ದಿಢೀರ್ ಐಟಿ ದಾಳಿಗೆ ಕಾರಣವಾದ ಪ್ರಮುಖ ಅಂಶಗಳು
ಸ್ಯಾಂಡಲ್ ವುಡ್ ನಟ ಹಾಗೂ ನಿರ್ಮಾಪಕರ ಮನೆಗಳ ಮೇಲೆ ಇಂದು ಐಟಿ ದಾಳಿ ನಡೆಯುತ್ತಿದೆ. ಈ ಬೃಹತ್ ದಾಳಿಗೆ ಕೆಲವು ಕಾರಣಗಳು ಈ ಕೆಳಗಿನಂತಿವೆ.
* ಅತಿಯಾದ ಬ್ಲಾಕ್ ಮನಿ ಸಿನಿಮಾಗಳಲ್ಲಿ ಹೂಡಿಕೆ ಅನುಮಾನ
* ಮನರಂಜನಾ ತೆರಿಗೆ ಸಡಿಲಿಕೆಯ ನಿಯಾಮವಳಿಗಳ ದುರ್ಬಳಕೆ
* ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲಿ ಮನರಂಜನಾ ತೆರಿಗೆ
* ಸಡಿಲಿಕೆ ಇದೆ ಒಟ್ಟಾರೆ ಸಿನಿಮಾದ ಆದಾಯದಲ್ಲಿ ಪಾಲು ಪಡೆದುಕೊಳ್ಳುವ ನಟರು ಕೇವಲ ಸಂಭಾವನೆಗೆ ಮಾತ್ರ ತೆರಿಗೆ ಪಾವತಿ

* ಜಿ ಎಸ್ ಟಿ ಹೊಸ ನಿಯಾಮಾವಳಿಗಳ ಪ್ರಕಾರ 20 ಲಕ್ಷಕ್ಕೂ ಹೆಚ್ಚು ಆದಾಯ ಪಡೆದುಕೊಳ್ಳುವ ಕಲಾವಿದರು ಶೇಕಡಾ 28 ರಷ್ಟು ತೆರಿಗೆ ಪಾವತಿ ಮಾಡಬೇಕು.
* ಸಂಭಾವನೆಯನ್ನು ನಿಯಮಿತವಾಗಿ ಪಡೆದು ಸಿನಿಮಾದ ಒಟ್ಟು ಆದಾಯದಲ್ಲಿ ಇಂತಿಷ್ಟು ಅಂತಾ ಪಡೆದುಕೊಳ್ಳುವ ನಟರಿಂದ ತೆರಿಗೆ ವಂಚನೆ.
* ಬೃಹತ್ ಬಜೆಟ್ ಸಿನಿಮಾಗಳು ನಿರ್ಮಾಣವಾಗ್ತಾ ಇದ್ರು ಏರಿಕೆಯಾಗದ ತೆರಿಗೆ ಪಾವತಿ.
ಇದೇ ಅಂಶಗಳನ್ನ ಆಧಾರವಾಗಿಟ್ಟುಕೊಂಡು ದಾಳಿಗೆ ಐಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು, ನಿನ್ನೆ ಕೋರ್ಟ್ ನಲ್ಲಿ ಇದೇ ಅಂಶಗಳನ್ನ ಪ್ರಸ್ಥಾಪಿಸಿ ದಾಳಿಗೆ ಸರ್ಚ್ ವಾರೆಂಟ್ ಪಡೆದಿದ್ದಾರೆ ಎಂಬ ಮಾಹಿತಿ ಇದೆ.


Click it and Unblock the Notifications











