Don't Miss!
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ರಾಜರತ್ನ' ಜೊತೆಯಲ್ಲಿ 'ಭಂಡಾರಿ' ಸಹೋದರರ ಹೊಸ ಚಿತ್ರ
'ರಂಗಿತರಂಗ' ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನ ವಿಶ್ವಮಟ್ಟದಲ್ಲಿ ಹಾರಿಸಿದ ಸಹೋದರರು ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ.
ಈ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತ್ತು. ಅಂದು ವದಂತಿ ಆಗಿದ್ದ ಅದೇ ಸುದ್ದಿ ಈಗ ನಿಜವಾಗಿದೆ.
ಹೌದು, ಕನ್ನಡದ ಪವರ್ ಸ್ಟಾರ್ ಜೊತೆಯಲ್ಲಿ 'ರಂಗತರಂಗ' ಸಹೋದರರು ಸಿನಿಮಾ ಮಾಡಲಿದ್ದಾರೆ. ಈ ವಿಷ್ಯವನ್ನ ಸ್ವತಃ ಅನೂಪ್ ಭಂಡಾರಿ ಘೋಷಣೆ ಮಾಡಿದ್ದಾರೆ.
ಪುನೀತ್ ಗೆ ಅನೂಪ್ ಆಕ್ಷನ್ ಕಟ್
'ರಂಗಿತರಂಗ' ಖ್ಯಾತಿಯ ನಿರ್ದೇಶನ ಅನೂಪ್ ಭಂಡಾರಿ ತಮ್ಮ ಮುಂದಿನ ಚಿತ್ರವನ್ನ, ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಮಾಡಲಿದ್ದಾರೆ. ಇಷ್ಟು ದಿನದ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು, ಈ ಸುದ್ದಿ ನಿಜವಾಗಿದೆ.[ಭಂಡಾರಿ ಸಹೋದರರ 'ರಾಜರಥ' ಸ್ಪೆಷಲ್ ಟೀಸರ್ ನೋಡಿ]
ಹುಟ್ಟುಹಬ್ಬದ ವಿಶೇಷ ಉಡುಗೊರೆ
ಮಾರ್ಚ್ 2 ರಂದು ನಿರ್ದೇಶಕ ಅನೂಪ್ ಭಂಡಾರಿ ಅವರ ಹುಟ್ಟುಹಬ್ಬ. ಹೀಗಾಗಿ, ಈ ಸಂತಸದಲ್ಲಿದ್ದ ನಿರ್ದೇಶಕರು, ಪುನೀತ್ ಗೆ ಸಿನಿಮಾ ಮಾಡುತ್ತಿರುವುದನ್ನ ಖಚಿತಪಡಿಸಿದ್ದಾರೆ.
ಪುನೀತ್ ಜೊತೆ ನಿರೂಪ್ ಅಭಿನಯ
ಅನೂಪ್ ಭಂಡಾರಿ ಆಕ್ಷನ್ ಹೇಳಲಿರುವ ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ, ಭಂಡಾರಿ ಸಹೋದರ ನಿರೂಪ್ ಭಂಡಾರಿ ಕೂಡ ತೆರೆ ಹಂಚಿಕೊಳ್ಳಲಿದ್ದಾರಂತೆ.
ಆಕ್ಷನ್ ಥ್ರಿಲ್ಲರ್ ಸಿನಿಮಾ
ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಗಳನ್ನ ಹೊಂದಿದೆಯಂತೆ. ಪುನೀತ್ ಅಭಿಮಾನಿಗಳು ನಿರೀಕ್ಷೆ ಮಾಡುವುದನ್ನ ಈ ಚಿತ್ರದಲ್ಲಿ ನೀಡಲಿದ್ದಾರಂತೆ.
'ರಾಜರಥ'ದಲ್ಲಿ ರಂಗಿತರಂಗ ಸಹೋದರರು
ಸದ್ಯ, ನಿರೂಪ್ ಭಂಡಾರಿ ಮತ್ತು ಅನೂಪ್ ಭಂಡಾರಿ 'ರಾಜರಥ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನ ಅನೂಪ್ ಆಕ್ಷನ್ ಕಟ್ ಹೇಳುತ್ತಿದ್ದು, ನಿರೂಪ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಸ್ಕ್ರಿಪ್ಟ್ ಮುಗಿದ ನಂತರ ಶೂಟಿಂಗ್'!
ಸದ್ಯ, ಅನೂಪ್ ಭಂಡಾರಿ ಪುನೀತ್ ಗಾಗಿ ಸ್ಕ್ರಿಪ್ಟ್ ತಯಾರು ಮಾಡುತ್ತಿದ್ದಾರಂತೆ. ಇಷ್ಟು ದಿನ 'ರಾಜರಥ' ಚಿತ್ರದಲ್ಲಿ ಬ್ಯುಸಿಯಿದ್ದ ಕಾರಣ, ಪುನೀತ್ ಸಿನಿಮಾಗೆ ಕೆಲಸ ಮಾಡಲು ಕಷ್ಟವಾಗಿತ್ತಂತೆ. ಈಗ 'ರಾಜರಥ' ಮುಗಿದ್ದಿದ್ದು, ಪುನೀತ್ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರಂತೆ.