Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರರಂಗಕ್ಕೆ ಬಂದೇ ಬಿಟ್ರಲ್ಲ ಬಾಲಿವುಡ್ ನಟ ವಿವೇಕ್ ಒಬೆರಾಯ್.!
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಸಿನಿಮಾದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕೂಡ ನಟಿಸಲಿದ್ದಾರೆ ಎಂಬ ಗುಸುಗುಸು ಮೊನ್ನೆಯಷ್ಟೇ ಹರಿದಾಡಿತ್ತು.
ಈಗ ಅದೇ ಸುದ್ದಿ ನಿಜವಾಗಿದೆ. 'ರುಸ್ತುಂ' ಚಿತ್ರಕ್ಕಾಗಿ ವಿವೇಕ್ ಒಬೆರಾಯ್ ಗೆ ಬುಲಾವ್ ನೀಡಿರುವುದು ಪಕ್ಕಾ. 'ರುಸ್ತುಂ' ಮೂಲಕ ವಿವೇಕ್ ಒಬೆರಾಯ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಕೂಡ ಅಷ್ಟೇ ಸತ್ಯ. ಅದಕ್ಕೆ ಸಾಕ್ಷಿ ಈ ಫೋಟೋಗಳು...
ಇತ್ತೀಚೆಗಷ್ಟೇ ಬಾಲಿವುಡ್ ನಟ ವಿವೇಕ್ ಒಬೆರಾಯ್ ರನ್ನ 'ರುಸ್ತುಂ' ನಿರ್ದೇಶಕ ರವಿ ವರ್ಮಾ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ತೆಗೆದ ಸೆಲ್ಫಿಯನ್ನ ಸ್ಟಂಟ್ ಮಾಸ್ಟರ್ ರವಿ ವರ್ಮಾ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿರಿ...
|
ಸ್ಯಾಂಡಲ್ ವುಡ್ ಗೆ ವೆಲ್ ಕಮ್.!
''ಡಿಯರ್ ವಿವೇಕ್ ಒಬೆರಾಯ್, ಕನ್ನಡ ಚಿತ್ರರಂಗಕ್ಕೆ ನಿಮಗೆ ಆತ್ಮೀಯ ಸ್ವಾಗತ'' ಎಂದು 'ರುಸ್ತುಂ' ನಿರ್ದೇಶಕ ರವಿ ವರ್ಮಾ ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ, ವಿವೇಕ್ ಒಬೆರಾಯ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡುತ್ತಿರುವುದು ಕನ್ಫರ್ಮ್ ಅಂತಲೇ ಲೆಕ್ಕ.
ಶಿವಣ್ಣನ ಜೊತೆಗೆ ತೆರೆಹಂಚಿಕೊಳ್ತಾರೆ ಬಾಲಿವುಡ್ ನಟ.! ಯಾರದು.?
ವಿವೇಕ್ ಒಬೆರಾಯ್ ಪಾತ್ರ ಏನು.?
'ರುಸ್ತುಂ' ಚಿತ್ರಕ್ಕೆ ವಿವೇಕ್ ಒಬೆರಾಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬುದಷ್ಟೇ ಸದ್ಯದ ಬ್ರೇಕಿಂಗ್ ನ್ಯೂಸ್. 'ರುಸ್ತುಂ' ಚಿತ್ರದಲ್ಲಿ ಅವರ ಪಾತ್ರ ಏನು ಎಂಬ ಗುಟ್ಟನ್ನ ನಿರ್ದೇಶಕ ರವಿ ವರ್ಮಾ ಬಿಟ್ಟುಕೊಟ್ಟಿಲ್ಲ.
ಶಿವಣ್ಣನ 'ರುಸ್ತುಂ' ಅಡ್ಡದಲ್ಲಿ ಕಾಲಿವುಡ್ ಕಲಾವಿದ
ಶಿವಣ್ಣ ಮಾತ್ರ ಪೊಲೀಸ್.!
'ರುಸ್ತುಂ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ. ಶಿವಣ್ಣನಂತೆಯೇ ವಿವೇಕ್ ಒಬೆರಾಯ್ ಕೂಡ ಪೊಲೀಸ್ ಆಧಿಕಾರಿಯೋ ಇಲ್ಲ ಖತರ್ನಾಕ್ ಕೇಡಿಯೋ ಎಂಬುದಿನ್ನೂ ಖಚಿತ ಆಗಿಲ್ಲ.
ಸದ್ಯದಲ್ಲೇ ಶೂಟಿಂಗ್ ಶುರು
ಈಗಾಗಲೇ 'ರುಸ್ತುಂ' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 'ರುಸ್ತುಂ' ಅಡ್ಡಕ್ಕೆ ವಿವೇಕ್ ಒಬೆರಾಯ್ ಸೇರಿಕೊಳ್ಳಲಿದ್ದಾರೆ. 'ರುಸ್ತುಂ' ಚಿತ್ರಕ್ಕೆ ಜಯಣ್ಣ ಬಂಡವಾಳ ಹಾಕುತ್ತಿದ್ದಾರೆ.
ಬೆಂಗಳೂರು ಅಳಿಯ
ವಿವೇಕ್ ಒಬೆರಾಯ್ ಬಾಲಿವುಡ್ ನಟ ಇರಬಹುದು. ಆದ್ರೆ, ಅವರು ಬೆಂಗಳೂರಿನ ಅಳಿಯ. ರಾಜಕಾರಣಿ ಜೀವರಾಜ್ ಹಾಗೂ ನಂದಿನಿ ಆಳ್ವಾ ಪುತ್ರಿ ಪ್ರಿಯಾಂಕಾ ಆಳ್ವಾ ರನ್ನ ವಿವೇಕ್ ಒಬೆರಾಯ್ ಮದುವೆ ಆಗಿದ್ದಾರೆ. ಹೀಗಾಗಿ ಆಗಾಗ ವಿವೇಕ್ ಒಬೆರಾಯ್ ಬೆಂಗಳೂರಿಗೆ ಬರ್ತಾನೇ ಇರ್ತಾರೆ.