ವಿ ನಾಗೇಂದ್ರ ಪ್ರಸಾದ್ ಕೈ ಸೇರಿದ ಕ್ರೇಜಿ ಕರೆಯೋಲೆ
''ಧಿಡೀರನೆ.. ನಿಮ್ಮ ಮನೆಗೆ ಬರ್ತಾ ಇದೀನಿ ಅಂದ್ರೆ ಹೇಗಾಗಬೇಡ?'' ಈ ರೀತಿ ತಮ್ಮ ನಿವಾಸಕ್ಕೆ ನಟ ವಿ ರವಿಚಂದ್ರನ್ ಬಂದ ಕ್ಷಣವನ್ನು ಗೀತರಚನೆಕಾರ ಡಾ. ವಿ ನಾಗೇಂದ್ರ ಪ್ರಸಾದ್ ವಿವರಿಸಿದ್ದಾರೆ.
ಕನಸುಗಾರ ವಿ ರವಿಚಂದ್ರನ್ ತಮ್ಮ ಮಗಳ ಮದುವೆಯ ತಯಾರಿಯಲ್ಲಿ ಇದ್ದಾರೆ. ಇದೀಗ ಅತಿಥಿಗಳಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ. ಕ್ರೇಜಿ ಕರೆಯೋಲೆ ಈಗ ಗೀತರಚನೆಗಾರ ವಿ ನಾಗೇಂದ್ರ ಪ್ರಸಾದ್ ಕೈ ಸೇರಿದೆ.
ನಿನ್ನೆ (ಮೇ 5) ಭಾನುವಾರದಂದು ನಾಗೇಂದ್ರ ಪ್ರಸಾದ್ ಮನೆಗೆ ರವಿಚಂದ್ರನ್ ಬಂದಿದ್ದರು. ತಮ್ಮ ಇಡೀ ಕುಟುಂಬವನ್ನು ಮದುವೆಗೆ ಆಮಂತ್ರಿಸಿದರು. 10 ನಿಮಿಷ ಕೂತು ಚೂರು ನೀರು, ಚೂರು ಕಾಫೀ ಹೀರಿತ್ತಾ ನಿರರ್ಗಳವಾಗಿ ಮಾತನಾಡಿದರು.

ಅಂದಹಾಗೆ, ರವಿಚಂದ್ರನ್ ಬಂದ ವಿಷಯವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ನಾಗೇಂದ್ರ ಪ್ರಸಾದ್ ಕನಸುಗಾರನ ಬಗ್ಗೆ ನಾಲ್ಕು ಸಾಲು ಬರೆದುಕೊಂಡಿದ್ದಾರೆ.
ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ಮದುವೆ ಮೇ 28 ಹಾಗೂ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಚಿತ್ರರಂಗದ ಅನೇಕ ಸ್ನೇಹಿತರಿಗೆ ಆಹ್ವಾನ ನೀಡಿದ್ದಾರೆ ರವಿಚಂದ್ರನ್.


Click it and Unblock the Notifications











