Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಲ್ಲು ಅರ್ಜುನ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ
ಟಾಲಿವುಡ್ ನಲ್ಲಿ ಹೊಸ ಅಲೆ ಹುಟ್ಟಿಸಿದಂತಹ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್. ಸಾಕಷ್ಟು ಕೌಟುಂಬಿಕ ಕಥಾಹಂದರದ ಸಿನಿಮಾಗಳನ್ನು ಕೊಟ್ಟಂತಹ ಟಾಲಿವುಡ್ ಡೈರೆಕ್ಟರ್ ಇವರು. ಇದೀಗ ಹೊಸ ಕಥಾವಸ್ತುವಿನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ.
ತ್ರಿವಿಕ್ರಮ್ ಚಿತ್ರಗಳ ವಿಶೇಷತೆ ಎಂದರೆ, ಹೀರೋಗಳನ್ನು ಪ್ರೆಸೆಂಟ್ ಮಾಡೋ ರೀತಿ, ಕತ್ತಿಯ ಅಂಚಿನಂತಹ ಡೈಲಾಗ್ಸ್, ಭಿನ್ನ ಕಥೆ. ಅವರ ಸಿನಿಮಾಗಳನ್ನು ಕಾತುರದಿಂದ ಎದುರುನೋಡುವ ಪ್ರೇಕ್ಷಕ ವರ್ಗವೂ ಇದೆ. [ಉಪೇಂದ್ರ ಮಾನವೀಯತೆಯ ಮತ್ತೊಂದು ಮುಖ]
ವಿಶೇಷ ಎಂದರೆ ರಿಯಲ್ ಸ್ಟಾರ್ ಉಪೇಂದ್ರ ಅವರು ವಿಶೇಷ ಪಾತ್ರದಲ್ಲಿ ಈ ತೆಲುಗು ಚಿತ್ರದಲ್ಲಿ ಕಾಣಿಸಲಿದ್ದಾರೆ ಎಂಬುದು. ಉಪ್ಪಿ ಅವರದು ಯಾವ ರೀತಿಯ ಪಾತ್ರ ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಈ ಚಿತ್ರದಲ್ಲಿ ಅರ್ಜುನ್ ಅವರಿಗೆ ತಂದೆಯಾಗಿ ಬಿಗ್ ಬಿ ಅಭಿನಯಿಸಲಿದ್ದಾರೆ ಎಂಬುದು ಇನ್ನೊಂದು ವಿಶೇಷ.
ಇದಕ್ಕೂ ಮುನ್ನ ಮೋಹನ್ ಲಾಲ್ ಹಾಗೂ ಮಮ್ಮುಟ್ಟಿ ಅವರಿಗೂ ಬುಲಾವ್ ಹೋಗಿದೆ. ಅಲ್ಲು ಅರ್ಜುನ್ ಅವರಿಗೆ ಯಾರು ತಂದೆಯಾಗಿ ಕಾಣಿಸಲಿದ್ದಾರೆ ಎಂಬುದು ಇನ್ನೂ ಫೈನಲ್ ಆಗಿಲ್ಲ. ಈ ಚಿತ್ರಕ್ಕೆ ನಿತ್ಯಾ ಮೆನನ್, ಸ್ನೇಹಾ ಹಾಗೂ ಸಮಂತಾ ನಾಯಕಿಯರು. (ಏಜೆನ್ಸೀಸ್)