twitter
    For Quick Alerts
    ALLOW NOTIFICATIONS  
    For Daily Alerts

    ವಿ ನಾಗೇಂದ್ರ ಪ್ರಸಾದ್ ಕೈ ಸೇರಿದ ಕ್ರೇಜಿ ಕರೆಯೋಲೆ

    |

    ''ಧಿಡೀರನೆ.. ನಿಮ್ಮ ಮನೆಗೆ ಬರ್ತಾ ಇದೀನಿ ಅಂದ್ರೆ ಹೇಗಾಗಬೇಡ?'' ಈ ರೀತಿ ತಮ್ಮ ನಿವಾಸಕ್ಕೆ ನಟ ವಿ ರವಿಚಂದ್ರನ್ ಬಂದ ಕ್ಷಣವನ್ನು ಗೀತರಚನೆಕಾರ ಡಾ. ವಿ ನಾಗೇಂದ್ರ ಪ್ರಸಾದ್ ವಿವರಿಸಿದ್ದಾರೆ.

    ಕನಸುಗಾರ ವಿ ರವಿಚಂದ್ರನ್ ತಮ್ಮ ಮಗಳ ಮದುವೆಯ ತಯಾರಿಯಲ್ಲಿ ಇದ್ದಾರೆ. ಇದೀಗ ಅತಿಥಿಗಳಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ. ಕ್ರೇಜಿ ಕರೆಯೋಲೆ ಈಗ ಗೀತರಚನೆಗಾರ ವಿ ನಾಗೇಂದ್ರ ಪ್ರಸಾದ್ ಕೈ ಸೇರಿದೆ.

    ರವಿಚಂದ್ರನ್ ಮಗಳ ಮದುವೆ ಕರೆಯೋಲೆ : ಒಂದು ಕಾರ್ಡ್ ಬೆಲೆ ಇಷ್ಟೊಂದು! ರವಿಚಂದ್ರನ್ ಮಗಳ ಮದುವೆ ಕರೆಯೋಲೆ : ಒಂದು ಕಾರ್ಡ್ ಬೆಲೆ ಇಷ್ಟೊಂದು!

    ನಿನ್ನೆ (ಮೇ 5) ಭಾನುವಾರದಂದು ನಾಗೇಂದ್ರ ಪ್ರಸಾದ್ ಮನೆಗೆ ರವಿಚಂದ್ರನ್ ಬಂದಿದ್ದರು. ತಮ್ಮ ಇಡೀ ಕುಟುಂಬವನ್ನು ಮದುವೆಗೆ ಆಮಂತ್ರಿಸಿದರು. 10 ನಿಮಿಷ ಕೂತು ಚೂರು ನೀರು, ಚೂರು ಕಾಫೀ ಹೀರಿತ್ತಾ ನಿರರ್ಗಳವಾಗಿ ಮಾತನಾಡಿದರು.

    ಅಂದಹಾಗೆ, ರವಿಚಂದ್ರನ್ ಬಂದ ವಿಷಯವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ನಾಗೇಂದ್ರ ಪ್ರಸಾದ್ ಕನಸುಗಾರನ ಬಗ್ಗೆ ನಾಲ್ಕು ಸಾಲು ಬರೆದುಕೊಂಡಿದ್ದಾರೆ.

    ಯಾರ್ ಯಾರಿಗೆ ತಲುಪಿದೆ ಕ್ರೇಜಿಸ್ಟಾರ್ ಪುತ್ರಿಯ ಮದುವೆ ಆಮಂತ್ರಣ ಯಾರ್ ಯಾರಿಗೆ ತಲುಪಿದೆ ಕ್ರೇಜಿಸ್ಟಾರ್ ಪುತ್ರಿಯ ಮದುವೆ ಆಮಂತ್ರಣ

    ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ಮದುವೆ ಮೇ 28 ಹಾಗೂ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಚಿತ್ರರಂಗದ ಅನೇಕ ಸ್ನೇಹಿತರಿಗೆ ಆಹ್ವಾನ ನೀಡಿದ್ದಾರೆ ರವಿಚಂದ್ರನ್.

    English summary
    Crazy Star Ravichandran invited lyricist V Nagendra Prasad for his daughter Geethanjali wedding. Geethanjali and businessman Ajay marriage will be held on May 28 and 29th.
    Monday, May 6, 2019, 10:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X