Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಟಾರ್ ಕಳೆ: ಪ್ರಚಾರಕ್ಕೆ ಇಳಿದ ನಟಿ!
ಚುನಾವಣೆಗಳಲ್ಲಿ ಸಿನಿಮಾ-ಧಾರಾವಾಹಿ ನಟ-ನಟಿಯರು ಪ್ರಚಾರ ಮಾಡುವುದು ಸರ್ವೇ ಸಾಮಾನ್ಯ. ಗ್ರಾಮವ್ಯಾಪ್ತಿಯಲ್ಲಿ ನಡೆವ ಪಂಚಾಯಿತಿ ಚುನಾವಣೆಗಳಿಗೂ ಸಿನಿಮಾ-ಧಾರಾವಾಹಿ ನಟ-ನಟಿಯರು ಪ್ರಚಾರ ನಡೆಸುವುದು ತುಸು ಅಪರೂಪ.
ಆದರೆ ಖ್ಯಾತ ಧಾರಾವಾಹಿ ನಟಿಯೊಬ್ಬರು ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಇಳಿಯಲಿದ್ದಾರೆ.
ಕೆಲಸ ಖಾಲಿ ಇದೆಯಾ ಎಂದು ಕೇಳುತ್ತಿದ್ದಾರೆ 'ಕನ್ನಡತಿ' ರಂಜನಿ ರಾಘವನ್
'ಪುಟ್ಟಗೌರಿ ಮದುವೆ' ಧಾರಾವಾಹಿ ಖ್ಯಾತಿಯ, 'ಕನ್ನಡತಿ' ಧಾರಾವಾಹಿಯಲ್ಲೂ ನಟಿಸುತ್ತಿರುವ ರಂಜನಿ ರಾಘವನ್ ಅವರು ಪಂಚಾಯಿತಿ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಶನಿವಾರ (ಡಿಸೆಂಬರ್ 19) ರಂದು ಬಾಗಲಕೋಟೆ ಜಿಲ್ಲೆ, ಬೀಳಗಿ ತಾಲ್ಲೂಕಿನ ಗಿರಿಸಾಗರ ಗ್ರಾಮದಲ್ಲಿ ರಂಜನಿ ರಾಘವನ್ ಅವರು ಮೂರು ಮಂದಿ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಮಾಡಲಿದ್ದಾರೆ.
ಸಂದರ್ಶನ: ಲಾಕ್ ಡೌನ್ ನಲ್ಲಿ 'ಕನ್ನಡತಿ' ರಂಜನಿ ಈಗ ಏನ್ಮಾಡ್ತಿದ್ದಾರೆ?
Recommended Video
ಸ್ಥಳೀಯ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ವಿಜಯಲಕ್ಷ್ಮಿ ಹೂಗಾರ್, ಯೆಂಕಪ್ಪ ನುಚ್ಚಿನ, ಬಿಎನ್ ಮೇತ್ರಿ ಅವರುಗಳ ಪರವಾಗಿ ರಂಜನಿ ರಾಘವನ್ ಪ್ರಚಾರ ನಡೆಸಲಿದ್ದಾರೆ. 'ಗ್ರಾಮದ ಅಭಿವೃದ್ಧಿ ಪರವಾಗಿ ದುಡಿಯುವ ಇಚ್ಛೆಯುಳ್ಳ ನನ್ನ ಗೆಳೆಯರ ಪರವಾಗಿ ನಾನು ಮತಯಾಚಿಸಲಿದ್ದೇನೆ' ಎಂದಿದ್ದಾರೆ ರಂಜನಿ ರಾಘವನ್.