Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖುಷ್ಬುರಂತೆ ರಶ್ಮಿಕಾಗೂ ದೇವಸ್ಥಾನ ಕಟ್ಟಿಸುತ್ತಾರಾ ಅಭಿಮಾನಿಗಳು?
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು, ಸುದ್ದಿ ಮಾಡುತ್ತಿರುವ ನಟಿ ಅಂದ್ರೆ ರಶ್ಮಿಕಾ ಮಂದಣ್ಣ. ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಏನೆ ಹೇಳಿದ್ರು, ಯಾವುದೆ ಸಿನಿಮಾ ಮಾಡಿದ್ರು ಅಲ್ಲೊಂದು ವಿವಾದ ಸೃಷ್ಟಿಯಾಗುತ್ತೆ. ಟಾಲಿವುಡ್ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುತ್ತಿರುವ ರಶ್ಮಿಕಾ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.
ಇದೆ ಯಶಸ್ಸಿನಲ್ಲಿ ರಶ್ಮಿಕಾ ಈಗ ಸಖತ್ ಜೋಷ್ ನಲ್ಲಿ ಮಾತನಾಡುತ್ತಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಿರಿಕ್ ಸುಂದರಿ ಹಿರಿಯ ನಟಿ ಖುಷ್ಟು ಅವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬರಿ ಪ್ರಸ್ತಾಪ ಮಾಡಿದಲ್ಲ ಖುಷ್ಬುಗಾಗಿ ದೇವಸ್ಥಾನ ಕಟ್ಟಿಸಿರುವ ಬಗ್ಗೆಯು ಹೇಳುತ್ತಾ ತನ್ನ ಆಸೆಯನ್ನು ಬಹಿರಂಗ ಪಡಿಸಿದ್ದಾರೆ.
ವಿಜಯ್ ದೇವರಕೊಂಡಗೆ ಹೇರ್ ಸ್ಟೈಲ್ ಮಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಹೇಳಿಕೆ
"ನನ್ನ ತಂದೆ 90ರ ದಶಕದಲ್ಲಿ ನಟಿ ಖುಷ್ಟುಗಾಗಿ ಅಭಿಮಾನಿಗಳು ದೇವಸ್ಥಾನ ಕಟ್ಟಿರುವ ಬಗ್ಗೆ ಹೇಳುತ್ತಿದ್ದರು. ನನಗೂ ಕೂಡ ಸ್ಮರಣೀಯ ಪ್ರಾಜೆಕ್ಟ್ ಮೂಲಕ ಜನರಲ್ಲಿ ಶಾಶ್ವತವಾಗಿ ನೆಲೆಸಿರಬೇಕು ಎನ್ನುವ ಆಸೆ ಇದೆ" ಎಂದು ಹೇಳಿಕೊಂಡಿದ್ದಾರೆ.
ಅನುಷ್ಕಾ ಶೆಟ್ಟಿ ಕನ್ನಡ ಪ್ರೇಮ ಕಂಡು ರಶ್ಮಿಕಾ ವಿರುದ್ಧ ಕೆಂಡಕಾರುತ್ತಿರುವ ನೆಟ್ಟಿಗರು
ರಶ್ಮಿಕಾಗಿ ನಿರ್ಮಾಣವಾಗುತ್ತಾ ದೇವಸ್ಥಾನ?
ರಶ್ಮಿಕಾ ಇಲ್ಲಿ ನೇರವಾಗಿ ದೇವಸ್ಥಾನ ನಿರ್ಮಾಸಬೇಕು ಎಂದು ಹೇಳದಿದ್ದರು. ಇದರ ಅರ್ಥ ಅಭಿಮಾನಿಗಳಲ್ಲಿ ರಶ್ಮಿಕಾಗಾಗಿ ದೇವಸ್ಥಾನ ನಿರ್ಮಿಸಿ ಎಂದು ಹೇಳಿದ್ದಂತಿದೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ರಶ್ಮಿಕಾ ತೆಲುಗು ಅಭಿಮಾನಿಗಳ ಮನಗೆದ್ದಿದ್ದಾರೆ. ಹಾಗಾಗಿ ಅಭಿಮಾನಿಗಳು ರಶ್ಮಿಕಾಗಾಗಿ, ರಶ್ಮಿಕಾ ಹೆಸರಲ್ಲಿ ಏನಾದ್ರು ನಿರ್ಮಾಣ ಮಾಡಿದ್ರು ಅಚ್ಚರಿ ಇಲ್ಲ.
ಡಿಯರ್ ಕಾಮ್ರೇಡ್ ರಿಲೀಸ್
ಟಾಲಿವುಡ್ ನ ಹಿಟ್ ಜೋಡಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಸಿನಿಮಾವಾಗಿತ್ತು. ಆದ್ರೆ ನಿರೀಕ್ಷೆಯ ಮಟ್ಟವನ್ನು ಮುಟ್ಟುವಲ್ಲಿ ಸಿನಿಮಾ ವಿಫಲವಾದ್ರು ರಶ್ಮಿಕಾ ಅಭಿಮಾನಿಗಳ ಮನಗೆದ್ದಿದ್ದಾರೆ.
ಕಿರಿಕ್ ಬೆಡಗಿಯ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರಿಗೆ ವ್ಯಂಗ್ಯ ಮಾಡಿದ ರಶ್ಮಿಕಾ ತಾಯಿ
ರಶ್ಮಿಕಾ ಕನ್ನಡ ವಿವಾದ
ರಶ್ಮಿಕಾ ಮಂದಣ್ಣ ವಿವಾದಗಳ ನಟಿ ಎಂದರು ತಪ್ಪಾಗಲ್ಲ. ಇತ್ತೀಚಿಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ನಟಿ ರಶ್ಮಿಕಾ. ಕನ್ನಡ ಕಷ್ಟ ಎಂದು ಹೇಳಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ ಪರಭಾಷಿಕರು, ಬೇರೆ ಕಡೆ ನೆಲೆಸಿರುವ ಕನ್ನಡಿಗರು ಯಾರೆ ಕನ್ನಡ ಮಾತನಾಡಿದ್ರು ರಶ್ಮಿಕಾಗೆ ಟ್ಯಾಗ್ ಮಾಡಿ ಆಕೆಯ ಕಾಲೆಳೆಯಲಾಗುತ್ತಿದೆ.