Don't Miss!
- News Heavy Rain Alert: ಮುಂದಿನ ನಾಲ್ಕು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿ ನಾಗೇಂದ್ರ ಪ್ರಸಾದ್ ಕೈ ಸೇರಿದ ಕ್ರೇಜಿ ಕರೆಯೋಲೆ
''ಧಿಡೀರನೆ.. ನಿಮ್ಮ ಮನೆಗೆ ಬರ್ತಾ ಇದೀನಿ ಅಂದ್ರೆ ಹೇಗಾಗಬೇಡ?'' ಈ ರೀತಿ ತಮ್ಮ ನಿವಾಸಕ್ಕೆ ನಟ ವಿ ರವಿಚಂದ್ರನ್ ಬಂದ ಕ್ಷಣವನ್ನು ಗೀತರಚನೆಕಾರ ಡಾ. ವಿ ನಾಗೇಂದ್ರ ಪ್ರಸಾದ್ ವಿವರಿಸಿದ್ದಾರೆ.
ಕನಸುಗಾರ ವಿ ರವಿಚಂದ್ರನ್ ತಮ್ಮ ಮಗಳ ಮದುವೆಯ ತಯಾರಿಯಲ್ಲಿ ಇದ್ದಾರೆ. ಇದೀಗ ಅತಿಥಿಗಳಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ. ಕ್ರೇಜಿ ಕರೆಯೋಲೆ ಈಗ ಗೀತರಚನೆಗಾರ ವಿ ನಾಗೇಂದ್ರ ಪ್ರಸಾದ್ ಕೈ ಸೇರಿದೆ.
ರವಿಚಂದ್ರನ್ ಮಗಳ ಮದುವೆ ಕರೆಯೋಲೆ : ಒಂದು ಕಾರ್ಡ್ ಬೆಲೆ ಇಷ್ಟೊಂದು!
ನಿನ್ನೆ (ಮೇ 5) ಭಾನುವಾರದಂದು ನಾಗೇಂದ್ರ ಪ್ರಸಾದ್ ಮನೆಗೆ ರವಿಚಂದ್ರನ್ ಬಂದಿದ್ದರು. ತಮ್ಮ ಇಡೀ ಕುಟುಂಬವನ್ನು ಮದುವೆಗೆ ಆಮಂತ್ರಿಸಿದರು. 10 ನಿಮಿಷ ಕೂತು ಚೂರು ನೀರು, ಚೂರು ಕಾಫೀ ಹೀರಿತ್ತಾ ನಿರರ್ಗಳವಾಗಿ ಮಾತನಾಡಿದರು.
ಅಂದಹಾಗೆ, ರವಿಚಂದ್ರನ್ ಬಂದ ವಿಷಯವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ನಾಗೇಂದ್ರ ಪ್ರಸಾದ್ ಕನಸುಗಾರನ ಬಗ್ಗೆ ನಾಲ್ಕು ಸಾಲು ಬರೆದುಕೊಂಡಿದ್ದಾರೆ.
ಯಾರ್ ಯಾರಿಗೆ ತಲುಪಿದೆ ಕ್ರೇಜಿಸ್ಟಾರ್ ಪುತ್ರಿಯ ಮದುವೆ ಆಮಂತ್ರಣ
ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ಮದುವೆ ಮೇ 28 ಹಾಗೂ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಚಿತ್ರರಂಗದ ಅನೇಕ ಸ್ನೇಹಿತರಿಗೆ ಆಹ್ವಾನ ನೀಡಿದ್ದಾರೆ ರವಿಚಂದ್ರನ್.