Don't Miss!
- Automobiles Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- News Water Crisis: ಜಲಕ್ಷಾಮ ತಡೆಗೆ ಜಲಸಂರಕ್ಷಣೆಯೇ ಪರಿಹಾರ: ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಜನಾ ವಿಷ್ಯದಲ್ಲಿ ಶ್ರುತಿ ಎಂಟ್ರಿಯಾಗಿದ್ದಕ್ಕೆ 'ಡೆಡ್ಲಿ' ಡೈರೆಕ್ಟರ್ ಫುಲ್ ಗರಂ.!
Recommended Video
'ಗಂಡ ಹೆಂಡತಿ' ಚಿತ್ರದ ನಟಿ ಸಂಜನಾ ನಿರ್ದೇಶಕ ರವಿ ಶ್ರೀವತ್ಸ ಅವರ ಮೇಲೆ ಮೀಟೂ ಆರೋಪ ಮಾಡಿದ್ದಾರೆ. ಚಿತ್ರೀಕರಣದ ವೇಳೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕರ ಶ್ರೀವತ್ಸ ಸಂಜನಾ ಅವರಿಗೆ ತಿರುಗೇಟು ನೀಡಿದ್ದಾರೆ.
ಆಕೆಯ ಆರೋಪ ಸುಳ್ಳು, ಪ್ರಚಾರಕ್ಕಾಗಿ ಹೀಗೆ ಮಾಡ್ತಿದ್ದಾರೆ, ಮೀಟೂ ಅಭಿಯಾನವನ್ನ ದುರಪಯೋಗ ಮಾಡಿಕೊಳ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ನಟಿ ಶ್ರುತಿ ಹರಿಹರನ್ ಗೂ ಡೆಡ್ಲಿ ಡೈರೆಕ್ಟರ್ ಕ್ಲಾಸ್ ತೆಗೆದುಕೊಂಡರು.
'ಗಂಡ-ಹೆಂಡತಿ' ಚಿತ್ರದ ಕೆಟ್ಟ ಅನುಭವ ಹಂಚಿಕೊಂಡ ಸಂಜನಾ: ನಿರ್ದೇಶಕರ ಮೇಲೆ ಗಂಭೀರ ಆರೋಪ
'ಗಂಡ ಹೆಂಡತಿ' ಸಿನಿಮಾ ನಮ್ಮದು, ಸಂಜನಾ ಆರೋಪ ಮಾಡ್ತಿದ್ದಾರೆ, ಮಧ್ಯದಲ್ಲಿ ಬರಲು ನೀವು ಯಾರು.? ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೇ ಶ್ರುತಿ ಅವರ ಮೀಟೂ ಅಭಿಯಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಮುಂದೆ ಓದಿ....
ಸಂಜನಾಗೆ ಬೆಂಬಲ ನೀಡಿದ್ದ ಶ್ರುತಿ
ಸಂಜನಾ ಅವರು ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ ನಂತರ, ಶ್ರುತಿ ಹರಿಹರನ್ ಸಂಜನಾಗೆ ಬೆಂಬಲ ಸೂಚಿಸಿದರು. ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಶ್ರುತಿ 'ನಾನು ನಿಮ್ಮ ಬೆಂಬಲಕ್ಕೆ ಇದ್ದೇನೆ, ನಟಿಯ ಒಪ್ಪಿಗೆ ಇಲ್ಲದೇ ಯಾವುದೇ ರೋಮ್ಯಾಟಿಂಕ್ ಸೀನ್ ಮಾಡಲು ಸಾಧ್ಯವಿಲ್ಲ. ರವಿಶ್ರೀವತ್ಸ Timesup ಎಂದು' ಟ್ವೀಟ್ ಮಾಡಿದ್ದರು.
ಸಂಜನಾಗೆ 'ಡೆಡ್ಲಿ' ತಿರುಗೇಟು ನೀಡಿದ 'ಗಂಡ ಹೆಂಡತಿ' ರವಿ ಶ್ರೀವತ್ಸ
ಕಿಡಿ ಕಾರಿದ ಶ್ರೀವತ್ಸ
ಶ್ರುತಿ ಹರಿಹರನ್ ಅವರೇ ಯಾವಾಗ ಚಿತ್ರರಂಗಕ್ಕೆ ಬಂದ್ರಿ, ಒಬ್ಬ ನಿರ್ದೇಶಕರಿಗೆ ಹೇಳಬೇಕೆಂದು ಗೊತ್ತಿಲ್ಲ. ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಅಮ್ಮ-ತಾಯಿ ಅಂತ ಗೌರವ ಕೊಟ್ರೆ ಹೀಗೆ. ನಿಮಗೆ ನಾನೇಮ್ಮ ಮಾಡಿದೆ. ಇದು ನಮ್ಮ ಮತ್ತು ಸಂಜನಾ ಅವರ ಮಧ್ಯೆ ಇರೋ ವಿಷ್ಯ. ನೀವು ಯಾರು.? ಎಂದು ಪ್ರಶ್ನಿಸಿದ್ದಾರೆ.
'ಇದನೆಲ್ಲ ನೋಡಿ ರಕ್ತ ಕುದಿಯುತ್ತಿದೆ' : 'ಗಂಡ ಹೆಂಡತಿ' ನಿರ್ದೇಶಕ ಬಿಚ್ಚಿಟ್ಟ ಕಹಿ ಸತ್ಯಗಳು!
ಇದೆಲ್ಲವೂ ಪ್ರಚಾರ ಅಷ್ಟೇ
ಫೈರ್, ಮೀಟೂ, ಇನ್ನೊಂದು ಏನೂ ಬೇಕಾದರೂ ಮಾಡಿಕೊಳ್ಳಿ. ಬಹುಶಃ ಇದೆಲ್ಲವೂ ಪ್ರಚಾರಕ್ಕಾಗಿ ಮಾಡ್ತಿದ್ದಾರೆ ಅನಿಸುತ್ತಿದೆ ಅಷ್ಟೇ. ಇದು ಕೂಡ ನಿರ್ದೇಶಕರ ಸಂಘದ ಗಮನಕ್ಕೆ ತಂದಿದ್ದೇನೆ'' ಎಂದು ಹಿರಿಯ ನಿರ್ದೇಶಕ ರವಿಶ್ರೀವತ್ಸ ಅಭಿಪ್ರಾಯ ಪಟ್ಟಿದ್ದಾರೆ.
ನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲ
ಮೀಟೂ ಪ್ರಚಾರ ಮಾಡ್ತಿರುವ ಶ್ರುತಿ
ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್, ಉಳಿದ ನಟಿಯರಿಗೆ ಸಪೋರ್ಟ್ ಮಾಡ್ತಿದ್ದಾರೆ. ಧೈರ್ಯವಾಗಿ ಮುಂದೆ ಬಂದು ಹೇಳಿ ಎಂದು ಕರೆ ನೀಡಿದ್ದಾರೆ. ಇನ್ನು ಈ ಅಭಿಯಾನವನ್ನ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ, ತಮ್ಮ ಟ್ವಿಟ್ಟರ್ ನಲ್ಲಿ ಮೀಟೂ ಅಭಿಯಾನದ ವಿಷ್ಯಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು
ಸಂಜನಾ ಏನಂದ್ರು.?
ಸದ್ಯ ಅಮೇರಿಕಾದಲ್ಲಿರುವ ಸಂಜನಾ ಅವರು ಶ್ರೀವತ್ಸ ಅವರ ಪ್ರತ್ಯಾರೋಪಗಳನ್ನ ಅಲ್ಲೆಗಳೆದಿದ್ದಾರೆ. ನಾನು ಹೇಳಿದ ಆರೋಪಗಳಲ್ಲೆವೂ ಸತ್ಯ, ನಾನು ಅದನ್ನ ನಿರೂಪಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸುತ್ತಿರುವ ಜನ ಪರ-ವಿರೋಧದ ಚರ್ಚೆ ಮಾಡ್ತಿದ್ದಾರೆ.
ಆ ನಿರ್ದೇಶಕನ ಮಂಚಕ್ಕೆ ಕಳುಹಿಸಲು ಸ್ಕೆಚ್ ಹಾಕಿದ್ಲು ಕೇಶ ವಿನ್ಯಾಸಕಿ: ಸಂಗೀತಾ ಭಟ್