Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುರುಘಾಮಠಕ್ಕೆ ದರ್ಶನ್-ರಾಕ್ ಲೈನ್ ಭೇಟಿ ಹಿಂದೆ ಬಲವಾದ ಕಾರಣ.!
ಚಿತ್ರದುರ್ಗದ ಮುರುಘಾಮಠಕ್ಕೆ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದರು. ಮುರುಘಾಮಠದಲ್ಲಿ ನಡೆಯುತ್ತಿರುವ 'ಶರಣ ಸಂಸ್ಕೃತಿ ಉತ್ಸವ'ಕ್ಕೆ ಡಿ ಬಾಸ್ ಚಾಲನೆ ನೀಡಿದ್ರು. ಇದು ಸಹಜವಾಗಿ ಹಲವು ಕುತೂಹಲಗಳಿಗೆ ಕಾರಣವಾಗಿದೆ.
ಯಾಕಂದ್ರೆ, 'ಶರಣ ಸಂಸ್ಕೃತಿ ಉತ್ಸವ' ವೇದಿಕೆಯಲ್ಲಿ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಾಹಿತಿ, ಬರಹಗಾರ ಬಿಎಲ್ ವೇಣು, ಹಿರಿಯ ನಟ ಶ್ರೀನಿವಾಸ ಮೂರ್ತಿ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದು ಭಾರಿ ಕುತೂಹಲ ಮೂಡಿಸಿದೆ.
ದರ್ಶನ್-ಸುದೀಪ್ ಸುಮ್ಮನಿದ್ರೂ 'ಜಾತಿವಾದಿ'ಗಳು ಸುಮ್ಮನಾಗುತ್ತಿಲ್ಲ.!
ಇದನ್ನ ಗಮನಿಸಿದ್ರೆ ಮೇಲ್ನೋಟಕ್ಕೆ ಇದು ಶರಣ ಸಂಸ್ಕೃತಿ ಉತ್ಸವ ಎನಿಸಿದ್ರೂ ಮದಕರಿ ನಾಯಕ ಚಿತ್ರದ ಕಾರ್ಯಕ್ರಮ ಎನ್ನುವಂತಿತ್ತು. ಅಷ್ಟಕ್ಕೂ, ದರ್ಶನ್ ಮತ್ತು ತಂಡ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದೇಕೆ.? ಈ ಭೇಟಿ ಹಿಂದೆ ಇರುವ ನಿಜವಾದ ಕಾರಣವೇನು.? ಮುಂದೆ ಓದಿ.....
'ಮದಕರಿ' ಚಿತ್ರಕ್ಕೆ ಅಧಿಕೃತ ಚಾಲನೆ
ಮುರುಘಾಮಠದಿಂದ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಜೋಡಿಯ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯ್ತಾ ಎಂಬ ಕುತೂಹಲ ಕಾಡುತ್ತಿದೆ. ಯಾಕಂದ್ರೆ, ಈ ಸಿನಿಮಾ ಮಾಡಬೇಕೆಂದುಕೊಂಡಿರುವ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಚಿತ್ರದುರ್ಗದ ಪಾಳೇಗಾರರ ಕುರಿತು ಸಿನಿಮಾ ಇದಾಗಿದ್ದರಿಂದ ಚಿತ್ರದುರ್ಗದಿಂದಲೇ ಆರಂಭಿಸುವ ಉದ್ದೇಶದಿಂದ ಎಲ್ಲರೂ ಒಟ್ಟಿಗೆ ಆಗಮಿಸಿರಬಹುದು.
ಸುದೀಪ್-ದರ್ಶನ್ ಗೂ ಮೊದಲೇ ಈ ನಟ 'ಮದಕರಿ ನಾಯಕ' ಆಗಬೇಕಿತ್ತಂತೆ.!
ಮಠಾಧೀಶಾರ ಓಲೈಕೆ
ಅಂದ್ಹಾಗೆ, ಸುದೀಪ್ ಮದಕರಿ ಸಿನಿಮಾ ಮಾಡಲಿ ಎಂದು ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ಬಹಿರಂಗವಾಗಿ ಒತ್ತಾಯ ಮಾಡಿದ್ದರು. ಇದರಿಂದ ದರ್ಶನ್ ಸಿನಿಮಾಗೆ ಒಂದು ವಿರೋಧ ಕೂಡ ವ್ಯಕ್ತವಾಗಿತ್ತು. ಮುಂದಿನ ದಿನಗಳಲ್ಲೂ ಈ ಚಿತ್ರಕ್ಕೆ ವಿವಾದ ಅಂಟಿಕೊಳ್ಳಬಹುದು ಎಂಬ ಮಾತಿದೆ. ಸುದೀಪ್ ಸಿನಿಮಾಗೆ ಒಂದು ಸಮುದಾಯ ಬೆಂಬಲ ನೀಡುತ್ತಿದೆ. ಹೀಗಾಗಿ, ಸ್ವಾಮೀಜಿ ಮತ್ತು ಮಠಾಧೀಶರ ಆಶೀರ್ವಾದ ದರ್ಶನ್ ಸಿನಿಮಾದ ಮೇಲೂ ಇರಲಿ ಎಂಬ ಕಾರಣವಿರಬಹುದು.
'ಮದಕರಿ ನಾಯಕ' ಯಾರಾಗಬೇಕು, ಜನಾಭಿಮತ ಏನು ಹೇಳುತ್ತಿದೆ.?
ಚಿತ್ರದುರ್ಗದ ಅಭಿಮಾನಿಗಳ ಆಶೀರ್ವಾದ
'ಮದಕರಿ ನಾಯಕ' ಸಿನಿಮಾ ಮಾಡುತ್ತಿರುವುದರಿಂದ ಚಿತ್ರದುರ್ಗದ ಜನರ ಆಶೀರ್ವಾದ ಮತ್ತು ಅವರ ಬೆಂಬಲ ಬೇಕೇ ಬೇಕು. ಹಾಗಾಗಿ, ಚಿತ್ರದುರ್ಗಕ್ಕೆ ಭೇಟಿ ನೀಡುವುದರಿಂದ ಅಲ್ಲಿನ ಜನ ಮತ್ತ ದರ್ಶನ್ ಅಭಿಮಾನಿಗಳನ್ನ ಆಕರ್ಷಿಸುವುದು ಒಂದು ಉದ್ದೇಶವಿರಬಹುದು.
ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಇವರಾಗ್ಬೇಕಂತೆ
ಸುದೀಪ್ 'ಮದಕರಿ'ಗೆ ಪ್ರತಿ ಸವಾಲು
ಸುದೀಪ್ ಅಭಿನಯಿಸಬೇಕೆಂದುಕೊಂಡಿರುವ ಮದಕರಿ ಚಿತ್ರ ಸದ್ದಿಲ್ಲದೇ ಆರಂಭವಾಗಿದೆ. ಪ್ರಿ-ಪ್ರೊಡಕ್ಷನ್ ಮಾಡ್ತಿರುವುದಾಗಿ ಹೇಳಿಕೊಂಡಿದ್ದ ಸುದೀಪ್ ಫೋಟೋಶೂಟ್ ಮುಗಿಸಿದ್ದಾರೆ ಎನ್ನಲಾಗುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ, ನಾವು ಕೂಡ ಸಿನಿಮಾ ಆರಂಭಿಸಿದ್ದೇವೆ ಎಂದು ತೋರಿಸಲು ಈ ಭೇಟಿ ಇರಬಹುದು.
ಮದಕರಿ ವೇಷ ತೊಟ್ಟು ನಿಂತ ಕಿಚ್ಚ ಸುದೀಪ್