ಪುತ್ರನಿಗೆ ಕ್ರೇಜಿಸ್ಟಾರ್ ನಿರ್ದೇಶನ: 90 ನಿಮಿಷದಲ್ಲಿ ಸಿದ್ಧವಾದ ಕಥೆ
Recommended Video
ರವಿಚಂದ್ರನ್ ಹೊಸ ಹೊಸ ಕಥೆಗಳನ್ನು ಬರೆಯುತ್ತಿರುತ್ತಾರೆ. ಇದೀಗ ಒಂದು ಸಿನಿಮಾದ ಕಥೆಯನ್ನು ಬರೀ 90 ನಿಮಿಷದಲ್ಲಿ ಬರೆದಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾಗೆ ಮನೋರಂಜನ್ ರವಿಚಂದ್ರನ್ ಹೀರೋ.
ಈ ಹಿಂದೆ ರವಿಚಂದ್ರನ್ ಅವರೇ ತಮ್ಮ ಮಗನನ್ನು ಲಾಂಚ್ ಮಾಡಬೇಕಾಗಿತ್ತು. ಆ ಸಿನಿಮಾಗೆ 'ಪ್ರೇಮಲೋಕದಲ್ಲಿ ರಣಧೀರ' ಎನ್ನುವ ಹೆಸರನ್ನು ಇಟ್ಟಿದ್ದರು. ಆದರೆ, ಆ ಸಿನಿಮಾದ ಚಿತ್ರೀಕರಣ ಶುರು ಆಗಲಿಲ್ಲ. ನಂತರ 'ಸಾಹೇಬ' ಸಿನಿಮಾದ ಮೂಲಕ ಜಯಣ್ಣ ಬ್ಯಾನರ್ ನಲ್ಲಿ ಮನೋರಂಜನ್ ಪರಿಚಯ ಆದರು.
ಇದೀಗ ರವಿಚಂದ್ರನ್ ತಮ್ಮ ಮಗನಿಗೆ ಸಿನಿಮಾ ಮಾಡುವ ಸಮಯ ಬಂದಿದೆ. ಒಂದು ಕಥೆ ರವಿಚಂದ್ರನ್ ಮನಸ್ಸಿನಲ್ಲಿ ಯೋಚನೆ ಮಾಡುವ ಆಸೆ ಮಾಡುತ್ತಿತಂತೆ. ಅಕ್ಟೋಬರ್ 18 ರಂದು ಆ ಕಥೆ ಬರೆಯಲು ಕುಳಿತ ರವಿಮಾಮಾ 90 ನಿಮಿಷದಲ್ಲಿಯೇ ಮುಗಿಸಿದ್ದಾರೆ. ಮಗಳ ಹುಟ್ಟುಹಬ್ಬದ ದಿನ ಈ ಕೆಲಸ ಆಗಿದೆ ಎನ್ನುವುದು ಇನ್ನಷ್ಟು ಖುಷಿ ನೀಡುವ ವಿಷಯ.

ಅಂದಹಾಗೆ, ರವಿಚಂದ್ರನ್ ಸದ್ಯ, ರಾಜೇಂದ್ರ ಪೊನ್ನಪ್ಪ, ರವಿ ಬೊಪ್ಪಣ್ಣ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಆ ದೃಶ್ಯ' ಚಿತ್ರದ ಈ ವಾರ ಬಿಡುಗಡೆ ಆಗುತ್ತಿದೆ. ಇತ್ತ ಮನೋರಂಜನ್ 'ಪ್ರಾರಂಭ' ಚಿತ್ರದಲ್ಲಿ ತೊಡಗಿದ್ದಾರೆ.
ಇಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಇಬ್ಬರ ಕಾಂಬಿನೇಷನ್ ಸಿನಿಮಾ ಯಾವಾಗ ಶುರು ಎನ್ನುವ ಕುತೂಹಲ ಮೂಡಿದೆ.


Click it and Unblock the Notifications











