Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಸರು ಬದಲಿಸಿಕೊಂಡ ರವಿಚಂದ್ರನ್ ಪುತ್ರ ಮನೋರಂಜನ್
Recommended Video
ನಟ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ. ಮನೋರಂಜನ್ ಬದಲು ಮನು ರಂಜನ್ ಎಂದು ಇನ್ನು ಮುಂದೆ ಅವರನ್ನು ಕರೆಯಬೇಕಾಗಿದೆ.
ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾವಣೆ ಅಗತ್ಯ ಇದ್ದು, ತಮ್ಮ ಹೆಸರನ್ನು ಕೊಂಚ ಬದಲಾವಣೆ ತಂದಿದ್ದಾರೆ. ಮನೋ ಬದಲು ಮನು ಆಗಿದ್ದಾರೆ. ಇನ್ನು ಮುಂದೆ ಸಿನಿಮಾಗಳ ಟೈಟಲ್ ಕಾರ್ಡ್ ನಲ್ಲಿಯೂ ಇದೇ ಹೆಸರು ಮುಂದುವರೆಯುತ್ತದೆ.
ಕ್ರೇಜಿಸ್ಟಾರ್ ಪುತ್ರನ 'ಮುಗಿಲ್ ಪೇಟೆ' ಚಿತ್ರದ ನಾಯಕಿ ಯಾರು?
ಮನು ರಂಜನ್ 'ಸಾಹೇಬ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ಆ ಸಿನಿಮಾ ಕೆಲವು ಪ್ರೇಕ್ಷಕರಿಗೆ ಇಷ್ಟ ಆಯ್ತು. ನಂತರ ಬಿಡುಗಡೆಯಾದ 'ಬೃಹಸ್ಪತಿ' ಫ್ಲಾಪ್ ಸಿನಿಮಾವಾಯ್ತು. ಇದೀಗ ಮೂರನೇ ಸಿನಿಮಾದ ಮೂಲಕ ಮನು ರಂಜನ್ ಬದಲಾವಣೆ ಬಯಸಿದ್ದಾರೆ. ಅದು ಅವರ ಹೆಸರಿನಲ್ಲಿಯೇ ಶುರುವಾಗಿದೆ.
ಇತ್ತೀಚಿಗಷ್ಟೆ ತಮ್ಮ 'ಮುಗಿಲ್ ಪೇಟೆ' ಸಿನಿಮಾ ಲಾಂಚ್ ಆಗಿದೆ. ಈ ಸಿನಿಮಾದ ಪೋಸ್ಟರ್ ನಲ್ಲಿಯೂ ಮನು ರಂಜನ್ ಎಂದು ಬರೆಯಲಾಗಿದೆ. ಭರತ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ಖಯಾದು ಮೋಹನ್ ಲೋರಾ ಸಿನಿಮಾದ ನಾಯಕಿಯಾಗಿದ್ದಾರೆ.
ರವಿಚಂದ್ರನ್ ಸಿನಿಮಾ ನೋಡಿ ಅವ್ರ ಮಕ್ಕಳೇ ಭಯ ಪಟ್ಟರು
'ಗಾಳಿಪಟ' ಸಿನಿಮಾದಲ್ಲಿ 'ಮುಗಿಲ್ ಪೇಟೆ' ಎಂಬ ಊರಿನ ಹೆಸರು ಫೇಮಸ್ ಆಗಿದ್ದು, ಅದೇ ಈ ಸಿನಿಮಾದ ಶೀರ್ಷಿಕೆಯಾಗಿದೆ. ಸಿನಿಮಾ ಒಂದು ಲವ್ ಸ್ಟೋರಿಯಾಗಿದೆ. ಇದು ಮನು ರಂಜನ್ ನಟನೆಯ ನಾಲ್ಕನೇ ಸಿನಿಮಾ.