Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೆಯೊಂದರಲ್ಲಿ ತನ್ನಿಂದ ಆದ ನಷ್ಟಕ್ಕೆ ಅಂಬಿ ತೆಗೆದುಕೊಂಡ ನಿರ್ಧಾರವೇನು.?
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಈಗ ನಮ್ಮೊಂದಿಗೆ ಇಲ್ಲ. ಆದ್ರೆ, ಅವರ ವ್ಯಕ್ತಿತ್ವ, ಅವರು ಮಾಡಿದ ಕೆಲಸಗಳು, ಅವರ ಸಿನಿಮಾಗಳು, ಅವರು ನಡೆದ ಬಂದ ಹಾದಿ ಎಲ್ಲವೂ ಕಾಡುತ್ತಿದೆ. ಅಂಬರೀಶ್ ಅವರ ಬಗ್ಗೆ ನಾವು-ನೀವು ನೋಡಿರದ ಹಲವು ರೋಚಕ ವಿಷ್ಯಗಳು ಇವೆ. ಇಂತಹ ಸಂಗತಿಗಳು ಅವರ ಆಪ್ತರು ಹೇಳುವ ಮೂಲಕ ಒಂದೊಂದೆ ಗೊತ್ತಾಗುತ್ತಿದೆ.
ಅಂಬರೀಶ್ ಅವರನ್ನ ಕಲಿಯುಗ ಕರ್ಣ ಎನ್ನುತ್ತಿದ್ದರು. ಕಷ್ಟ ಅಂತ ಬಂದವರಿಗೆ ಸಹಾಯ ಮಾಡುವ ಗುಣ ಅವರದ್ದು. ಬಲಗೈನಲ್ಲಿ ಮಾಡಿದ್ದ ಸಹಾಯ ಎಡಗೈಗೆ ಗೊತ್ತಾಗದಂತೆ ನೋಡಿಕೊಳ್ಳುವ ವ್ಯಕ್ತಿತ್ವ.
'ಈತನನ್ನ ಅಂಬಿ ಜಾಗದಲ್ಲಿ ಕೂರಿಸಿ' ಎಂದು ಕೇಳಿಕೊಂಡ ಜಗ್ಗೇಶ್
ಬಹುಶಃ ಅಂಬರೀಶ್ ಯಾರಿಗೂ ನೋವು ಮಾಡಿಲ್ಲ. ಒಂದು ವೇಳೆ ಅವರಿಂದ ಯಾರಿಗಾದರೂ ನೋವು, ನಷ್ಟ ಆಗಿದ್ದರೇ ಅಲ್ಲಿಂದು ಇನ್ನೊಂದು ನಿರ್ಧಾರವನ್ನ ತೆಗೆದುಕೊಳ್ಳುವಂತಹ ವ್ಯಕ್ತಿ ರೆಬೆಲ್ ಸ್ಟಾರ್. ಇದಕ್ಕೆ ಒಂದು ಉದಾಹರಣೆ ಸಿಕ್ಕಿದೆ. ಮದುವೆ ಸಮಾರಂಭದಲ್ಲಿ ತನ್ನಿಂದ ಆಗಿದ್ದ ನಷ್ಟವನ್ನ ನೋಡಿ, ಬೇಸರ ಮಾಡಿಕೊಂಡಿದ್ದ ಅಂಬಿ, ಅಲ್ಲಿಂದ ಹೊಸ ನಿರ್ಧಾರವನ್ನ ತೆಗೆದುಕೊಂಡರಂತೆ. ಏನದು ಕಥೆ.? ಮುಂದೆ ಓದಿ.....
ಬಡವರ ಮನೆ ಮದುವೆಗೆ ಹೋಗಿದ್ದಾಗ...
ಅಂಬರೀಶ್ ಅವರು ಆಗ ಅನೇಕ ಮದುವೆ ಸಮಾರಂಭಗಳಿಗೆ ಹೋಗುತ್ತಿದ್ದರು. ಆ ವೇಳೆ ಅಂಬಿಯನ್ನ ನೋಡಲು ನೆರೆದಿದ್ದ ಜನರು ಮುಗಿಬೀಳುತ್ತಿದ್ದರು. ಹೀಗೆ, ಒಮ್ಮೆ ಬಡವರ ಮನೆಯ ಮದುವೆಗೆ ಹೋಗಿದ್ದರಂತೆ. ಆಗ ಊಟ ಮಾಡುತ್ತಿದ್ದ ಇನ್ನೂರು ಮುನ್ನೂರು ಜನ ಅಂಬರೀಶ್ ಅವರನ್ನ ನೋಡುವ ಆಸೆಯಿಂದ ಮಾಡುತ್ತಿದ್ದ ಊಟವನ್ನ ಬಿಟ್ಟು ಬಂದರಂತೆ.
ದರ್ಶನ್ ಅಂಬಿಯ ಮತ್ತೊಬ್ಬ ಮಗ: ಅಂಬಿ ಆಪ್ತ ಸೀನಣ್ಣ ಹೇಳಿದ ಕಥೆ
ತನ್ನಿಂದ ಊಟ ವೇಸ್ಟ್ ಆಯಿತು
ಅಂಬರೀಶ್ ಅವರನ್ನ ನೋಡುವ ಆಸೆಯಿಂದ ತಿನ್ನುತ್ತಿದ್ದ ಊಟವನ್ನ ಬಿಟ್ಟು ಜನರು ಬಂದುಬಿಟ್ಟರು. ಆ ವೇಳೆ ಎಷ್ಟೊಂದು ಊಟ ವೇಸ್ಟ್ ಆಯಿತು. ಇದು ಅಂಬರೀಶ್ ಅವರ ಗಮನಕ್ಕೆ ಬಂದು ತುಂಬಾ ಬೇಸರ ಮಾಡಿಕೊಂಡರಂತೆ. ಹಾಗಾಗಿ, ಇನ್ಮುಂದೆ ಈ ರೀತಿ ಆಗಬಾರದು ಎಂಬ ಕಾರಣಕ್ಕೆ ಒಂದು ದೃಢ ನಿರ್ಧಾರವನ್ನ ತೆಗೆದುಕೊಂಡರಂತೆ.
ಅಂಬರೀಶ್ ಬಲಗೈ ಬಂಟ ಸೀನಣ್ಣ ಬಿಚ್ಚಿಟ್ಟ ಅಪರೂಪದ ಸಂಗತಿಗಳು
ಏನದು ಆ ನಿರ್ಧಾರ.?
ಮದುವೆ ಸಮಾರಂಭ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಹೋದಾಗ, ಊಟದ ಸಮಯದಲ್ಲಿ ಹೋಗಬಾರದು, ಊಟ ಆದ ಬಳಿಕ ಅಥವಾ ಊಟ ಆರಂಭವಾಗುವುದಕ್ಕೂ ಮುಂಚೆಯೇ ಹೋಗಿ ಬರಬೇಕು ಎಂಬ ನಿರ್ಧಾರ ಮಾಡಿಕೊಂಡರಂತೆ ಅಂಬಿ.
'ರಾಜ್-ವಿಷ್ಣು-ಅಂಬಿ ನಂತರ ಯಾರಿಗೂ ಸ್ಮಾರಕ ಬೇಡ' ಎಂದ ಖ್ಯಾತ ನಟ
ಮನೆಗೆ ಬಂದವರಿಗೆ ಊಟ
ಅನ್ನಕ್ಕೆ ಅಂಬರೀಶ್ ಅವರು ಹೆಚ್ಚು ಗೌರವ ನೀಡುತ್ತಿದ್ದರು ಎನ್ನುವುದಕ್ಕೆ ಆ ಮದುವೆ ಘಟನೆಯೇ ಸಾಕ್ಷಿ. ಇನ್ನು ತಮ್ಮ ಮನೆಗೆ ಹೆಚ್ಚು ಜನ ಬರ್ತಿದ್ದರಂತೆ. ಬಂದವರು ಹಸಿವಿನಿಂದ ವಾಪಸ್ ಹೋಗಬಾರದು ಎಂಬ ಕಾರಣಕ್ಕೆ ಮೂರು ಜನರನ್ನ ಅಡುಗೆ ಮಾಡಲು ನೇಮಿಸಿಕೊಂಡಿದ್ದರಂತೆ. ಬಿಡುವು ಇದ್ದ ಸಮಯದಲ್ಲಿ ಅಂಬರೀಶ್ ಅವರು ಕೂಡ ಅಡುಗೆ ಮಾಡುತ್ತಿದ್ದರಂತೆ' ಎಂದು ಅಂಬರೀಶ್ ಅವರ ಆಪ್ತ ಶ್ರೀನಿವಾಸ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ದುಃಖದಲ್ಲೂ ಅಮ್ಮನ ಮುಖದಲ್ಲಿ ನಗು ತರಿಸಿದ ಅಂಬಿ ಪುತ್ರ ಅಭಿಷೇಕ್
ಉಮಾಶ್ರೀ ಹೇಳಿದ ಬಿರಿಯಾನಿ ಕಥೆ
ಇನ್ನು ನಟಿ ಉಮಾಶ್ರೀ ಕೂಡ ಅಂಬರೀಶ್ ಅವರ ಬಿರಿಯಾನಿ ಕಥೆ ಹೇಳಿದ್ದರು. ಶೂಟಿಂಗ್ ಮುಗಿಸಿಕೊಂಡು ಮನೆಗೆ ಹೋಗಬೇಕಾದರೆ, ಒಮ್ಮೆ ಉಮಾಶ್ರೀ ಅವರ ಮನೆಗೆ ಹೋಗಿದ್ದರಂತೆ. ಅಲ್ಲಿ ಉಮಾಶ್ರೀ ಅವರ ಕೈಯಿಂದ ಬಿರಿಯಾನಿ ಮಾಡಿಸಿಕೊಂಡು ತಿಂದಿದ್ದರಂತೆ. ನಂತರ ಬಿರಿಯಾನಿ ರುಚಿಯನ್ನ ಎಲ್ಲರ ಬಳಿಯೂ ಹೇಳಿಕೊಂಡು ಖುಷಿ ಪಡುತ್ತಿದ್ದರಂತೆ.