Don't Miss!
- News ಚುನಾವಣೆ ಹೊತ್ತಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ಗೆ ಕೋರ್ಟ್ ಸಮನ್ಸ್: ಯಾಕೆ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಣ್ಣನ 'ಆಯುಷ್ಮಾನ್ ಭವ' ಜೊತೆ 'ರಂಗನಾಯಕಿ' ಪ್ರವೇಶ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಸಿನಿಮಾ ನವೆಂಬರ್ 1ಕ್ಕೆ ತೆರೆಗೆ ಬರುತ್ತಿದೆ. ಪಿ ವಾಸು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಶಿವಣ್ಣ, ರಚಿತಾ ರಾಮ್, ಅನಂತ್ ನಾಗ್ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.
ಆಯುಷ್ಮಾನ್ ಭವ ಸಿನಿಮಾ ಜೊತೆ ಬೇರೆ ಯಾವುದಾದರೂ ಸಿನಿಮಾ ಬರುತ್ತಾ ಎಂದು ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಸರ್ಪ್ರೈಸ್ ಇಲ್ಲಿದೆ.
ಹೌದು, ಆಯುಷ್ಮಾನ್ ಭವ ಸಿನಿಮಾ ಜೊತೆ ರಂಗನಾಯಕಿ ಪ್ರವೇಶವಾಗುತ್ತಿದೆ. ಅಧಿತಿ ಪ್ರಭುದೇವ, ಶ್ರೀನಿ, ತ್ರಿವಿಕ್ರಮ್ ನಟಿಸಿರುವ ಈ ಚಿತ್ರವನ್ನ ದಯಾಳ್ ಪದ್ಮನಾಭನ್ ನಿರ್ದೇಶಿಸಿದ್ದಾರೆ.
ಪಿ ವಾಸು ಡೈರೆಕ್ಟರ್ ಅಲ್ಲ: 'ಆಪ್ತಮಿತ್ರ' ನಿರ್ದೇಶಕನ ಕುರಿತು ರವಿಚಂದ್ರನ್ ಹೀಗೆ ಹೇಳಿದ್ದೇಕೆ?
ರಂಗನಾಯಕಿ ಮಹಿಳೆ ಪ್ರಧಾನ ಕಥೆಯಾಗಿದ್ದು, ಅದ್ಭುತವಾಗಿ ಮೂಡಿಬಂದಿರಬಹುದು ಎಂಬ ಭರವಸೆ ಮೂಡಿಸಿದೆ ಟ್ರೈಲರ್. ಎಸ್ ವಿ ನಾರಾಯಣ್ ಅವರು ಈ ಚಿತ್ರ ನಿರ್ಮಿಸಿದ್ದು, ನವೀನ್ ಕೃಷ್ಣ ಸಂಭಾಷಣೆ ರಚಿಸಿದ್ದಾರೆ.
ನವೆಂಬರ್ 1 ರಂದು ಸರ್ಕಾರಿ ರಜೆ ಇದೆ, ಯಾವುದಾದರೂ ಸಿನಿಮಾಗೆ ಹೋಗೋಣ ಎಂದು ಪ್ಲಾನ್ ಮಾಡಿದ್ರೆ, ಈ ಎರಡು ಕನ್ನಡ ಸಿನಿಮಾಗಳು ನಿಮ್ಮನ್ನು ರಂಜಿಸಲು ಸಿದ್ಧವಾಗಿದೆ. ಬಹುಶಃ ಮುಂದಿನ ದಿನದಲ್ಲಿ ಮತ್ಯಾವುದಾದರು ಸಿನಿಮಾ ಈ ಎರಡು ಚಿತ್ರಗಳ ಜೊತೆ ಸೇರಬಹುದು.