Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ ಬಗ್ಗೆ ಹಬ್ಬಿದ ಪುಕಾರು ಒಂದು.. ತಾಯಿ ರಂಜಿತಾ ಹೇಳುವುದೇ ಮತ್ತೊಂದು.!
ಚಿತ್ರರಂಗದಿಂದ ನಟಿ ರಮ್ಯಾ ದೂರವಾಗಿದ್ದರೂ, ಗಾಸಿಪ್ ಕಾಲಂಗಳಲ್ಲಿ ಮಾತ್ರ ರಮ್ಯಾ ಹೆಸರು ಮಿಸ್ ಆಗಲ್ಲ. ಅನಾರೋಗ್ಯದಿಂದ ನಟಿ ರಮ್ಯಾ ಆಸ್ಪತ್ರೆ ಸೇರಿದರೂ, ಆಕೆ ಬಗ್ಗೆ ಪುಕಾರು ಹಬ್ಬುವುದು ನಿಲ್ಲಲ್ಲ. ಇದಕ್ಕೆ ಸಾಕ್ಷಿ ಇತ್ತೀಚಿನ ಬೆಳವಣಿಗೆ.
ಕಳೆದ ತಿಂಗಳಷ್ಟೇ ಅನಾರೋಗ್ಯದ ಕಾರಣದಿಂದ ನಟಿ ರಮ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಮಾಜಿ ಸಂಸದೆ ರಮ್ಯಾ ಬಗ್ಗೆ ಹೊಸ ಗಾಸಿಪ್ ಕೇಳಿಬಂದಿತ್ತು. ಅದು ಕಾಂಗ್ರೆಸ್ ಯುವನಾಯಕಿ ರಮ್ಯಾ ಬಿಜೆಪಿ ಸೇರುವುದರ ಕುರಿತು..!
'ಎಸ್.ಎಂ.ಕೃಷ್ಣ ಹಾದಿಯಲ್ಲಿ ರಮ್ಯಾ' ಸಾಗುತ್ತಾರಂತೆ-ಕಂತೆ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಕೂಡ ಕಮಲ ಮುಡಿಯುತ್ತಾರಂತೆ ಎಂಬ ಅಂತೆ-ಕಂತೆ ಮಂಡ್ಯ ಜಿಲ್ಲೆಯಲ್ಲಿ ಕೇಳಿಬಂದಿತ್ತು.[ನಟಿ ರಮ್ಯಾ ಬಗ್ಗೆ ಗಾಳಿಯಲ್ಲಿ ತೇಲಿಬಂದು ಕಿವಿಗೆ ಬಿದ್ದ ಸುದ್ದಿ ಇದು.!]
ವಿರೋಧ-ಆತ್ಮಹತ್ಯೆ ಬೆದರಿಕೆ ಶುರು ಆಯ್ತಲ್ಲ.!
ರಮ್ಯಾ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂಬ ಊಹೆ ದಟ್ಟವಾದಾಗ ಮಂಡ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಅಪ್ಪಿ-ತಪ್ಪಿ ರಮ್ಯಾ ಬಿಜೆಪಿಗೆ ಸೇರಿದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂತ ಮಂಡ್ಯದ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದರು.['ಎಲ್ಲಿದ್ದಾರೆ ರಮ್ಯಾ' ಎನ್ನುತ್ತಿದ್ದವರಿಗೆಲ್ಲ ಇಲ್ಲೊಂದು ಬ್ರೇಕಿಂಗ್ ನ್ಯೂಸ್]
ಇಷ್ಟೆಲ್ಲ ಆದರೂ ರಮ್ಯಾ ಮಾತನಾಡಿಲ್ಲ.!
ಮಂಡ್ಯದಲ್ಲಿ ಇಷ್ಟೆಲ್ಲ ಬೆಳವಣಿಗೆ ಆದರೂ ರಮ್ಯಾ ಮಾತ್ರ ಈವರೆಗೂ ತುಟಿ ಎರಡು ಮಾಡಿಲ್ಲ. ಸ್ಪಷ್ಟನೆ ಕೊಡುವ ಗೋಜಿಗೆ ಹೋಗಿಲ್ಲ. ಆದ್ರೆ, ರಮ್ಯಾ ಪರವಾಗಿ ತಾಯಿ ರಂಜಿತಾ ಮಾಧ್ಯಮಗಳ ಎದುರು ಕ್ಲಾರಿಟಿ ಕೊಟ್ಟಿದ್ದಾರೆ.[ನಟಿ ರಮ್ಯಾ ನಾಪತ್ತೆ.! ಇಡೀ ದೇಶ ಕೇಳುತ್ತಿದೆ ಕಾಂಗ್ರೆಸ್ ಯುವರಾಣಿ ಈಗೆಲ್ಲಿ.?]
ರಮ್ಯಾ ತಾಯಿ ರಂಜಿತಾ ಹೇಳುವುದೇನು.?
''ನನ್ನ ಮಗಳು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ'' ಅಂತ ರಮ್ಯಾ ತಾಯಿ ರಂಜಿತಾ ಸ್ಪಷ್ಟನೆ ನೀಡಿದ್ದಾರೆ.[ರಮ್ಯಾ ಕಾಂಗ್ರೆಸ್ ಬಿಡ್ತಾರಾ? ಅವರ ತಾಯಿ ಉತ್ತರ ಹೀಗಿದೆ]
ರಮ್ಯಾ ಯಾಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.?
''ಅನಾರೋಗ್ಯದ ಕಾರಣ ನನ್ನ ಮಗಳು ಪಕ್ಷದ ಚುನಾವಣಾ ಪ್ರಚಾರಕ್ಕೆ ಬರಲು ಸಾಧ್ಯವಿಲ್ಲ. ನಮಗೆ ಆಗದ ಕೆಲವರು ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ರಮ್ಯಾ ಸೇರಲಿದ್ದಾರೆ ಅಂತ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು. ಇದನ್ನ ಯಾರೂ ನಂಬಬೇಡಿ. ರಮ್ಯಾ ಗುಣಮುಖಳಾದ ಕೂಡಲೆ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾಳೆ'' ಅಂತ ರಮ್ಯಾ ತಾಯಿ ರಂಜಿತಾ ಹೇಳಿದ್ದಾರೆ.
ಇಷ್ಟು ಸಾಲದೇ.?
ಅಲ್ಲಿಗೆ, ರಮ್ಯಾ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಬರೀ ಸುಳ್ಳಿನ ಕಂತೆ ಎಂಬುದು ರಮ್ಯಾ ತಾಯಿ ರಂಜಿತಾ ಮಾತುಗಳಿಂದ ಸ್ಪಷ್ಟ.