥೆಯನ್ನು ಹೇಳಿದ್ದ ವಿಜಯಪ್ರಸಾದ್ ಅವರಿಗೆ ಚಿತ್ರದಲ್ಲಿ ನಟಿಸಲು ಒಪ್ಪಗೆ ನೀಡಿದ್ದರಂತೆ. ಒಟ್ಟಿನಲ್ಲಿ 'ನೀರ್ ದೋಸೆ'ಯಲ್ಲಿ ರಮ್ಯಾ ನಟಿಸುವುದು ಪಕ್ಕಾ ಆಗಿದೆ.
ಈ ಬಗ್ಗೆ ಮಾತನಾಡಿರುವ ರಮ್ಯಾ, "ನಾನು ಈ ಚಿತ್ರದಲ್ಲಿ ಮಾಡಿಲಿರುವ ಪಾತ್ರವು ಮಾಮೂಲಿ ನಾಯಕಿಯರ ಪಾತ್ರವಲ್ಲ. ಇಷ್ಟು ದಿನ ನಾನು ಮಾಡಿದ ಪಾತ್ರಕ್ಕಿಂತ ಈ ಪಾತ್ರ ತೀರಾ ಭಿನ್ನವಾಗಿದೆ. 'ಸಿದ್ಲಿಂಗು' ಚಿತ್ರದಲ್ಲಿ ವಿಜಯಪ್ರಸಾದ್ ಜೊತೆ ನಟಿಸಿದ ಅನುಭವ ನನಗೆ ಸಖತ್ ಖುಷಿ ನೀಡಿದೆ. ಹೀಗಾಗಿ ಅವರ ನಿರ್ದೇಶನದ ಈ ನೀರ್ ದೋಸೆ' ಚಿತ್ರದಲ್ಲಿ ನಟಿಸಲು ಉತ್ಸುಕಳಾಗಿದ್ದೇನೆ. ಚಿತ್ರವು ಕಾಮಿಡಿ ನಿರೂಪಣೆ ಹೊಂದಿದೆ" ಎಂದಿದ್ದಾರೆ.
ಮುಂದುವರಿದ ರಮ್ಯಾ, "ನಾನೀಗ ಮೊದಲಿನಂತೆ ಹೆಚ್ಚು ಹೆಚ್ಚು ಮರಸುತ್ತುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನನ್ನು ಎಲ್ಲಿಯವರೆಗೆ ನಿರ್ದೇಶಕರು ಒಂದೇ ರೀತಿಯ ಪಾತ್ರಗಳಲ್ಲಿ ತೋರಿಸಲು ಸಾಧ್ಯ? ನನಗೂ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳು ಬೇಕು, ತೆರೆಯಲ್ಲಿ ನನ್ನನ್ನು ತೋರಿಸುವ ನಿರ್ದೇಶಕರಿಗೂ ನೋಡುವ ಪ್ರೇಕ್ಷಕರಿಗೂ ನನ್ನ ಪಾತ್ರದಲ್ಲಿ ವಿಭಿನ್ನತೆ ಕಾಣಲೇಬೇಕು. ನಿಂತ ನೀರಾಗಲು ನನಗಿಷ್ಟವಿಲ್ಲ"
ಇತ್ತೀಚಿಗಷ್ಟೇ ದಿಗಂತ್ ನಾಯಕತ್ವ ಹಾಗೂ ಕೋಡಿ ರಾಮಕೃಷ್ಣ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ನಾನು ಸದ್ಯಕ್ಕೆ ಪ್ರಜ್ವಲ್ ದೇವರಾಜ್ ಜೊತೆ 'ದಿಲ್ ಕಾ ರಾಜಾ' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದ ಚಿತ್ರೀಕರಣ ಮುಗಿದ ತಕ್ಷಣ ನಾನು ರಜೆಯ ಮೇಲೆ ತೆರಳಲಿದ್ದೇನೆ. ಜನವರಿಯಲ್ಲಿ 14 ರಿಂದ ಪ್ರಾರಂಭವಾಗಲಿರುವ ಚಿತ್ರೀಕರಣಕ್ಕೆ ಹಾಜರಾಗುವವರೆಗೂ ನಾನು ರಜಾದ ಮಜ ಸವಿಯಲಿದ್ದೇನೆ" ಎಂದಿದ್ದಾರೆ.
ಅಂದಹಾಗೆ, ವಿಜಯಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಚಿತ್ರದಲ್ಲಿ ಜಗ್ಗೇಶ್ ಹಾಗೂ ರಮ್ಯಾ ಜತೆ ಉಳಿದ ತಾರಾಗಣದ ಆಯ್ಕೆ ಇನ್ನಷ್ಟೇ ಪಕ್ಕಾ ಆಗಬೇಕಿದೆ. ಸಿದ್ಲಿಂಗು ಚಿತ್ರಕ್ಕೆ ಸಂಗೀತ ನೀಡಿದ್ದ ಅನೂಪ್ ಸೀಳಿನ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅದೇ ಜ್ಞಾನಮೂರ್ತಿ ಈ ನೀರ್ ದೋಸೆ ಚಿತ್ರಕ್ಕೂ ಛಾಯಾಗ್ರಹಕರು. ಆದರೆ ಸಂಕಲನಕಾರ ನಾಗೇಂದ್ರ ಅರಸ್, ಹೊಸ ಸೇರ್ಪಡೆ. ಒಟ್ಟಿನಲ್ಲಿ ಚಿತ್ರಕ್ಕೆ ಈಗಲೇ ನಿರೀಕ್ಷೆ ಪ್ರಾರಂಭವಾಗಿದೆ. (ಒನ್ ಇಂಡಿಯಾ ಕನ್ನಡ)