Don't Miss!
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- News ಬಿಜೆಪಿ ಭದ್ರಕೋಟೆಯಲ್ಲಿ ಶೋಭಾ ಕರಂದ್ಲಾಜೆಗೆ ಕಠಿಣ ಸವಾಲು!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಉಪೇಂದ್ರ ಇವ್ರನ್ನ ಅನಾಥರನ್ನಾಗಿ ಮಾಡಿದ್ರಾ?
ರಿಯಲ್ ಸ್ಟಾರ್ ಉಪೇಂದ್ರ ಬರ್ತಡೇ ಕಂಠೀರವ ಸ್ಟುಡಿಯೋದಲ್ಲಿ ಭರ್ಜರಿಯಾಗೇ ನಡೀತು. ಆದ್ರೆ ಪ್ರತೀವರ್ಷ ರಿಯಲ್ ಸ್ಟಾರ್ ಉಪ್ಪಿಯ ಹುಟ್ಟುಹಬ್ಬದಲ್ಲಿ ಲವಲವಿಕೆಯಿಂದ ಓಡಾಡ್ತಾ ಉಪ್ಪಿಯ ಬಾಡಿಗಾರ್ಡ್ ತರಹಾ ಸದಾ ಜೊತೆಗಿರ್ತಿದ್ದ ವ್ಯಕ್ತಿಯೊಬ್ರು ಈ ಬಾರಿ ಉಪ್ಪಿ ಜೊತೆ ಇರ್ಲಿಲ್ಲ.
ಅವರೇ ಹೆಚ್ ಟುಓ ಚಿತ್ರದ ನಿರ್ದೇಶಕ ಕಮ್ ಉಪ್ಪಿಯ ಮ್ಯಾನೇಜರ್ ಆಗಿದ್ದ ಲೋಕನಾಥ್. ಲೋಕನಾಥ್ ಈಗ ಚೆನ್ನೈನಲ್ಲೇ ಸೆಟ್ಲ್ ಆಗಿದ್ದಾರಂತೆ. ಅಲ್ಲಿ ಅವರೊಂದು ತಮಿಳು ಸಿನಿಮಾಗೆ ಸ್ಕ್ರಿಪ್ಟ್ ಮಾಡೋದ್ರಲ್ಲಿ ಬಿಜಿಯಾಗಿದ್ದಾರೆ.
ಅನಾಥರು ನಂತರ ಸಾಧು ಉಪ್ಪಿಗೆ ಮತ್ತೊಂದು ಸಿನಿಮಾ ಮಾಡೋಕೆ ರೆಡಿಯಾದ್ರು. ಆದರೆ ಉಪ್ಪಿಯ ಒಂದು ಸಿನಿಮಾಗಾಗಿ 11 ವರ್ಷ ಕಾದಿದ್ದ ನನ್ನನ್ನ ಅನಾಥನನ್ನಾಗಿ ಮಾಡಿದ್ರು ಅನ್ನೋ ನೋವಿಂದ ಲೋಕನಾಥ್ ವಿದಾಯ ಹೇಳಿದ್ದಾರೆ. ಆದ್ರೆ ನನ್ನ ನಿನ್ನ ನಡುವೆ ಏನಿಲ್ಲ ಅಂತ ತೋರಿಸಿಕೊಳ್ಳೋಕೆ ಉಪ್ಪಿ ಬರ್ತಡೇಗೆ ಬಂದು ಕಾಣಿಸಿಕೊಂಡ್ರು.
ಈಗ ಉಪ್ಪಿಯ ಮ್ಯಾನೇಜರ್ ಬದ್ಲಾಗಿದ್ದಾರೆ. ಶ್ರೀರಾಮ್ ಅನ್ನೋ ಹೊಸ ಮ್ಯಾನೇಜರ್ ಉಪ್ಪಿಯ ಎಲ್ಲ ಕಾರ್ಯಕ್ರಮಗಳನ್ನ ನೋಡಿಕೊಳ್ತಿದ್ದಾರೆ. ಉಪ್ಪಿ ಏನೇ ಮಾಡಿದ್ರೂ ಬುದ್ಧಿವಂತ ತಾನೇ. ಉಪ್ಪಿ ಸಾಮಾನ್ಯರ ತರಹ ಯೋಚ್ನೆ ಮಾಡಲ್ಲ. ಸೋ ಉಪ್ಪಿ ಮಾಡಿದ್ರಲ್ಲಿ ಅರ್ಥವಿರುತ್ತೆ ಅನ್ನೋದು ಗಾಂಧಿನಗರದ ಲೆಕ್ಕಾಚಾರ.