ರವಿಚಂದ್ರನ್, ಅಪೂರ್ವರನ್ನು ಮತ್ತೆ ಒಟ್ಟಿಗೆ ಸೇರಿಸಿದ ತಮಿಳು ನಿರ್ದೇಶಕ
Recommended Video

ನಟ ರವಿಚಂದ್ರನ್ ಈಗ ಸಾಕಷ್ಟು ಸಿನಿಮಾಗಳಲ್ಲಿ ಬಿಜಿ ಇದ್ದಾರೆ. ಅವರ 'ರಾಜೇಂದ್ರ ಪೊನ್ನಪ್ಪ' ಸಿನಿಮಾದ ವಿಭಿನ್ನ ಪೋಸ್ಟರ್ ಗಳು ಕೆಲ ದಿನಗಳ ಹಿಂದೆಯಷ್ಟೆ ಹೊರ ಬಂದಿತ್ತು. ಆದರೆ ಈಗ ಕ್ರೇಜಿ ಸ್ಟಾರ್ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ.
ರವಿಚಂದ್ರನ್ ಮತ್ತು ನಟಿ ಅಪೂರ್ವ ಹೊಸ ಸಿನಿಮಾದ ಬಗ್ಗೆ ಈ ಹಿಂದೆಯೇ ಸುದ್ದಿ ಹಬ್ಬಿತ್ತು. ಈಗ ಆ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಈ ಚಿತ್ರಕ್ಕೆ 'ಕೀಚಕ' ಎಂಬ ಹೆಸರನ್ನು ಇಡಲಾಗಿದೆಯಂತೆ. ವಿಶೇಷ ಅಂದರೆ ರವಿಚಂದ್ರನ್ ಅವರ ಈ ಸಿನಿಮಾವನ್ನು ತಮಿಳಿನ ನಿರ್ದೇಶಕ ಶಿವರಾಜ್ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರ ಕಥೆ, ಚಿತ್ರಕಥೆಯ ಹಂತದಲ್ಲಿ ಇದೆ. 'ಕೀಚಕ' ಮಾಸ್ ಜೊತೆಗೆ ಲವ್ ಸ್ಟೋರಿ ಹೊಂದಿರುವ ಸಿನಿಮಾವಾಗಿದೆ. ಮುಂದಿನ ತಿಂಗಳು ಈ ಸಿನಿಮಾ ಸೆಟ್ಟೇರಲಿದೆ.

ನಿರ್ದೇಶಕ ಶಿವರಾಜ್ ಈ ಹಿಂದೆ ಉಪೇಂದ್ರ ನಟನೆಯ 'ಎ' ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್ ಮಾಡಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ. ಉಳಿದಂತೆ, ಮಳವಳ್ಳಿ ಸಾಯಿಕೃಷ್ಣ ಡೈಲಾಗ್ ಬರೆಯಲಿದ್ದಾರೆ. 'ಕುರುಕ್ಷೇತ್ರ', 'ರಾಜೇಂದ್ರ ಪೋನ್ನಪ್ಪ', 'ಕೀಚಕ' ಹೀಗೆ ಒಂದಲ್ಲ ಒಂದು ಸಿನಿಮಾದಲ್ಲಿ ರವಿಚಂದ್ರನ್ ತೊಡಗಿದ್ದಾರೆ.


Click it and Unblock the Notifications











