Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಂಸಾಹಾರ ತ್ಯಜಿಸಿದ ನಟಿ ರಮ್ಯಾ: ಕಾರಣವೇನು?
ಸ್ಯಾಂಡಲ್ ವುಡ್ ನ ಮೋಹಕತಾರೆ, ರಾಜಕಾರಣಿ ನಟಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸುಮಾರು ಒಂದು ವರ್ಷದಿಂದ ಅಭಿಮಾನಿಗಳಿಂದ, ಸಾಮಾಜಿಕ ಜಾಲತಾಣದಿಂದ ಮಾಯವಾಗಿದ್ದ ರಮ್ಯಾ ಇದೀಗ ಮತ್ತೆ ಸಕ್ರೀಯರಾಗಿದ್ದಾರೆ.
ಸದಾ ಒಂದಲ್ಲೊಂದು ಪೋಸ್ಟ್ ಗಳನ್ನು ರಮ್ಯಾ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ರಮ್ಯಾ ಕಡೆಯಿಂದ ಬಂದ ಮಾಹಿತಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಹೌದು, ರಮ್ಯಾ ಸಂಪೂರ್ಣವಾಗಿ ಮಾಂಸಾಹಾರ ತ್ಯಜಿಸಿರುವುದಾಗಿ ಹೇಳಿದ್ದಾರೆ. ಇತ್ತೀಚಿಗೆ ಅನೇಕ ನಟಿಯರು ಮಾಂಸಾಹಾರ ತ್ಯಜಿಸಿದ್ದಾರೆ. ಸಸ್ಯಹಾರಿ ಆಗಿರುವ ಬಗ್ಗೆ ರಮ್ಯಾ ಬಹಿರಂಗ ಪಡಿಸಿದ್ದಾರೆ. ಮಾಂಸಾಹಾರ ತ್ಯಜಿಸುವುದು ಸುಲಭವಲ್ಲ ಆದರೂ ನಾನು ತ್ಯಜಿಸಿದ್ದೇನೆ ಎಂದು ಹೇಳಿದ್ದಾರೆ.
ಮಧ್ಯಾಹ್ನದ ಊಟ ತ್ಯಜಿಸಿ ರೈತರಿಗೆ ಬೆಂಬಲ ನೀಡಿದ ನಟಿ ರಮ್ಯಾ
ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಿದು
ಮಾಂಸಾಹಾರ ತ್ಯಜಿಸಿರುವ ಬಗ್ಗೆ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 'ಈ ವರ್ಷದ ಆರಂಭದಲ್ಲಿ ನಾನು ಸಸ್ಯಹಾರಿಯಾಗಿ ಮಾರ್ಪಟ್ಟಿದ್ದೇನೆ. ಮತ್ತು ಇದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ಅನೇಕ ಕಾರಣಗಳಿಗಾಗಿ ನಿಮ್ಮ ದೇಹಕ್ಕೆ ಪ್ರೋಟೀನ್ ಬೇಕು. ಆದರೆ ನಾನು ಮಾಂಸಾಹಾರವಿಲ್ಲದೆ ಚೆನ್ನಾಗಿ ಇರುತ್ತೇನೆ.' ಎಂದಿದ್ದಾರೆ.
ಐಸ್ ಕ್ರೀಮ್ ತುಂಬಾ ಇಷ್ಟ ಪಡುತ್ತೇನೆ
'ನಾನು ಸಸ್ಯಹಾರದ ಬಗ್ಗೆ ಆಲೋಚಿಸುತ್ತೇನೆ. ಇದು ಕಷ್ಟ ಎನ್ನುವುದು ಗೊತ್ತು. ನಾನು ತುಂಬಾ ಇಷ್ಟ ಪಡುವ ಐಸ್ ಕ್ರೀಮ್ ಸೇರಿದಂತೆ ಬೇರೆ ಪರ್ಯಾಯಗಳಿವೆ ಎಂದು ನನಗೆ ತಿಳಿದಿದೆ. ನಾನು ನನ್ನ ಮನಸ್ಸನ್ನು ರೂಪಿಸಿಕೊಳ್ಳಬೇಕು.' ಎಂದು ಬರೆದುಕೊಂಡಿದ್ದಾರೆ. ಸ್ನೇಹಿತರ ಜೊತೆ ಹೋಟೆಲ್ ನಲ್ಲಿ ಕುಳಿತಿರುವ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಅಭಿಮಾನಿಗಳ ಮೆಚ್ಚುಗೆ
ರಮ್ಯಾ ನಿರ್ಧಾರಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರೈತ ದಿನಾಚರಣೆಯ ಅಂಗವಾಗಿ ರಮ್ಯಾ ಮಧ್ಯಾಹ್ನದ ಊಟ ತ್ಯಜಿಸಿ ರೈತರಿಗೆ ಬೆಂಬಲ ಸೂಚಿಸಿದ್ದು. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಮೋಹಕತಾರೆ 'ಕಿಸಾನ್ ದಿವಸ್ ಆದ ಇಂದು ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಮಧ್ಯಾಹ್ನದ ಊಟ ತ್ಯಜಿಸಿದ್ದೇನೆ' ಎಂದು ತಿಳಿಸಿದ್ದರು.
Recommended Video
ಮತ್ತೆ ಬಣ್ಣದ ಲೋಕಕ್ಕೆ ಬರ್ತಾರಾ?
ರಮ್ಯಾ ಸದ್ಯ ಸಿನಿಮಾ ಮತ್ತು ರಾಜಕೀಯ ಎರಡರಿಂದನೂ ದೂರ ಸರಿದಿದ್ದಾರೆ. ಮತ್ತೆ ಸಿನಿಮಾರಂಗಕ್ಕೆ ವಾಪಸ್ ಆಗುತ್ತಾರೆ ಎನ್ನುವ ಮಾತುಗಳು ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ರಮ್ಯಾ ಬಣ್ಣ ಹಚ್ಚಲಿ, ಸಿನಿಮಾದಲ್ಲಿ ಮಿಂಚಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.