Don't Miss!
- News Namma Metro Pink Line: ಮೆಟ್ರೋ ಸುರಂಗ ಕಾಮಗಾರಿ ಬಹುತೇಕ ಪೂರ್ಣ: ಯೋಜನೆಯ ಅಪ್ಡೇಟ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಹಲ್ಲೆಗೆ ಅಸಲಿ ಕಾರಣ ಏನು.?
Recommended Video
ನಡೆಯ ಬಾರದ ಘಟನೆಯೊಂದು ಮೊನ್ನೆ ನಡೆದು ಹೋಗಿದೆ. ಜಿಮ್ ಟ್ರೈನರ್ ಮಾರುತಿ ಗೌಡ ಎಂಬುವರ ಮೇಲೆ ದುನಿಯಾ ವಿಜಯ್ ಮತ್ತು ತಂಡ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಪಾಲಾಗಿದ್ದಾರೆ.
ವಸಂತನಗರದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಮಾರುತಿ ಗೌಡ ಹಾಗೂ ದುನಿಯಾ ವಿಜಯ್ ನಡುವೆ ಮಾತಿನ ಚಕಮಕಿ ನಡೆದಿದೆ. ಅದಾದ ಬಳಿಕ ಮಾರುತಿ ಗೌಡ ರನ್ನ ಕಾರಿನಲ್ಲಿ ಕರೆದುಕೊಂಡು ಹೋದ ದುನಿಯಾ ವಿಜಯ್ ಒಂದುವರೆ ಗಂಟೆ ಕಾಲ ಸುತ್ತಾಡಿಸಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಷ್ಟಕ್ಕೂ, ಮಾರುತಿ ಗೌಡ ಮೇಲೆ ದುನಿಯಾ ವಿಜಯ್ ಗೆ ಯಾಕೆ ಅಷ್ಟೊಂದು ಸಿಟ್ಟು.? ಪಾನಿಪೂರಿ ಕಿಟ್ಟಿ ಹಾಗೂ ದುನಿಯಾ ವಿಜಯ್ ಮಧ್ಯೆ ಇರುವ ವೈಮನಸ್ಯ ಎಂಥದ್ದು.? ರಾತ್ರೋರಾತ್ರಿ ಗಲಾಟೆ ನಡೆದದ್ದು ಯಾಕೆ.? ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ, ಓದಿರಿ...
ದುನಿಯಾ ವಿಜಯ್-ಪಾನಿಪೂರಿ ಕಿಟ್ಟಿ ಮಧ್ಯೆ ಅಷ್ಟಕಷ್ಟೆ
ಒಂದ್ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದ ದುನಿಯಾ ವಿಜಯ್ ಹಾಗೂ ಪಾನಿಪೂರಿ ಕಿಟ್ಟಿ ಮಧ್ಯೆ ಕೆಲ ದಿನಗಳಿಂದ ಎಲ್ಲವೂ ಸರಿ ಇರಲಿಲ್ಲ. ಇಬ್ಬರ ನಡುವೆ ಮಾತು ಕಥೆ ಇರಲಿಲ್ಲ. ಬೂದಿ ಮುಚ್ಚಿದ ಕೆಂಡದಂತೆ ಇದ್ದ ಈ ಸಿಟ್ಟು ಮಾರುತಿ ಗೌಡ ಹಲ್ಲೆ ಮೂಲಕ ಭುಗಿಲೆದ್ದಿದೆ.
'ಮಾಸ್ತಿ ಗುಡಿ' ದುರಂತ ಸಂಭವಿಸಿದ್ಮೇಲೆ ದುನಿಯಾ ವಿಜಯ್, ಪಾನಿಪೂರಿ ಕಿಟ್ಟಿ ಸ್ನೇಹದಲ್ಲಿ ಬಿರುಕು.!
ಬೇರೆ ಜಿಮ್ ಟ್ರೈನರ್ ಮೊರೆ ಹೋಗಿದ್ದ ದುನಿಯಾ ವಿಜಯ್
ಪಾನಿಪೂರಿ ಕಿಟ್ಟಿ ಗರಡಿಯಲ್ಲೇ ದುನಿಯಾ ವಿಜಯ್ ಪಳಗಿದವರು. ಇಂತಿಪ್ಪ ದುನಿಯಾ ವಿಜಯ್ ಇದೀಗ ಬೇರೆ ಜಿಮ್ ಟ್ರೈನರ್ ಮೊರೆ ಹೋಗಿದ್ದಾರೆ. ಇದರಿಂದ ಇಬ್ಬರ ಮಧ್ಯೆ ದೊಡ್ಡ ಕಂದಕ ಸೃಷ್ಟಿ ಆಯ್ತು ಎನ್ನಲಾಗಿದೆ.
ದುನಿಯಾ ವಿಜಿಗೆ ಸಿಕ್ಕಿಲ್ಲ ಬೇಲ್, ಪರಪ್ಪನ ಅಗ್ರಹಾರಕ್ಕೆ ಹೊರಟ 'ಕರಿಚಿರತೆ'
ಪಾನಿಪೂರಿ ಕಿಟ್ಟಿ-ಪ್ರಸಾದ್ ನಡುವಿನ ದ್ವೇಷ
ಸದ್ಯ ದುನಿಯಾ ವಿಜಯ್ ಗೆ ಜಿಮ್ ಟ್ರೈನಿಂಗ್ ಮಾಡ್ತಿರೋದು ಪ್ರಸಾದ್ ಎಂಬುವರು. ಪ್ರಸಾದ್ ಹಾಗೂ ಪಾನಿಪೂರಿ ಕಿಟ್ಟಿ ನಡುವೆ ಹಳೇ ದ್ವೇಷ ಇದೆ. ತಮ್ಮ ಬಗ್ಗೆ ದುನಿಯಾ ವಿಜಯ್ ಕಿವಿಗೆ ಪುಂಗಿ ಊದಿ ಹೀಗೆಲ್ಲ ಪ್ರಸಾದ್ ಗಲಾಟೆ ಮಾಡಿಸುತ್ತಿದ್ದಾನೆ ಅನ್ನೋದು ಪಾನಿಪೂರಿ ಕಿಟ್ಟಿ ಆರೋಪ.
ಒಂದಲ್ಲ ಎರಡಲ್ಲ.. ದುನಿಯಾ ವಿಜಯ್ ಕಿರಿಕ್ ಗಳ ಪಟ್ಟಿ ನೋಡಿ
ಮಾರುತಿಯಿಂದ ಸಾಮ್ರಾಟ್ ಗೆ ನಿಂದನೆ
ಅಂಬೇಡ್ಕರ್ ಭವನದಲ್ಲಿ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಗೆ ಮಾರುತಿ ಗೌಡ ನಿಂದಿಸಿದರು. ಅದಕ್ಕೆ ದುನಿಯಾ ವಿಜಯ್ ಗೆ ಕೋಪ ಬಂತು ಅಂತ ಹೇಳುವವರೂ ಇದ್ದಾರೆ.
ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?
ಅಂದು ನಡೆದಿದ್ದೇನು.?
ವಸಂತನಗರದಲ್ಲಿ ಇರುವ ಅಂಬೇಡ್ಕರ್ ಭವನದಲ್ಲಿ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ನಡೆಯುತ್ತಿತ್ತು. ಸ್ಪರ್ಧೆಯಲ್ಲಿ ಮಾರುತಿ ಗೌಡ ಜಿಮ್ ನವರೂ ಭಾಗವಹಿಸಿದ್ದರಿಂದ, ಅಲ್ಲಿಗೆ ಮಾರುತಿ ಗೌಡ ಬಂದಿದ್ದರು. ಇದೇ ಸ್ಪರ್ಧೆಗೆ ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಎಂಟ್ರಿಕೊಟ್ಟರು. ಸ್ಪರ್ಧೆ ಮುಗಿದ ಮೇಲೆ ದುನಿಯಾ ವಿಜಯ್ ಹಾಗೂ ಮಾರುತಿ ಗೌಡ ನಡುವಿನ ಮಾತಿನ ಚಕಮಕಿ ನಡೆದಿದೆ. ಬಳಿಕ ಮಾರುತಿ ಗೌಡರನ್ನ ಕಾರಿನಲ್ಲಿ ದುನಿಯಾ ವಿಜಯ್ ಕರೆದುಕೊಂಡು ಹೋಗಿದ್ದಾರೆ.
ದೂರು ನೀಡಿದ ಪಾನಿಪೂರಿ ಕಿಟ್ಟಿ
ಘಟನೆ ಗೊತ್ತಾಗುತ್ತಿದ್ದಂತೆಯೇ, ದುನಿಯಾ ವಿಜಯ್ ವಿರುದ್ಧ ಕಿಡ್ನ್ಯಾಪ್ ಹಾಗೂ ಹಲ್ಲೆ ಪ್ರಕರಣವನ್ನ ಪಾನಿಪೂರಿ ಕಿಟ್ಟಿ ದಾಖಲಿಸಿದ್ದಾರೆ. ಪೊಲೀಸ್ ಸ್ಟೇಷನ್ ಗೆ ಮಾರುತಿ ಗೌಡರನ್ನ ಕರೆತಂದು ದುನಿಯಾ ವಿಜಯ್ ತಪ್ಪೊಪ್ಪಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ದುನಿಯಾ ವಿಜಯ್, ಟ್ರೈನರ್ ಪ್ರಸಾದ್, ಡ್ರೈವರ್ ಪ್ರಸಾದ್ ಮತ್ತು ಮಣಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.