twitter
    For Quick Alerts
    ALLOW NOTIFICATIONS  
    For Daily Alerts

    ಲಾಕ್ ಡೌನ್ ನಲ್ಲಿ ಸಾವಯವ ಕೃಷಿ ಮಾಡಿ ತೋರಿಸಿದ ನಟ ಉಪೇಂದ್ರ

    |

    ರಿಯಲ್ ಸ್ಟಾರ್ ಉಪೇಂದ್ರ ಲಾಕ್ ಡೌನ್ ಅವದಿಯಲ್ಲಿ ಸಾವಯವ ಕೃಷಿ ಮಾಡಿ ತೋರಿಸಿದ್ದಾರೆ. ಪ್ರಜಾಕೀಯ, ಸಿನಿಮಾ ಅಂತ ಬ್ಯುಸಿ ಇರುವ ಉಪ್ಪಿ ಇದರ ನಡುವೆಯೂ ಕೃಷಿಕನಾಗಿ ಹೊಲದಲ್ಲಿ ಕೆಲಸ ಮಾಡಿ ತರಕಾರಿಗಳನ್ನು ಬೆಳೆದು ತೋರಿಸಿದ್ದಾರೆ.

    ಭಾರತದಲ್ಲಿ ಲಾಕ್ ಡೌನ್ ಘೋಷಿಸುತ್ತಿದ್ದಂತೆ ಎಲ್ಲರೂ ಮನೆಯಲ್ಲಿಯೇ ಕಾಲಕಳೆಯಬೇಕಾಗಿತ್ತು. ಆದರೆ ಕೃಷಿ ಚಟುವಟಿಕೆಗೆ ಯಾವುದೆ ನಿರ್ಬಂಧವಿರಲಿಲ್ಲ. ಈ ಸಮಯವನ್ನುಉಪಯೋಗಿಸಿಕೊಂಡ ಉಪೇಂದ್ರ ಕೃಷಿ ಮಾಡಲು ಪ್ರಾರಂಭಿಸಿದ್ದರು. ಮೈಸೂರಿ ರಸ್ತೆಯಲ್ಲಿರುವ ರಾಮೋಹಳ್ಳಿಯಲ್ಲಿರುವ ಅವರ ಜಮೀನಿನಲ್ಲಿ ಉಪ್ಪಿ ತರಕಾರಿ ಗಿಡಗಳನ್ನು ಬೆಳೆದಿದ್ದರು. ಈಗ ಗಿಡಗಳು ಫಸಲು ನೀಡುತ್ತಿವೆ. ವಿಡಿಯೋವನ್ನು ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ರೈತನಾದ ನಟ ಉಪೇಂದ್ರ: ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ ರಿಯಲ್ ಸ್ಟಾರ್ರೈತನಾದ ನಟ ಉಪೇಂದ್ರ: ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ ರಿಯಲ್ ಸ್ಟಾರ್

    ಉಪ್ಪಿ ಜಮೀನಿನಲ್ಲಿ ಬೆಳೆಯುವ ಬೆಳೆ

    ಉಪ್ಪಿ ಜಮೀನಿನಲ್ಲಿ ಬೆಳೆಯುವ ಬೆಳೆ

    ಉಪೇಂದ್ರ ತನ್ನ ಜಮೀನಿನಲ್ಲಿ ಟೊಮ್ಯಾಟೋ, ಬಾಳೆ, ಬದನೆ ಮತ್ತು ಹೂ ಸೇರಿದ್ದಂತೆ ಸಾಕಷ್ಟು ತರಕಾರಿ ಗಿಡಗಳನ್ನು ಬೆಳೆಸಿದ್ದಾರೆ. ಸಾವಯುವ ಕೃಷಿ ಮಾದರಿಯಲ್ಲಿ ನಾಟಿ ಮಾಡಿದ್ದಾರೆ. ಉಪ್ಪಿ ಜಮೀನಿನಲ್ಲಿ ಹಲವು ಬಗೆಯ ಹಣ್ಣಿನ ಮರಗಳು, ನೆರಳು ನೀಡುವ ಮರಗಳನ್ನು ಬೆಳೆಸಿದ್ದಾರೆ.

    ಸದ್ಯದಲ್ಲೇ 'ಹೋಮ್ ಮಿನಿಸ್ಟರ್' ಆಗಲಿದ್ದಾರೆ ಉಪೇಂದ್ರ: ಅಚ್ಚರಿ ಎನಿಸಿದರು ನಿಜಸದ್ಯದಲ್ಲೇ 'ಹೋಮ್ ಮಿನಿಸ್ಟರ್' ಆಗಲಿದ್ದಾರೆ ಉಪೇಂದ್ರ: ಅಚ್ಚರಿ ಎನಿಸಿದರು ನಿಜ

    ತರಕಾರಿ ಬೆಳೆದು ತೋರಿಸಿದ ಉಪ್ಪಿ

    ತರಕಾರಿ ಬೆಳೆದು ತೋರಿಸಿದ ಉಪ್ಪಿ

    ಕಳೆದ ಎರಡೂವರೆ ತಿಂಗಳಲ್ಲಿ ಉಪೇಂದ್ರ ಕೃಷಿಯಲ್ಲಿ ತೊಡಗಿಕೊಂಡಿದ್ದ ಉಪ್ಪಿ ಈ ಅವದಿಯಲ್ಲಿ ಉತ್ತಮವಾದ ಬೆಳೆತೆಗೆದಿದ್ದಾರೆ. ಅದೂ ಸಾವಯವ ಪದ್ಧತಿ ಮೂಲಕ ಎನ್ನುವುದು ವಿಶೇಷ. ಬೆಳೆದ ಬೆಳೆಯನ್ನು ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಸಾವಯವ ಕೃಷಿಗೆ ಅಭಿಮಾನಿಗಳು ಫಿದಾ

    ಸಾವಯವ ಕೃಷಿಗೆ ಅಭಿಮಾನಿಗಳು ಫಿದಾ

    ಕಡಿಮೆ ಅಡಿಮೆ ವೆಚ್ಚದಲ್ಲಿ ಮಾಡಬಹುದಾದ ನೈಸರ್ಗಿಕ ಕೃಷಿ ಎಂದು ಹೇಳಿದ್ದಾರೆ. "ಚೆಂಡು ಹೂ, ಸೌತೆಕಾಯಿ, ಬದನೆಕಾಯಿ ಅದ್ಭುತವಾಗಿವೆ ನೋಡಿ. ಕ್ರಿಮಿನಾಶಕ, ರಸಗೊಬ್ಬರವನ್ನು ಬಳಕೆ ಮಾಡಿಲ್ಲ. ಹುಳ ಬೀಳಲ್ಲ ಅಂತಲ್ಲ, ಶೇ 5ರಷ್ಟು ಹುಳು ಬೀಳುತ್ತೆ. ಆದರೆ ನಮ್ಮ ಜೊತೆ ಅವು ಬದುಕಬೇಕಲ್ಲವೆ. ರಾಸಾಯನಿಕ ಬಳಸದೆ ಬೆಳೆದು ತೋರಿಸಬೇಕೆಂದು ಕೃಷಿ ಮಾಡಿದೆ" ಎಂದಿದ್ದಾರೆ.

    ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರುರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು

    ಉಪೇಂದ್ರ ಸಿನಿಮಾ

    ಉಪೇಂದ್ರ ಸಿನಿಮಾ

    ಉಪೇಂದ್ರ ಸದ್ಯ ಕಬ್ಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಉಪ್ಪಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಉಪ್ಪಿ ಅಭಿನಯದ ಹೋಮ್ ಮಿನಿಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ. ಸದ್ಯ ಕೊರೊನಾ ಲಾಕ್ ಡೌನ್ ಹಿನ್ನಲೆ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ.

    English summary
    Real star Upendra Organic farming amid lockdown. He is working in his Farm.
    Monday, June 15, 2020, 8:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X