Don't Miss!
- Sports PBKS vs MI: ಐಪಿಎಲ್ನಲ್ಲಿ ಈ ಇತಿಹಾಸ ನಿರ್ಮಿಸಿದ 2ನೇ ಆಟಗಾರ ರೋಹಿತ್ ಶರ್ಮಾ
- News ಸಿಎಂ ಸಿದ್ದರಾಮಯ್ಯಗೆ ಡಾ.ಕೆ.ಸುಧಾಕರ್ ಸವಾಲು!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುತ್ರನಿಗೆ ಕ್ರೇಜಿಸ್ಟಾರ್ ನಿರ್ದೇಶನ: 90 ನಿಮಿಷದಲ್ಲಿ ಸಿದ್ಧವಾದ ಕಥೆ
Recommended Video
ರವಿಚಂದ್ರನ್ ಹೊಸ ಹೊಸ ಕಥೆಗಳನ್ನು ಬರೆಯುತ್ತಿರುತ್ತಾರೆ. ಇದೀಗ ಒಂದು ಸಿನಿಮಾದ ಕಥೆಯನ್ನು ಬರೀ 90 ನಿಮಿಷದಲ್ಲಿ ಬರೆದಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾಗೆ ಮನೋರಂಜನ್ ರವಿಚಂದ್ರನ್ ಹೀರೋ.
ಈ ಹಿಂದೆ ರವಿಚಂದ್ರನ್ ಅವರೇ ತಮ್ಮ ಮಗನನ್ನು ಲಾಂಚ್ ಮಾಡಬೇಕಾಗಿತ್ತು. ಆ ಸಿನಿಮಾಗೆ 'ಪ್ರೇಮಲೋಕದಲ್ಲಿ ರಣಧೀರ' ಎನ್ನುವ ಹೆಸರನ್ನು ಇಟ್ಟಿದ್ದರು. ಆದರೆ, ಆ ಸಿನಿಮಾದ ಚಿತ್ರೀಕರಣ ಶುರು ಆಗಲಿಲ್ಲ. ನಂತರ 'ಸಾಹೇಬ' ಸಿನಿಮಾದ ಮೂಲಕ ಜಯಣ್ಣ ಬ್ಯಾನರ್ ನಲ್ಲಿ ಮನೋರಂಜನ್ ಪರಿಚಯ ಆದರು.
35 ವರ್ಷದ ರವಿಚಂದ್ರನ್ ಕನಸಿನ ಸಿನಿಮಾ ಶುರು ಆಗ್ತಿದೆ
ಇದೀಗ ರವಿಚಂದ್ರನ್ ತಮ್ಮ ಮಗನಿಗೆ ಸಿನಿಮಾ ಮಾಡುವ ಸಮಯ ಬಂದಿದೆ. ಒಂದು ಕಥೆ ರವಿಚಂದ್ರನ್ ಮನಸ್ಸಿನಲ್ಲಿ ಯೋಚನೆ ಮಾಡುವ ಆಸೆ ಮಾಡುತ್ತಿತಂತೆ. ಅಕ್ಟೋಬರ್ 18 ರಂದು ಆ ಕಥೆ ಬರೆಯಲು ಕುಳಿತ ರವಿಮಾಮಾ 90 ನಿಮಿಷದಲ್ಲಿಯೇ ಮುಗಿಸಿದ್ದಾರೆ. ಮಗಳ ಹುಟ್ಟುಹಬ್ಬದ ದಿನ ಈ ಕೆಲಸ ಆಗಿದೆ ಎನ್ನುವುದು ಇನ್ನಷ್ಟು ಖುಷಿ ನೀಡುವ ವಿಷಯ.
ಅಂದಹಾಗೆ, ರವಿಚಂದ್ರನ್ ಸದ್ಯ, ರಾಜೇಂದ್ರ ಪೊನ್ನಪ್ಪ, ರವಿ ಬೊಪ್ಪಣ್ಣ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಆ ದೃಶ್ಯ' ಚಿತ್ರದ ಈ ವಾರ ಬಿಡುಗಡೆ ಆಗುತ್ತಿದೆ. ಇತ್ತ ಮನೋರಂಜನ್ 'ಪ್ರಾರಂಭ' ಚಿತ್ರದಲ್ಲಿ ತೊಡಗಿದ್ದಾರೆ.
ಡಾಕ್ಟರೇಟ್ ಪಡೆದ ರವಿಚಂದ್ರನ್: ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ ಎಂದ ಕ್ರೇಜಿ ಸ್ಟಾರ್
ಇಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಇಬ್ಬರ ಕಾಂಬಿನೇಷನ್ ಸಿನಿಮಾ ಯಾವಾಗ ಶುರು ಎನ್ನುವ ಕುತೂಹಲ ಮೂಡಿದೆ.