twitter
    For Quick Alerts
    ALLOW NOTIFICATIONS  
    For Daily Alerts

    ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ಜಟ್ಟ' ಗಿರಿರಾಜ್ ಸಿನಿಮಾ

    |

    ಸೂಕ್ಷ್ಮ ಕತೆಗಳ ಸಿನಿಮಾ ನಿರ್ದೇಶಕ ಬಿ.ಎಂ.ಗಿರಿರಾಜ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

    ಮೊನ್ನೆಯಷ್ಟೆ ರವಿಚಂದ್ರನ್ ಹುಟ್ಟುಹಬ್ಬಕ್ಕೆ ರವಿಚಂದ್ರಬ್ ಅವರ ಜೊತೆಗಿದ್ದ ಚಿತ್ರವನ್ನು ಅಪ್‌ಲೋಡ್ ಮಾಡಿದ್ದ ಗಿರಿರಾಜ್ ರವಿಚಂದ್ರನ್ ಅವರಿಗೆ ವಿಶ್ ಮಾಡಿದ್ದರು.

    ಕ್ರೇಜಿ ಸ್ಟಾರ್ ರವಿಚಂದ್ರನ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಅಕೌಂಟ್ಕ್ರೇಜಿ ಸ್ಟಾರ್ ರವಿಚಂದ್ರನ್ ಹೆಸರಲ್ಲಿ ನಕಲಿ ಟ್ವಿಟ್ಟರ್ ಅಕೌಂಟ್

    ಜಟ್ಟ, ಅದ್ವೈತ, ಮೈತ್ರಿ, ಅಮರಾವತಿ ಅಂಥಹಾ ಸೂಕ್ಷ್ಮ ಸಿನಿಮಾಗಳನ್ನು ನಿರ್ದೇಶಿಸಿರುವ ಬಿ.ಎಂ.ಗಿರಿರಾಜ್ ಅವರು ಕ್ರೇಜಿಸ್ಟಾರ್ ಜೊತೆಗೂಡಿರುವುದೇ ಕುತೂಹಲ ಕೆರಳಿಸಿದೆ.

    Ravichandran Collabarating With Director BM Giriraj

    ಇತ್ತೀಚೆಗಷ್ಟೆ ಬಿ.ಎಂ.ಗಿರೀಶ್, ರವಿಚಂದ್ರನ್ ಅವರನ್ನು ಭೇಟಿಯಾಗಿದ್ದು, ರವಿಚಂದ್ರನ್ ಅವರಿಗೆ ಕತೆ ಹೇಳಿದ್ದಾರೆ. ಮುಂದಿನ ಹಂತದ ಮಾತುಕತೆ ನಡೆಸಬೇಕಿದೆ. ಕತೆ ರವಿಚಂದ್ರನ್ ಅವರಿಗೆ ಇಷ್ಟವಾಗಿದೆ ಎನ್ನಲಾಗಿದೆ.

    ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದ ರವಿಚಂದ್ರನ್‌ಗೊಂದು ಬೇಡಿಕೆಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಂದ ರವಿಚಂದ್ರನ್‌ಗೊಂದು ಬೇಡಿಕೆ

    ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಬಿ.ಎಂ.ಗಿರಿರಾಜ್ ಅವರು, 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕತೆ ಇದಾಗಿದ್ದು, ಸಿನಿಮಾಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿದ್ದೇನೆ ಎಂದಿದ್ದಾರೆ. ನಟಿಸಲು ರವಿಚಂದ್ರನ್ ಓಕೆ ಎಂದರೆ ಬಹುತೇಕ ಇದೇ ಮೊದಲ ಬಾರಿಗೆ ಐತಿಹಾಸಿಕ ಹಿನ್ನೆಲೆಯ ಕತೆಯ ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದಂತಾಗುತ್ತದೆ.

    English summary
    Director BM Giriraj making movie for Ravichandran. He told story to Ravichandran and he said yes.
    Wednesday, June 3, 2020, 7:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X