Don't Miss!
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಷ್ಣು ಹಾಗೂ 'ನಾಗರಹಾವು' ಚಿತ್ರಕ್ಕಿರುವ ನಂಟಿನ ಬಗ್ಗೆ ರವಿಚಂದ್ರನ್ ಮಾತು
'ನಾಗರಹಾವು' ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ಸುದ್ದಿಗೋಷ್ಟಿಯನ್ನು ಮಾಡಿದಾಗ ವಿಷ್ಣುವರ್ಧನ್ ಬಗ್ಗೆ ರವಿಚಂದ್ರನ್ ಮಾತನಾಡಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ನಾಳೆ ಬಿಡುಗಡೆ ಆಗುತ್ತಿರುವ 'ನಾಗರಹಾವು' ಸಿನಿಮಾ ಬಗ್ಗೆ ರವಿಚಂದ್ರನ್ ಪತ್ರದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅದರಲ್ಲಿ 'ನಾಗರಹಾವು' ಚಿತ್ರಕ್ಕೂ ವಿಷ್ಣುವರ್ಧನ್ ಅವರಿಗಿದ್ದ ನಂಟಿನ ಬಗ್ಗೆ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ವೀರಾಸ್ವಾಮಿ ಮತ್ತು ವಿಷ್ಣುವರ್ಧನ್ ಇಬ್ಬರಿಗೂ ಇದ್ದ ಸಂಬಂಧ ಎಂತಹದ್ದೂ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. "ಕೆಲವೇ ದಿನಗಳ ಹಿಂದೆ ಪ್ರೆಸ್ ಮೀಟ್ ನಲ್ಲಿ ನಾನು ವಿಷ್ಣುವರ್ಧನ್ ಬಗ್ಗೆ ಮಾತನಾಡಿಲ್ಲ ಎಂದು ಸಾಕಷ್ಟು ಜನರು ಬೇಸರ ವ್ಯಕ್ತ ಪಡಿಸಿದ್ದರು. 'ನಾಗರಹಾವು' ಚಿತ್ರದ ಬಗ್ಗೆ ನಾನು ಏನೇ ಹೇಳಿದರು ಕಡಿಮೆ"
'ವಿಷ್ಣುವರ್ಧನ್ ಇಲ್ಲದೆ 'ನಾಗರಹಾವು' ಚಿತ್ರ ಆಗುತ್ತಲೇ ಇರಲಿಲ್ಲ.ಈ ಬಾವನೆ ತಂದೆಯವರಲ್ಲೂ ಇತ್ತು. ವಿಷ್ಣು ಅವರಷ್ಟು ರಾಮಚಾರಿ ಪಾತ್ರಕ್ಕೆ ನ್ಯಾಯ ಒದಗಿಸಲು ಮತ್ಯಾರಿಗೂ ಸಾಧ್ಯವೇ ಇಲ್ಲ. ವಿಷ್ಣುವರ್ಧನ್ ಮತ್ತು ತಂದೆಯವರು ಉತ್ತಮ ಬಾಂದವ್ಯವನ್ನು ಹೊಂದಿದ್ದರು. ಅವರನ್ನು ನಮ್ಮ ತಂದೆ ನನ್ನ ದೊಡ್ಡ ಮಗ ಎನ್ನುತ್ತಿದ್ದರು"..
ಅಷ್ಟರ ಮಟ್ಟಿಗೆ ಇಬ್ಬರ ಬಾಂದವ್ಯ ಬೆಸೆದುಕೊಂಡಿತ್ತು ಎನ್ನುವುದನ್ನು ನಟ ರವಿಚಂದ್ರನ್ ಸಿನಿಮಾ ರೀ ರಿಲೀಸ್ ಆಗುವ ಸಮಯದಲ್ಲಿ ಹೇಳಿಕೊಂಡಿದ್ದಾರೆ.