Don't Miss!
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂಜೀವ್ ಕುಲಕರ್ಣಿ ನಿಧನ: ಸಂತಾಪ ಸೂಚಿಸಿದ ರವಿಶಂಕರ್, ರಘು ರಾಮ್
ಹಿರಿಯ ನಿರೂಪಕ, ರಂಗಕರ್ಮಿ, ಕಿರುತೆರೆ ನಟ ಸಂಜೀವ್ ಕುಲಕರ್ಣಿ ನಿನ್ನೆ (ಜನವರಿ 25) ನಿಧನ ಹೊಂದಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ವಿಧಿವಶರಾಗಿದ್ದಾರೆ.
ಸಂಜೀವ್ (49) ನಿಧನಕ್ಕೆ ಅವರ ಕಲಾ ಜೀವನದ ಕೆಲವು ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ರಘು ರಾಮ್ ಹಾಗೂ ನಟ ರವಿಶಂಕರ್ ಗೌಡ ಕಂಬನಿ ಮಿಡಿದಿದ್ದಾರೆ.
ಹಿರಿಯ ನಿರೂಪಕ, ನಟ ಸಂಜೀವ ಕುಲಕರ್ಣಿ ಇನ್ನಿಲ್ಲ
''ಅಪ್ಪಟ ಕನ್ನಡದ ಪ್ರತಿಭೆ, ಅಜಾತಶತ್ರು, ಒಳ್ಳೆಯ ಗೆಳೆಯ.. ನೀವು ಬದುಕಬೇಕೆಂಬ ಉತ್ಕಟ ಆಸೆಯಿಂದ ಕನ್ನಡಿಗರು ಪ್ರಾರ್ಥನೆ ಮಾಡಿ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರೂ, ವಿಧಿಲಿಖಿತ ಮಾತ್ರ ಬದಲಾಗಲಿಲ್ಲ... ಹೋಗಿ ಬನ್ನಿ ಸಂಜೀವ್ ನಿಮ್ಮ ಆತ್ಮಕ್ಕೆ ರಾಯರು ಚಿರಶಾಂತಿ ನೀಡಲಿ.. ಗೆಳೆಯ ಸಂಜೀವ್ ಕುಲಕರ್ಣಿ ಇನ್ನಿಲ್ಲ..'' ಎಂದು ಟ್ವೀಟ್ ನಟ ರವಿಶಂಕರ್ ಗೌಡ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
''ತಾಯಿಯ ಒಡಲಿನಿಂದ ಬಂದ ಜೀವ ಈಗ ಭೂತಾಯಿಯ ಮಡಿಲಿಗೆ. ಮಿಸ್ ಯೂ ಸಂಜೀವ್ ಸರ್'' ಎಂದು ನಿರ್ದೇಶಕ ರಘು ರಾಮ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಸಂಜೀವ ಕುಲಕರ್ಣಿ ಅವರು ನಾಗಿಣಿ, ನಿಗೂಢ ರಾತ್ರಿ, ರಾಜರಾಣಿ, ಏಟು ಎದಿರೇಟು ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಅನೇಕ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದರು. ಅವರು ಕನ್ನಡ ಭಾಷೆ ಮಾತನಾಡುವ ಶೈಲಿ ಅಧ್ಬುತವಾಗಿತ್ತು.
ಕಳೆದ 15 ವರ್ಷಗಳಿಂದ ಅವರು ಕಾರ್ಡಿಯೋಮಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಮೃತರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿಆರ್ ಮಿಲ್ ಬಳಿಯ ಸ್ಮಶಾನದಲ್ಲಿ ಇಂದು (ಭಾನುವಾರ) ನಡೆಯಲಿದೆ.