Don't Miss!
- News ಕರ್ನಾಟಕದ ಮೇಲೆ ವರುಣನ ಕೃಪೆ: ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ ರಾಜ್ ಗೆ ಕಲರ್ ಶರ್ಟ್ ಹಾಕಿಸಿದ ಅಪರೂಪದ ಕಥೆ
ಏಪ್ರಿಲ್ 12, ವರನಟ ಡಾ.ರಾಜ್ ಕುಮಾರ್ ಅವರ ಪುಣ್ಯತಿಥಿ. ಈ ವಿಶೇಷ ದಿನದಂದು ಅಣ್ಣಾವ್ರ ಕುರಿತು ಒಂದು ಅಪರೂಪದ ಕಥೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಸದಾ ಬಿಳಿ ಶರ್ಟ್ ಮತ್ತು ಪಂಚೆಯಲ್ಲೇ ಇರುತ್ತಿದ್ದ ರಾಜ್ ಅವರ ಬಳಿ ಕಲರ್ ಶರ್ಟ್ ಹಾಕಿಸಿದ ಕಥೆ ಇದು.
ಕನ್ನಡ ಚಿತ್ರರಂಗ ಕಂಡ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಅಶ್ವತ್ಥ ನಾರಾಯಣ ಅವರು ರಾಜ್ ರೊಂದಿಗೆ ಒಡನಾಡಿದ ಸಂದರ್ಭವೊಂದನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ. ನಾನು ಸ್ಥಿರಚಿತ್ರ ಛಾಯಾಗ್ರಹಣದ ಜೊತೆ ಆಗ ಸಿನಿಮಾ ಪತ್ರಿಕೆಗಳಿಗೂ ಕಾರ್ಯ ನಿರ್ವಹಿಸುತ್ತಿದ್ದೆ. ವಿ.ಎನ್.ಸುಬ್ಬರಾವ್ ಅವರ 'ಮೇನಕಾ' ಸಿನಿಮಾ ಪತ್ರಿಕೆಗೆ ಫೋಟೋ ತೆಗೆದುಕೊಡುತ್ತಿದ್ದೆ.
ಈ ಪತ್ರಿಕೆ ಸುಮಾರು ಎಂಟು ವರ್ಷಗಳ ಕಾಲ ನಡೆಯಿತು. ಇದು ನಿಂತುಹೋಗಿ ದಶಕಗಳ ನಂತರ ವಿ.ಎನ್.ಸುಬ್ಬರಾವ್ ಮತ್ತೊಂದು ಸಿನಿಮಾ ಪತ್ರಿಕೆ 'ತಾರಾಲೋಕ' ಆರಂಭಿಸಿದರು. ಈ ಪತ್ರಿಕೆಗೂ ನಾನು ಕೆಲಸ ಮಾಡಿದ್ದೆ. 'ತಾರಾಲೋಕ'ದ ಸುಸಂದರ್ಭವೊಂದನ್ನು ಇಲ್ಲಿ ದಾಖಲಿಸಬಹುದು. ಏನಿದು ಅಣ್ಣಾವ್ರ ಕಲರ್ ಶರ್ಟ್ ಕಥೆ ಮುಂದೆ ಓದಿ.....
ಅಣ್ಣಾವ್ರಿಗೆ ಆಗ 60 ವರ್ಷ
ಡಾ.ರಾಜಕುಮಾರ್ ಅವರಿಗೆ ಅರವತ್ತು ವರ್ಷ (1988) ತುಂಬಿದ ಸಂದರ್ಭ. ಪತ್ರಿಕೆಗಾಗಿ ಸಂದರ್ಶಿಸಲೆಂದು ಸುಬ್ಬರಾವ್ ಮತ್ತು ನಾನು ಸದಾಶಿವನಗರದ ಅವರ ಮನೆಗೆ ಹೋಗಿದ್ದೆವು. 'ಈ ಬಾರಿ ರಾಜ್ ರ ಡಿಫರೆಂಟ್ ಫೋಟೋಗಳೇ ಬೇಕು' ಎಂದು ಸುಬ್ಬರಾಯರು ಖಡಾಖಂಡಿತವಾಗಿ ಹೇಳಿದ್ದರು. ಸದಾ ಬಿಳಿ ಷರ್ಟ್, ಪಂಚೆಯಲ್ಲೇ ಇರುವ ರಾಜ್ ರ ಡಿಫರೆಂಟ್ ಫೋಟೋಗಳನ್ನು ತೆಗೆಯುವುದು ಹೇಗೆಂದು ನನಗೆ ಗೊಂದಲವಾಗಿತ್ತು.
ಸರ್, ಕಲರ್ ಶರ್ಟ್ ಹಾಕಿಕೊಳ್ಳಬಹುದಲ್ಲ
'ಸರ್, ಕಲರ್ ಶರ್ಟ್ ಹಾಕಿಕೊಳ್ಳಬಹುದಲ್ಲ..' ಎಂದು ಸಂದರ್ಶನದ ವೇಳೆ ನಾನು ಅಳುಕಿನಿಂದಲೇ ರಾಜ್ ಗೆ ಮನವಿ ಮಾಡಿದೆ. 'ಶೂಟಿಂಗ್ ಹೊರತು ಬೇರೆ ವೇಳೆ ನಾನು ಯಾವತ್ತೂ ಕಲರ್ ಶರ್ಟ್ ಗಳನ್ನು ಹಾಕಿಕೊಳ್ಳೋಲ್ಲ, ನಿಮಗೆ ಗೊತ್ತಲ್ಲ?' ಎಂದರು ರಾಜ್. 'ಡಿಫರೆಂಟ್ ಆಗಿ ಇರ್ಲಿ ಅಂತ...' ಎಂದು ನಾನು ರಾಗ ಎಳೆದೆ. ಅದೇನನ್ನಿಸಿತೋ ರಾಜ್ ಒಳಹೋದರು. ಕೆಲ ನಿಮಿಷಗಳಲ್ಲೇ ಅಳಿಯ ಗೋವಿಂದರಾಜು ಅವರ ಕಲರ್ ಶರ್ಟ್ ಹಾಕಿಕೊಂಡು ಬಂದರು.
ಗೋವಿಂದು ರಾಜು ಅವರ ಶರ್ಟ್
ಅವರಲ್ಲಿ ಬಿಳಿ ಶರ್ಟ್ ಗಳ ಹೊರತಾಗಿ ಬೇರೆ ಕಲರ್ ನವು ಇರಲೇ ಇಲ್ಲ! ಪಾಪ, ಗೋವಿಂದರಾಜು ಅವರ ಶರ್ಟ್ ರಾಜ್ ದೇಹಕ್ಕೆ ಹೊಂದಿಕೆಯಾಗದೆ ಟೈಟ್ ಆಗಿತ್ತು. ಅದನ್ನು ಬದಲಿಸಿ ಬೇರೆ ಶರ್ಟ್ ಧರಿಸಬಹುದೇ ಎಂದು ಕೇಳಲು ನನಗೂ ಸರಿ ಎನಿಸಲಿಲ್ಲ. ಹಾಗೆಯೇ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದೆ.
ಮಳೆಯಲ್ಲಿ ಫೋಟೋ ತೆಗೆದೆ
ಮನೆಯ ಹೊರಗೆ ಅಂಗಳದಲ್ಲಿ ಫೋಟೋ ತೆಗೆಯುವ ನನ್ನ ಅಪೇಕ್ಷೆಯನ್ನು ರಾಜ್ ಗೆ ಹೇಳಿದೆ. ಆಗ ಮಳೆ ಬರುತ್ತಿತ್ತು. 'ಮಳೆ ಬರ್ತಿದೆ, ಒದ್ದೆಯಾಗ್ತೀರಿ..' ಎಂದೆ. 'ಇದೆಂಥಾ ಮಳೆ, ಬನ್ನಿ ಹೋಗೋಣ..' ಎಂದು ರಾಜ್ ಅಂಗಳಕ್ಕೆ ಬಂದರು. ಮಳೆಯ ಜೊತೆಗೆ ಆಲಿಕಲ್ಲು ಬೀಳುತ್ತಿದ್ದವು. ಅಂಗಳದಲ್ಲಿ ಬಿದ್ದ ಆಲಿಕಲ್ಲುಗಳನ್ನು ಬಾಯಲ್ಲಿ ಹಾಕಿಕೊಂಡು ಖುಷಿಪಟ್ಟರು ರಾಜ್! ಮಗುವಿನಂತೆ ಮಳೆಯ ಖುಷಿ ಅನುಭವಿಸಿದ ಅವರ ಕೆಲವು ಬಂಗಿಗಳನ್ನು ನನ್ನ ಕ್ಯಾಮರಾದಲ್ಲಿ ಸೆರೆಹಿಡಿದೆ.